ಆ್ಯಪ್ನಗರ

ಪರಿಷತ್ ಕೋಲಾಹಲ: ಶೀಘ್ರದಲ್ಲೇ ಮಧ್ಯಂತರ ವರದಿ, ಗುರುವಾರ ಸಮಿತಿಯಿಂದ ಕರಡು ಪರಿಶೀಲನಾ ಸಭೆ

ಡಿಸೆಂಬರ್ 15 ರಂದು ವಿಧಾನಪರಿಷತ್‌ನಲ್ಲಿ ನಡೆದ ಘಟನೆಯ ಕುರಿತಾದ ಸದನ ಸಮಿತಿ ಮಧ್ಯಂತರ ವರದಿ ಶೀಘ್ರದಲ್ಲಿ ಮಂಡನೆಯಾಗುವ ಸಾಧ್ಯತೆ ಇದೆ. ಈ ಕುರಿತಾದ ಕರಡು ಪರಿಶೀಲನೆ ನಡೆಸಲು ಗುರುವಾರ ಸಮಿತಿ ಸಭೆ ನಡೆಯಲಿದೆ.

Vijaya Karnataka Web 19 Jan 2021, 2:23 pm
ಬೆಂಗಳೂರು: ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ವಿಚಾರವಾಗಿ ಡಿಸೆಂಬರ್ 15 ರಂದು ವಿಧಾನಪರಿಷತ್‌ನಲ್ಲಿ ನಡೆದ ಕೋಲಾಹಲ ವಿಚಾರವಾಗಿ ತನಿಖೆ ನಡೆಸಲು ರಚನೆಯಾಗಿರುವ ಸದನ ಸಮಿತಿ ಶೀಘ್ರದಲ್ಲೇ ಮಧ್ಯಂತರ ವರದಿ ನೀಡುವ ಸಾಧ್ಯತೆ ಇದೆ. ಈಗಾಗಲೇ ಎರಡು ಸುತ್ತಿನ ಸಭೆಗಳು ನಡೆದಿತ್ತು. ಗುರುವಾರ ಮಧ್ಯಂತರ ವರದಿಯ ಕರಡು ಪರಿಶೀಲನಾ ಸಭೆ ನಡೆಯಲಿದೆ.
Vijaya Karnataka Web council


ಡಿಸೆಂಬರ್ 15 ರಂದು ವಿಧಾನಪರಿಷತ್‌ನಲ್ಲಿ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯ ವಿಚಾರವಾಗಿ ಗದ್ದಲ ಉಂಟಾಗಿತ್ತು. ಈ ಸಂದರ್ಭದಲ್ಲಿ ಸದನದ ಸಂಪ್ರದಾಯ ಮೀರಿ ಬೆಲ್‌ ಮುಕ್ತಾಯಗೊಳ್ಳುವ ಮೊದಲು ಉಪಸಭಾಪತಿಯಾಗಿದ್ದ ಧರ್ಮೇಗೌಡ ಅವರು ಸಭಾಪತಿ ಪೀಠದಲ್ಲಿ ಕುಳಿತುಕೊಂಡಿದ್ದರು.

ಶಾಕಿಂಗ್‌ ನ್ಯೂಸ್‌..! ವಿಧಾನ ಪರಿಷತ್‌ ಉಪಸಭಾಪತಿ ಎಸ್‌ಎಲ್‌ ಧರ್ಮೇಗೌಡ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ..!

ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು ಉಪಸಭಾಪತಿಯನ್ನು ಬಲವಂತದಿಂದ ಸಭಾಪತಿ ಪೀಠದಿಂದ ಎಬ್ಬಿಸಿದ್ದರು. ಈ ಸಂದರ್ಭದಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್‌ ಸದಸ್ಯರ ನಡುವೆ ಜಟಾಪಟಿ ನಡೆದಿತ್ತು. ಸಭಾಪತಿಯ ಪೀಠಕ್ಕೂ ಹಾನಿ ಉಂಟು ಮಾಡಲಾಗಿತ್ತು.

ಪರಿಷತ್ ಗಲಭೆಗೆ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸಭಾಪತಿ ಪ್ರತಾಪ ಚಂದ್ರ ಶೆಟ್ಟಿ ಅವರು ಘಟನೆಯ ತನಿಖೆ ನಡೆಸುವ ನಿಟ್ಟಿನಲ್ಲಿ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಅಧ್ಯಕ್ಷತೆಯಲ್ಲಿ ಸದನ ಸಮಿತಿ ರಚನೆ ಮಾಡಿದ್ದರು.

ಈ ಸಮಿತಿಯಲ್ಲಿ ಬಿಕೆ ಹರಿಪ್ರಸಾದ್, ಹೆಚ್‌ ವಿಶ್ವನಾಥ್, ಆರ್‌.ಬಿ ತಿಮ್ಮಾಪೂರ, ಎಸ್‌ವಿ ಸಂಕನೂರ ಸದಸ್ಯರಿದ್ದರು. ಆದರೆ ಈ ಪೈಕಿ ಬಿಜೆಪಿ ಸದಸ್ಯರಾದ ಹೆಚ್‌.ವಿಶ್ವನಾಥ್ ಹಾಗೂ ಎಸ್‌ವಿ ಸಂಕನೂರ ರಾಜೀನಾಮೆ ನೀಡಿದ್ದಾರೆ. ಇದೀಗ ಇವರ ಅನುಪಸ್ಥಿತಿಯಲ್ಲಿ ಸಮಿತಿಯ ಮಧ್ಯಂತರ ವರದಿಯ ಕರಡು ಪರಿಶೀಲನೆ ಸಭೆ ಗುರುವಾರ ಶಾಸಕರ ಭವನದಲ್ಲಿ ನಡೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ