ಆ್ಯಪ್ನಗರ

ಸಿದ್ದು ಕೀಳು ಪದ ಬಳಕೆಗೆ ಜೆಡಿಎಸ್‌ ಖಂಡನೆ

ರಾಜ್ಯದಲ್ಲಿ ಜೆಡಿಎಸ್‌ -ಕಾಂಗ್ರೆಸ್‌ ಮೈತ್ರಿ ಸರಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣ ಎಂಬ ದೇವೇಗೌಡರ ಆಪಾದನೆಗೆ ಪ್ರತಿಕ್ರಿಯೆಯಾಗಿ ಮಾಜಿ ಸಿಎಂ ...

Vijaya Karnataka 1 Sep 2019, 5:00 am
ಬೆಂಗಳೂರು: ರಾಜ್ಯದಲ್ಲಿvijಜೆಡಿಎಸ್‌ -ಕಾಂಗ್ರೆಸ್‌ ಮೈತ್ರಿ ಸರಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣ ಎಂಬ ದೇವೇಗೌಡರ ಆಪಾದನೆಗೆ ಪ್ರತಿಕ್ರಿಯೆಯಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಶನಿವಾರ ಪಿರಿಯಾಪಟ್ಟಣದಲ್ಲಿ ಬಳಸಿರುವ ಪದ ವಿವಾದ ಸೃಷ್ಟಿಸಿದೆ.
Vijaya Karnataka Web jds symbol


ತಮ್ಮ ವಿರುದ್ಧದ ಜೆಡಿಎಸ್‌ ವರಿಷ್ಠರ ಆಪಾದನೆಗೆ ಉತ್ತರವಾಗಿ ಸಿದ್ದರಾಮಯ್ಯ ಅವರು ಕೀಳು ಮಟ್ಟದ ಪದ ಬಳಕೆ ಮಾಡಿರುವುದನ್ನು ಜೆಡಿಎಸ್‌ ಖಂಡಿಸಿದೆ. ''ಜೆಡಿಎಸ್‌ ಕುರಿತು ಸಿದ್ದರಾಮಯ್ಯ ಆಡಿರುವ ಮಾತು ಅವರ ನಡತೆಗೆ ಹಿಡಿದ ಕನ್ನಡಿ'' ಎಂದು ಜೆಡಿಎಸ್‌ ಟ್ವಿಟರ್‌ನಲ್ಲಿ ಕಿಡಿಕಾರಿದೆ.

''ನಾಯಕರು ತಾವು ಬಳಸುವ ಭಾಷೆ ಮೇಲೆ ಹಿಡಿತ ಕಳೆದುಕೊಂಡರೆ ಅದು ಹತಾಶೆಯ ಸಂಕೇತ. ಪ್ರೀತಿಸುವವರಿಗೆ ಜೆಡಿಎಸ್‌ ಪಕ್ಷ ದೇವಲೋಕ. ಯಾರೋ ಅರಚಿದರೆ ಏನೂ ಆಗುವುದಿಲ್ಲ'' ಎಂದು ಜೆಡಿಎಸ್‌ ವಕ್ತಾರ ರಮೇಶ್‌ಬಾಬು ತಿರುಗೇಟು ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ