ಆ್ಯಪ್ನಗರ

ಪೊಲೀಸ್‌ ಇಲಾಖೆಗೆ ಐಪಿಎಸ್‌ ಅಧಿಕಾರಿ ಅಣ್ಣಾಮಲೈ ಗುಡ್‌ಬೈ?

ಖಡಕ್‌ ಐಪಿಎಸ್‌ ಅಧಿಕಾರಿ ಎನಿಸಿಕೊಂಡಿರುವ ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಅವರು ಪೊಲೀಸ್‌ ಇಲಾಖೆಗೆ ಗುಡ್‌ ಬೈ ಹೇಳಲಿದ್ದಾರೆ...

Vijaya Karnataka 28 May 2019, 5:00 am
ಬೆಂಗಳೂರು: ಖಡಕ್‌ ಐಪಿಎಸ್‌ ಅಧಿಕಾರಿ ಎನಿಸಿಕೊಂಡಿರುವ ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಅವರು ಪೊಲೀಸ್‌ ಇಲಾಖೆಗೆ ಗುಡ್‌ ಬೈ ಹೇಳಲಿದ್ದಾರೆ. ಹೀಗಂತ ಪೊಲೀಸ್‌ ವಲಯದಲ್ಲಿ ವ್ಯಾಪಕವಾಗಿ ಸುದ್ದಿ ಹರಿದಾಡುತ್ತಿದೆ. ಮೇ 21ರಿಂದ ರಜೆ ಮೇಲೆ ತೆರಳಿದ್ದಾರೆ.
Vijaya Karnataka Web anna


ಗಾಳಿ ಸುದ್ದಿ ಕುರಿತು ಸಂಪರ್ಕಿಸಿದಾಗ ''ನಾನು ಸೇವೆಯಲ್ಲಿ ಮುಂದುವರಿಯುತ್ತಿದ್ದೇನೆ. ಸಮಯ ಬಂದಾಗ ತಿಳಿಸುತ್ತೇನೆ'' ಎಂದು ತಿಳಿಸಿದ್ದಾರೆ.

ತಮಿಳುನಾಡಿನ ಕರೂರು ಮೂಲದ ಅಣ್ಣಾಮಲೈ, 2011 ಬ್ಯಾಚ್‌ನ ಐಪಿಎಸ್‌ ಅಧಿಕಾರಿ. 2013ರಲ್ಲಿ ಕಾರ್ಕಳ ಡಿವೈಎಸ್ಪಿಯಾಗಿ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಎಸ್ಪಿಯಾಗಿ ಜನರ ಪ್ರೀತಿಗೆ ಪಾತ್ರರಾಗಿದ್ದರು. ಸಮವಸ್ತ್ರ ಧರಿಸಿ ಮಳೆ, ಗಾಳಿ ಎನ್ನದೇ ರಕ್ಷಣಾ ಕಾರ್ಯಾಚರಣೆಗೆ ಇಳಿದಿದ್ದರು. ರೌಡಿಗಳು, ಸಮಾಜಘಾತಕರ ಪಾಲಿಗೆ ದುಃಸ್ವಪ್ನವಾಗಿ ಕಾಡುತ್ತಿದ್ದ ಅಣ್ಣಾಮಲೈ, ಸಾರ್ವಜನಿಕ ವಲಯದಲ್ಲಿ 'ಸಿಂಗಂ' ಎಂದೇ ಹೆಸರು ಗಳಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ