ಬೆಂಗಳೂರು: ರಾಜ್ಯದಲ್ಲಿvijಜೆಡಿಎಸ್ -ಕಾಂಗ್ರೆಸ್ ಮೈತ್ರಿ ಸರಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣ ಎಂಬ ದೇವೇಗೌಡರ ಆಪಾದನೆಗೆ ಪ್ರತಿಕ್ರಿಯೆಯಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಶನಿವಾರ ಪಿರಿಯಾಪಟ್ಟಣದಲ್ಲಿ ಬಳಸಿರುವ ಪದ ವಿವಾದ ಸೃಷ್ಟಿಸಿದೆ.
ತಮ್ಮ ವಿರುದ್ಧದ ಜೆಡಿಎಸ್ ವರಿಷ್ಠರ ಆಪಾದನೆಗೆ ಉತ್ತರವಾಗಿ ಸಿದ್ದರಾಮಯ್ಯ ಅವರು ಕೀಳು ಮಟ್ಟದ ಪದ ಬಳಕೆ ಮಾಡಿರುವುದನ್ನು ಜೆಡಿಎಸ್ ಖಂಡಿಸಿದೆ. ''ಜೆಡಿಎಸ್ ಕುರಿತು ಸಿದ್ದರಾಮಯ್ಯ ಆಡಿರುವ ಮಾತು ಅವರ ನಡತೆಗೆ ಹಿಡಿದ ಕನ್ನಡಿ'' ಎಂದು ಜೆಡಿಎಸ್ ಟ್ವಿಟರ್ನಲ್ಲಿ ಕಿಡಿಕಾರಿದೆ.
''ನಾಯಕರು ತಾವು ಬಳಸುವ ಭಾಷೆ ಮೇಲೆ ಹಿಡಿತ ಕಳೆದುಕೊಂಡರೆ ಅದು ಹತಾಶೆಯ ಸಂಕೇತ. ಪ್ರೀತಿಸುವವರಿಗೆ ಜೆಡಿಎಸ್ ಪಕ್ಷ ದೇವಲೋಕ. ಯಾರೋ ಅರಚಿದರೆ ಏನೂ ಆಗುವುದಿಲ್ಲ'' ಎಂದು ಜೆಡಿಎಸ್ ವಕ್ತಾರ ರಮೇಶ್ಬಾಬು ತಿರುಗೇಟು ನೀಡಿದ್ದಾರೆ.
ತಮ್ಮ ವಿರುದ್ಧದ ಜೆಡಿಎಸ್ ವರಿಷ್ಠರ ಆಪಾದನೆಗೆ ಉತ್ತರವಾಗಿ ಸಿದ್ದರಾಮಯ್ಯ ಅವರು ಕೀಳು ಮಟ್ಟದ ಪದ ಬಳಕೆ ಮಾಡಿರುವುದನ್ನು ಜೆಡಿಎಸ್ ಖಂಡಿಸಿದೆ. ''ಜೆಡಿಎಸ್ ಕುರಿತು ಸಿದ್ದರಾಮಯ್ಯ ಆಡಿರುವ ಮಾತು ಅವರ ನಡತೆಗೆ ಹಿಡಿದ ಕನ್ನಡಿ'' ಎಂದು ಜೆಡಿಎಸ್ ಟ್ವಿಟರ್ನಲ್ಲಿ ಕಿಡಿಕಾರಿದೆ.
''ನಾಯಕರು ತಾವು ಬಳಸುವ ಭಾಷೆ ಮೇಲೆ ಹಿಡಿತ ಕಳೆದುಕೊಂಡರೆ ಅದು ಹತಾಶೆಯ ಸಂಕೇತ. ಪ್ರೀತಿಸುವವರಿಗೆ ಜೆಡಿಎಸ್ ಪಕ್ಷ ದೇವಲೋಕ. ಯಾರೋ ಅರಚಿದರೆ ಏನೂ ಆಗುವುದಿಲ್ಲ'' ಎಂದು ಜೆಡಿಎಸ್ ವಕ್ತಾರ ರಮೇಶ್ಬಾಬು ತಿರುಗೇಟು ನೀಡಿದ್ದಾರೆ.