ಆ್ಯಪ್ನಗರ

ಖಾಸಗಿ ಸಂಸ್ಥೆಗಳಿಗೆ ಗುತ್ತಿಗೆ ಭೂಮಿ ಮಾರಾಟ, ಹೊರಬಿದ್ದ ಸರಕಾರಿ ಆದೇಶ

ಕಾಯಂ ಮಂಜೂರು ಪಡೆಯಲು ಸಂಬಂಧಪಟ್ಟ ಸಂಸ್ಥೆಗಳು ಒಪ್ಪದೇ ಇದ್ದರೆ ಅಂಥ ಜಾಗದ ಪರಿಶೀಲನೆ ನಡೆಸಿ ಬಳಕೆಯಾಗದೇ ಇರುವ ಜಾಗವನ್ನು ಸರಕಾರದ ವಶಕ್ಕೆ ಪಡೆಯಲು ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.

Vijaya Karnataka 7 Jul 2020, 10:40 pm
ಬೆಂಗಳೂರು: ಖಾಸಗಿ ಸಂಘ-ಸಂಸ್ಥೆಗಳಿಗೆ ವಿವಿಧ ಉದ್ಧೇಶಕ್ಕೆ ಗುತ್ತಿಗೆ ನೀಡಿದ ಭೂಮಿಯನ್ನು ಆಯಾ ಸಂಘ ಸಂಸ್ಥೆಗಳಿಗೆ ಮಾರಾಟ ಮಾಡಲು ಸಂಪುಟ ಸಭೆಯಲ್ಲಿ ಸರಕಾರ ತೆಗೆದುಕೊಂಡ ನಿರ್ಣಯದ ಸಂಬಂಧ ಆದೇಶ ಹೊರಬಿದ್ದಿದೆ.
Vijaya Karnataka Web Leased Land


ಆದರೆ ಕಾಯಂ ಮಂಜೂರು ಪಡೆಯಲು ಸಂಬಂಧಪಟ್ಟ ಸಂಸ್ಥೆಗಳು ಒಪ್ಪದೇ ಇದ್ದರೆ ಅಂಥ ಜಾಗದ ಪರಿಶೀಲನೆ ನಡೆಸಿ ಬಳಕೆಯಾಗದೇ ಇರುವ ಜಾಗವನ್ನು ಸರಕಾರದ ವಶಕ್ಕೆ ಪಡೆಯಲು ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.

ಖಾಸಗಿ ಸಂಘ- ಸಂಸ್ಥೆಗಳಿಗೆ ಕೈಗಾರಿಕೆ, ಶಿಕ್ಷಣ, ಕಲ್ಯಾಣ ಚಟುವಟಿಕೆ, ಧಾರ್ಮಿಕ, ಕೃಷಿ, ಕೃಷಿಯೇತರ ಉದ್ದೇಶಕ್ಕೆ 30 ವರ್ಷಕ್ಕೆ ಗುತ್ತಿಗೆ ನೀಡಿದ್ದ ಭೂಮಿಯನ್ನು ಕಾಯಂ ಮಂಜೂರು ಮಾಡಲು ಸರಕಾರ ನಿರ್ಧರಿಸಿತ್ತು. ಕೋವಿಡ್‌ ಹಿನ್ನೆಲೆಯಲ್ಲಿ ಇವುಗಳನ್ನು ಆಯಾ ಸಂಘ-ಸಂಸ್ಥೆಗೆ ಮಾರ್ಗಸೂಚಿ ದರದ ಎರಡು ಪಟ್ಟು ದರ ವಿಧಿಸಿ ಸಂಪನ್ಮೂಲ ಕ್ರೋಢಿಕರಿಸಲು ಸರಕಾರ ನಿರ್ಧರಿಸಿತ್ತು.

ಕಳೆದ ಸಂಪುಟ ಸಭೆಯಲ್ಲಿ ಈ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಲಾಗಿತ್ತು. ಈ ನಿರ್ಧಾರದ ಮೂಲಕ ಸಾವಿರಾರು ಕೋಟಿ ರೂಪಾಯಿ ಸಂಪನ್ಮೂಲ ಕ್ರೋಢಿಕರಣದ ಗುರಿಯನ್ನು ಕರ್ನಾಟಕ ಸರಕಾರ ಹಾಕಿಕೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ