ಆ್ಯಪ್ನಗರ

ತೆರಿಗೆ , ಟಿಡಿಎಸ್‌ ವಂಚಕರ ಪತ್ತೆ ಹಚ್ಚಿದ ಐಟಿ ಇಲಾಖೆ

ಆದಾಯ ತೆರಿಗೆ ಇಲಾಖೆಯ ಟಿಡಿಎಸ್‌ ವಿಭಾಗ, 2019ರ ಫೆ.19ರಿಂದ ಫೆ.26ರ ನಡುವೆ ಸರಕಾರಿ ಮತ್ತು ಖಾಸಗಿ ಕ್ಷೇತ್ರದ 76 ಕಚೇರಿ, ಸ್ಥಳಗಳಲ್ಲಿ ನಡೆಸಿದ ಶೋಧ ಮತ್ತು ಪರಿಶೀಲನೆ ವೇಳೆ 51 ಕೋಟಿ ರೂ. ಟಿಡಿಎಸ್‌ ಕಟ್ಟದಿರುವುದು ಹಾಗೂ 508 ಕೋಟಿ ರೂ. ವೆಚ್ಚಗಳ ಮೇಲಿನ ತೆರಿಗೆ ಕಟ್ಟದೇ ಇರುವುದನ್ನು ಪತ್ತೆ ಹಚ್ಚಿದ್ದಾರೆ.

Vijaya Karnataka 15 Mar 2019, 5:00 am
ಬೆಂಗಳೂರು :ಆದಾಯ ತೆರಿಗೆ ಇಲಾಖೆಯ ಟಿಡಿಎಸ್‌ ವಿಭಾಗ, 2019ರ ಫೆ.19ರಿಂದ ಫೆ.26ರ ನಡುವೆ ಸರಕಾರಿ ಮತ್ತು ಖಾಸಗಿ ಕ್ಷೇತ್ರದ 76 ಕಚೇರಿ, ಸ್ಥಳಗಳಲ್ಲಿ ನಡೆಸಿದ ಶೋಧ ಮತ್ತು ಪರಿಶೀಲನೆ ವೇಳೆ 51 ಕೋಟಿ ರೂ. ಟಿಡಿಎಸ್‌ ಕಟ್ಟದಿರುವುದು ಹಾಗೂ 508 ಕೋಟಿ ರೂ. ವೆಚ್ಚಗಳ ಮೇಲಿನ ತೆರಿಗೆ ಕಟ್ಟದೇ ಇರುವುದನ್ನು ಪತ್ತೆ ಹಚ್ಚಿದ್ದಾರೆ.
Vijaya Karnataka Web it take action on tax frauds compay
ತೆರಿಗೆ , ಟಿಡಿಎಸ್‌ ವಂಚಕರ ಪತ್ತೆ ಹಚ್ಚಿದ ಐಟಿ ಇಲಾಖೆ


ದಾಳಿ ವೇಳೆ ಟಿಡಿಎಸ್‌ ಜಮಾ ಮಾಡದೇ ಇರುವುದು, ಕಡಿತ ಮಾಡಿಕೊಳ್ಳದೇ ಇರುವುದು ಹಾಗೂ ಟಿಡಿಎಸ್‌ ಫೈಲ್‌ ಮಾಡದೇ ಇರುವುದಕ್ಕೆ ಸಂಬಂಧಿಸಿದ ದೊಡ್ಡ ಪ್ರಮಾಣದ ಪ್ರಕರಣಗಳು ಪತ್ತೆಯಾಗಿವೆ.

51 ಕೋಟಿ ರೂ.ಯನ್ನು ಮೂಲದಲ್ಲೇ ತೆರಿಗೆ ಕಡಿತ (ಟಿಡಿಎಸ್‌) ಮಾಡಿಕೊಂಡಿರುವ ಕಚೇರಿಗಳು, ಕಂಪನಿಗಳು ಅದನ್ನು ಸರಕಾರದ ಖಾತೆಗೆ ಜಮಾ ಮಾಡಿಲ್ಲ. ಅದೇ ರೀತಿ ವಿವಿಧ ಯೋಜನೆಗಳು ಸೇರಿದಂತೆ ಖರ್ಚುಗಳ ತೆರಿಗೆ ರೂಪದಲ್ಲಿ ಮಾಡಿಕೊಳ್ಳಬೇಕಾಗಿದ್ದ 508 ಕೋಟಿ ರೂ.ಯನ್ನು ಕಡಿತ ಮಾಡಿಕೊಂಡಿಲ್ಲ. ಅದರಲ್ಲಿ ಬಡ್ಡಿ ಪಾವತಿಗೆ ಟಿಡಿಎಸ್‌ ಕಡಿತ ಮಾಡಿಕೊಳ್ಳದಿರುವುದು, ಪೇಮೆಂಟ್‌ ಗೇಟ್‌ವೇ ಶುಲ್ಕಗಳು, ಕಮೀಷನ್‌ ಪಾವತಿ, ಗುತ್ತಿಗೆ ಮೊತ್ತ ಪಾವತಿ ಸೇರಿದಂತೆ ವಿವಿಧ ರೀತಿಯ ತೆರಿಗೆಗಳು ಸೇರಿವೆ.

ಇಲಾಖೆಯು ಹೊಂದಿರುವ ಆನ್‌ಲೈನ್‌ ಮಾಹಿತಿ ಪ್ರಕಾರ ಹಲವು ಕಂಪನಿ, ಕಚೇರಿಗಳು ಕಡಿತ ಮಾಡಿಕೊಂಡಿರುವ ಟಿಡಿಎಸ್‌ ಅನ್ನು ಹಲವು ತಿಂಗಳುಗಳಿಂದ ಸರಕಾರಕ್ಕೆ ಕಟ್ಟದೇ ಬಾಕಿ ಉಳಿಸಿಕೊಂಡಿವೆ. ಬಾಕಿ ವಸೂಲಿ ಮಾಡಲು ಇಲಾಖೆಯು ಕಠಿಣ ಕ್ರಮ ಕೈಗೊಂಡಿದ್ದು ಸಂಬಂಧಪಟ್ಟವರ ಬ್ಯಾಂಕ್‌ ಖಾತೆ ಮತ್ತು ಸ್ಥಿರಾಸ್ತಿಗಳನ್ನು ಜಪ್ತಿ ಮಾಡಿಕೊಂಡಿದೆ.

ಆರ್ಥಿಕ ವರ್ಷದ ಕೊನೆ ಹಂತದಲ್ಲಿರುವ ಕಾರಣ ಟಿಡಿಎಸ್‌ ಕಡಿತ ಮಾಡಿಕೊಂಡಿರುವ, ಕಂಪನಿ, ಕಚೇರಿಗಳು, ವ್ಯಕ್ತಿಗಳು ಆ ಹಣವನ್ನು ಸರಕಾರದ ಖಾತೆಗೆ ನಿಯಮಾನುಸಾರ ಜಮಾ ಮಾಡಬೇಕು. ಒಂದು ವೇಳೆ ವಿಫಲವಾದಲ್ಲಿ ಬಡ್ಡಿ, ತಡವಾಗಿ ಕಟ್ಟುವುದರ ಮೇಲೆ ಶುಲ್ಕ ಮತ್ತು ದಂಡ ಮಾತ್ರವಲ್ಲದೇ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಐಟಿ ಇಲಾಖೆ ಎಚ್ಚರಿಕೆ ನೀಡಿದೆ.

ಮುಂದಿನ ದಿನಗಳಲ್ಲೂ ಇಲಾಖೆಯಿಂದ ಟಿಡಿಎಸ್‌ ಸಂಬಂಧಿಸಿದ ಶೋಧ ಕಾರ್ಯ ಮುಂದುವರಿಯಲಿದೆ ಎಂದು ಐಟಿ ಇಲಾಖೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ