ಆ್ಯಪ್ನಗರ

ಸಾವರ್ಕರ್ ರೀತಿಯಲ್ಲಿ ಜೈಲಿನಲ್ಲಿದ್ದರೆ ನಾನೂ ಬ್ರಿಟಿಷರಲ್ಲಿ ಕ್ಷಮೆ ಕೇಳುತ್ತಿದ್ದೆ: ಜೈರಾಮ್‌ ರಮೇಶ್‌

ಒಂದು ವೇಳೆ ನನ್ನನ್ನು ಅಂಡಮಾನ್ ನಿಕೋಬಾರ್‌ನ ಜೈಲಿನಲ್ಲಿ ಇಟ್ಟಿದ್ದರೆ ಸಾವರ್ಕರ್ ಅಷ್ಟೇ ಅಲ್ಲ, ನಾನು ಸಹ ಬ್ರಿಟಿಷರಿಗೆ ಕ್ಷಮಾಪಣೆ ಅರ್ಜಿ ಸಲ್ಲಿಸುತ್ತಿದ್ದೆ. ಸಾವರ್ಕರ್ ಜೈಲಿನಲ್ಲಿದ್ದಾಗ ಹಿಂದೂ-ಮುಸ್ಲಿಮರ ಐಕ್ಯತೆ ಬಯಸುತ್ತಿದ್ದರು.

Vijaya Karnataka Web 8 Feb 2020, 2:27 pm
ಬೆಂಗಳೂರು: ಅಂಡಮಾನ್ ಜೈಲಿನಲ್ಲಿ ಸಾವರ್ಕರ್ ಪರಿಸ್ಥಿತಿಯಲ್ಲಿ ನಾನಿದ್ದರೂ ಬ್ರಿಟಿಷರಲ್ಲಿ ಕ್ಷಮಾಪಣೆ ಅರ್ಜಿ ಸಲ್ಲಿಸುತ್ತಿದ್ದೆ ಎಂದು ಕಾಂಗ್ರೆಸ್ ಮುಖಂಡ ರಾಜ್ಯಸಭಾ ಸದಸ್ಯ ಜಯರಾಂ ರಮೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
Vijaya Karnataka Web ಟೈಮ್ಸ್‌ ಲಿಟ್‌ ಫೆಸ್ಟ್‌
ಟೈಮ್ಸ್‌ ಲಿಟ್‌ ಫೆಸ್ಟ್‌


ಬೆಂಗಳೂರಿನ ಜಯಮಹಲ್ ಪ್ಯಾಲೇಸ್ ಹೋಟೆಲ್‌ನಲ್ಲಿ ಟೈಮ್ಸ್ ಲಿಟ್ ಫೆಸ್ಟ್‌ನಲ್ಲಿ ವೀರ ಸಾವರ್ಕರ್ ಜೀವನ ಚರಿತ್ರೆ ಬಗ್ಗೆ ಜಯರಾಂ ರಮೇಶ್ ಮಾತನಾಡಿದರು.

ಒಂದು ವೇಳೆ ನನ್ನನ್ನು ಅಂಡಮಾನ್ ನಿಕೋಬಾರ್‌ನ ಜೈಲಿನಲ್ಲಿ ಇಟ್ಟಿದ್ದರೆ ಸಾವರ್ಕರ್ ಅಷ್ಟೇ ಅಲ್ಲ, ನಾನು ಸಹ ಬ್ರಿಟಿಷರಿಗೆ ಕ್ಷಮಾಪಣೆ ಅರ್ಜಿ ಸಲ್ಲಿಸುತ್ತಿದ್ದೆ. ಸಾವರ್ಕರ್ ಜೈಲಿನಲ್ಲಿದ್ದಾಗ ಹಿಂದೂ-ಮುಸ್ಲಿಮರ ಐಕ್ಯತೆ ಬಯಸುತ್ತಿದ್ದರು ಎಂದರು.

ಜೈಲಿನಿಂದ ಹೊರಬರುತ್ತಿದ್ದಂತೆ ಧರ್ಮದ ಆಧಾರದಲ್ಲಿ ಭಾರತ, ಪಾಕಿಸ್ತಾನ ಎಂದು ಪ್ರತಿಪಾದಿಸಿದರು ಎಂದು ಜೈರಾಮ್‌ ರಮೇಶ್‌ ತಿಳಿಸಿದರು.

ಇತ್ತೀಚೆಗೆ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸಾವರ್ಕರ್ ವಿರುದ್ಧವಾಗಿ ಹೇಳಿಕೆ ನೀಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ