ಆ್ಯಪ್ನಗರ

'ಮಹದಾಯಿ ಕಾನೂನು ಹೋರಾಟ ವಕೀಲರು ಮಾಡ್ತಾರೆ, ಮಂತ್ರಿಯಲ್ಲ': ಜಾರಿಕೊಂಡ ಜಾರಕಿಹೊಳಿ..!

‘ಮಹದಾಯಿ ವಿಚಾರವನ್ನು ವಕೀಲರು ನೋಡಿಕೊಳ್ಳುತ್ತಾರೆ. ಕಾನೂನು ಹೋರಾಟವನ್ನು ವಕೀಲರು ಮಾಡಿಕೊಳ್ಳುತ್ತಾರೆ. ಇದು ಮಂತ್ರಿಗಳು ಮಾಡುವ ಕೆಲಸವಲ್ಲ. ನನ್ನನ್ನು ಅದೊಂದು ವಿಚಾರಕ್ಕೇ ಸೀಮಿತಗೊಳಿಸಬೇಡಿ’ - ರಮೇಶ್ ಜಾರಕಿಹೊಳಿ

Vijaya Karnataka Web 13 Feb 2020, 8:53 pm
ಬೆಂಗಳೂರು: ಮಹದಾಯಿ ನದಿ ನೀರು ಹಂಚಿಕೆ ವಿವಾದದ ವಿಚಾರದಲ್ಲಿ ವಕೀಲರು ಕಾನೂನು ಹೋರಾಟ ನೋಡಿಕೊಳ್ಳುತ್ತಾರೆ. ಅದು ಮಂತ್ರಿಗಳು ಮಾಡುವ ಕೆಲಸವಲ್ಲ ಎಂದು ನೂತನ ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಅವರು ಆರಂಭದಲ್ಲೇ ವಿವಾದಿತ ಹೇಳಿಕೆ ನೀಡಿದ್ದಾರೆ.
Vijaya Karnataka Web ramesh jarakiholi
'ಮಹದಾಯಿ ಕಾನೂನು ಹೋರಾಟ ವಕೀಲರು ಮಾಡ್ತಾರೆ, ಮಂತ್ರಿಯಲ್ಲ':


ಗುರುವಾರ ಕುಮಾರಕೃಪ ಅತಿಥಿಗೃಹದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ‘ಮಹದಾಯಿ ವಿಚಾರವನ್ನು ವಕೀಲರು ನೋಡಿಕೊಳ್ಳುತ್ತಾರೆ. ಕಾನೂನು ಹೋರಾಟವನ್ನು ವಕೀಲರು ಮಾಡಿಕೊಳ್ಳುತ್ತಾರೆ. ಇದು ಮಂತ್ರಿಗಳು ಮಾಡುವ ಕೆಲಸವಲ್ಲ. ನನ್ನನ್ನು ಅದೊಂದು ವಿಚಾರಕ್ಕೇ ಸೀಮಿತಗೊಳಿಸಬೇಡಿ’ ಎಂದು ಹೇಳಿದರು.

ಗೋವಾ ಸರಕಾರ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿರುವ ಮೇಲ್ಮನವಿ ಅರ್ಜಿ ಇತ್ಯರ್ಥವಾಗುವವರೆಗೆ ಮಹದಾಯಿ ನ್ಯಾಯಾಧೀಕರಣದ ಅಂತಿಮ ತೀರ್ಪಿನ ಗೆಜೆಟ್‌ ಅಧಿಸೂಚನೆ ಹೊರಡಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿರುವ ಕುರಿತ ಪ್ರಶ್ನೆಗೆ ಸಚಿವರು ಈ ಪ್ರತಿಕ್ರಿಯೆ ನೀಡಿದರು. ಸಚಿವರ ಈ ಹೇಳಿಕೆ ವಿವಾದ ಸೃಷ್ಟಿಸಿದ್ದು, ಬೇಜವಾಬ್ದಾರಿಯ ಹೇಳಿಕೆ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ರಮೇಶ್ ಜಾರಕಿಹೊಳಿ ಜಲಸಂಪನ್ಮೂಲ ಖಾತೆ ಪಡೆದುಕೊಂಡ ಹಿಂದಿದೆ ರಾಜಕೀಯ ಸೇಡು!

ಇಲಾಖೆಯತ್ತ ಮುಖ ಮಾಡದ ಜಾರಕಿಹೊಳಿ

ಸಚಿವ ಸಂಪುಟ ವಿಸ್ತರಣೆಯಾಗಿ ವಾರ ಕಳೆದಿದೆ. ಜಲಸಂಪನ್ಮೂಲ ಖಾತೆಗೇ ಪಟ್ಟು ಹಿಡಿದು ಪಡೆದುಕೊಳ್ಳುವಲ್ಲಿ ರಮೇಶ್‌ ಜಾರಕಿಹೊಳಿ ಯಶಸ್ವಿಯಾಗಿದ್ದಾರೆ. ಆದರೆ, ಅವರು ಇನ್ನೂ ಇಲಾಖೆಯತ್ತ ಮುಖ ಮಾಡಿಲ್ಲ ಮತ್ತು ಇಲಾಖಾ ಅಧಿಕಾರಿಗಳ ಸಭೆ ನಡೆಸಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿದ ಜಾರಕಿಹೊಳಿ, ‘ಇನ್ನೂ ಇಲಾಖೆ ಸಚಿವನಾಗಿ ಚಾರ್ಜ್‌ ತೆಗೆದುಕೊಂಡಿಲ್ಲ. ನಾಳೆ ಅಧಿಕಾರ ತೆಗೆದುಕೊಳ್ಳುತ್ತೇನೆ. ಚಾರ್ಜ್‌ ಪಡೆದುಕೊಂಡ ಬಳಿಕ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತೇನೆ’ ಎಂದು ಹೇಳಿಕೊಂಡರು.

‘ಬೆಳಗಾವಿ ಜಿಲ್ಲಾ ಉಸ್ತುವಾರಿ ವಿಚಾರದಲ್ಲಿ ಮಾಧ್ಯಮಗಳ ಮುಂದೆ ಮಾತನಾಡುವುದಿಲ್ಲ. ಸಿಎಂ ಜತೆಗೆ ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೇನೆ’ ಎಂದ ಜಾರಕಿಹೊಳಿ, ಎಂಎಸ್‌ಐಎಲ್‌ ಅಧ್ಯಕ್ಷ ಸ್ಥಾನವನ್ನು ಶಾಸಕ ಮಹೇಶ್‌ ಕುಮಠಳ್ಳಿ ತಿರಸ್ಕರಿಸಿರುವ ಕುರಿತೂ ಪ್ರತಿಕ್ರಿಯಿಸಿದರು ‘ನಿಗಮ ಬೇಡ ಅಂದರೆ ಬೇಡ ಬಿಡಿ. ಅವರಿಗೆ ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಹುದ್ದೆ, ಒಳ್ಳೆಯ ಸ್ಥಾನಮಾನ ಸಿಎಂ ಯಡಿಯೂರಪ್ಪ ಕೊಡುತ್ತಾರೆ’ ಎಂದರು.

ಯಡಿಯೂರಪ್ಪ ಮುಂದೆ ಜಿಲ್ಲಾ ಉಸ್ತುವಾರಿ ಹಂಚಿಕೆ ಸವಾಲು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ