ಆ್ಯಪ್ನಗರ

ಜಯನಗರದಲ್ಲಿ‌ ಕಾಂಗ್ರೆಸ್‌ ಗೆಲುವು ನಿರೀಕ್ಷಿತ: ಮಾಜಿ ಸಿಎಂ ಸಿದ್ದರಾಮಯ್ಯ

ಜಯನಗರದಲ್ಲಿ‌ ಕಾಂಗ್ರೆಸ್‌ ಗೆಲುವು ನಿರೀಕ್ಷಿತ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಹಿಂದೆ ಚುನಾವಣೆ ನಡೆದಿದ್ದರೂ ನಾವೇ ಗೆಲ್ಲುತ್ತಿದ್ದೆವು. ಈಗಲೂ ನಾವೇ ಗೆದ್ದಿದ್ದೇವೆ ಎಂದು ಸಹ ಹೇಳಿದ್ದಾರೆ.

Vijaya Karnataka Web 13 Jun 2018, 1:05 pm
ಮೈಸೂರು: ಜಯನಗರದಲ್ಲಿ‌ ಕಾಂಗ್ರೆಸ್‌ ಗೆಲುವು ನಿರೀಕ್ಷಿತ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಹಿಂದೆ ಚುನಾವಣೆ ನಡೆದಿದ್ದರೂ ನಾವೇ ಗೆಲ್ಲುತ್ತಿದ್ದೆವು. ಈಗಲೂ ನಾವೇ ಗೆದ್ದಿದ್ದೇವೆ. ಬಿಜೆಪಿ ಅಭ್ಯರ್ಥಿಗಿಂತ ನಮ್ಮ ಅಭ್ಯರ್ಥಿ ತುಂಬಾ ಆಕ್ಟಿವ್. ನಮ್ಮ ಅಭ್ಯರ್ಥಿ ಬಹಳ ಒಳ್ಳೆಯ ಕೆಲಸ ಮಾಡುತ್ತಾ ಚುರುಕಾಗಿ ಓಡಾಡುತ್ತಾರೆ. ಇದು ನಿರೀಕ್ಷಿತ ಫಲಿತಾಂಶ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
Vijaya Karnataka Web Siddaramaiah


ಬಿಜೆಪಿ ಬಗ್ಗೆ ಯಾವುದೇ ಕಾರಣಕ್ಕೂ ಅನುಕಂಪ ಇಲ್ಲ. ಜನರ ಅನುಕಂಪ ಇರುವುದು ಕಾಂಗ್ರೆಸ್ ಮೇಲೆ. 78 ಸ್ಥಾನ ಬಂದರೂ, ಅಧಿಕಾರಕ್ಕಾಗಿ ಅಡ್ಡ ದಾರಿ ಹಿಡಿಯಲಿಲ್ಲ ಎಂಬ ಅನುಕಂಪ ನಮ್ಮ ಮೇಲಿದೆ. ಬಿಜೆಪಿ ಬಹುಮತ ಬರದಿದ್ದರೂ ಅಧಿಕಾರ ಹಿಡಿಯಲು ಅಡ್ಡ ದಾರಿ ಹಿಡಿಯಿತು. ಅಂಥವರ ಮೇಲೆ ಜನ ಏಕೆ ಅನುಕಂಪ ತೋರಿಸುತ್ತಾರೆ? ಬಿಜೆಪಿ ಅಧಿಕಾರಕ್ಕಾಗಿ ನಮ್ಮ ಇಬ್ಬರು ಶಾಸಕರನ್ನು ಬುಕ್ ಮಾಡಿತ್ತು. ಬಹುಮತದ ಸಂಖ್ಯೆ ಬಾರದ ಕಾರಣ ಅವರನ್ನು ವಾಪಸ್ಸು ಕಳುಹಿಸಿತು ಎಂದು ಸಿದ್ದರಾಮಯ್ಯ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ