ಆ್ಯಪ್ನಗರ

ಅತಿಥಿ ಉಪನ್ಯಾಸಕರ ಖಾಯಮಾತಿಗೆ ಕಾಲಮಿತಿ ನಿಗದಿ ಪಡಿಸಲು ಒಪ್ಪದ ಸರ್ಕಾರ; ಜೆಡಿಎಸ್ ಸಭಾತ್ಯಾಗ..!

ಅತಿಥಿ ಉಪನ್ಯಾಸರಾಗಿ ಕಾರ್ಯನಿರ್ವಹಿಸುತ್ತಿರುವವರಿಗೆ ಮಾಸಿಕವಾಗಿ ನೀಡಿವ ಗೌರವ ಸಂಭಾವನೆ ಹೆಚ್ಚಿಸಬೇಕು ಹಾಗೂ ಸೇವೆ ಖಾಯಂಗೊಳಿಸುವ ಬಗೆಗಿನ ಸರ್ಕಾರದ ನಿರ್ಧಾರವನ್ನು ಖಂಡಿಸಿ ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದರು.

Lipi 20 Sep 2021, 4:58 pm

ಹೈಲೈಟ್ಸ್‌:

  • ಅತಿಥಿ ಉಪನ್ಯಾಸರಾಗಿ ಕಾರ್ಯನಿರ್ವಹಿಸುತ್ತಿರುವವರ ಸೇವಾ ಖಾಯಮಾತಿಗೆ ಕಾಲಮಿತಿ ನಿಗದಿ ಪಡಿಸಲು ಒಪ್ಪದ ಸರ್ಕಾರ; ಸರ್ಕಾರದ ನಡೆಗೆ ಜೆಡಿಎಸ್ ಸಭಾತ್ಯಾಗ
  • ಗೌರವಧನ ಪರಿಷ್ಕರಣೆ, ಸೇವೆ ಖಾಯಂ ಕುರಿತು ಸಿಎಂ ಜೊತೆ ಚರ್ಚಿಸಿ ನಂತರ ನಿರ್ಧರಿಸಲಾಗುತ್ತದೆ; ಅಶ್ವತ್ಥನಾರಾಯಣ್ ಭರವಸೆ
  • ಸಚಿವರ ಉತ್ತರಕ್ಕೆ ಸದಸ್ಯ ಮರಿತಿಬ್ಬೇಗೌಡ ಅಸಮಾಧಾನ; ಜೆಡಿಎಸ್ ನ ಎಲ್ಲಾ ಸದಸ್ಯರು ಧಿಕ್ಕಾರ ಕೂಗುತ್ತಾ ಸಭಾತ್ಯಾಗ ಮಾಡಿದರು
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web ವಿಧಾನಮಂಡಲ
ಬೆಂಗಳೂರು: ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸರಾಗಿ ಕಾರ್ಯನಿರ್ವಹಿಸುತ್ತಿರುವವರಿಗೆ ಮಾಸಿಕವಾಗಿ ನೀಡಿವ ಗೌರವ ಸಂಭಾವನೆ ಹೆಚ್ಚಿಸಬೇಕು ಹಾಗೂ ಸೇವೆ ಖಾಯಂಗೊಳಿಸುವ ಕುರಿತು ಕಾಲಮಿತಿಯಲ್ಲಿ ನಿರ್ಧಾರ ಕೈಗೊಳ್ಳಬೇಕು ಎನ್ನುವ ಬೇಡಿಕೆ ಕುರಿತು ಸರ್ಕಾರ ನೀಡಿದ ಉತ್ತರವನ್ನು ಖಂಡಿಸಿ ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದ ಘಟನೆ ವಿಧಾನ ಪರಿಷತ್ ಕಲಾಪದಲ್ಲಿ ನಡೆಯಿತು.
ಅತಿಥಿ ಉಪನ್ಯಾಸಕರ ಸೇವಾ ಖಾಯಮಾತಿ ಕುರಿತು ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವ ಅಶ್ವತ್ಥನಾರಾಯಣ್, ಅತಿಥಿ ಉಪನ್ಯಾಸಕರ ವಿಚಾರದಲ್ಲಿ ಸಾಕಷ್ಟು ಸಮಸ್ಯೆ ಇದೆ ಎಲ್ಲರ ಜೊತೆ ಚರ್ಚೆ ಮಾಡಿ ಸಮಸ್ಯೆ ಪರಿಹರಿಸುವ ಕುರಿತು ಚರ್ಚೆ ಮಾಡಲಾಗುತ್ತದೆ. ಇದು ಹೊಸ ಸಮಸ್ಯೆಯಲ್ಲ, ಹಲವಾರು ವರ್ಷದಿಂದ ಇರುವ ಸಮಸ್ಯೆ ಆಗಿದೆ. ನಾವು ಇದನ್ನು ಪರಿಹರಿಸಲು ಎಲ್ಲ ಪ್ರಯತ್ನ ಮಾಡಲಾಗುತ್ತದೆ, ಇನ್ನು ಬೇಡಿಕೆಗಳು ಇವೆ ಆ ವಿಚಾರದಲ್ಲಿ ಕ್ರಮ ವಹಿಸಲಾಗುತ್ತದೆ ಎಂದರು.

ಯಾವಾಗ ಸಮಸ್ಯೆ ಪರಿಹರಿಸಲಾಗುತ್ತದೆ ಎಂದು ಸಮಯವನ್ನು ಹೇಳಲು ಸಾಧ್ಯವಿಲ್ಲ, ಗೌರವಧನ ಪರಿಷ್ಕರಣೆ, ಸೇವೆ ಖಾಯಂ ಕುರಿತು ಸಿಎಂ ಬಸವರಾಜ್ ಬೊಮ್ಮಯಿಯವರ ಜೊತೆ ಚರ್ಚಿಸಿ ನಂತರ ನಿರ್ಧರಿಸಲಾಗುತ್ತದೆ. ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ, ಪರಿಶೀಲನೆ ಮಾಡಲಾಗುತ್ತದೆ ಎಂದು ಸದನಕ್ಕೆ ಭರವಸೆ ನೀಡಿದರು.

ಸಚಿವರ ಉತ್ತರಕ್ಕೆ ಸದಸ್ಯ ಮರಿತಿಬ್ಬೇಗೌಡ ಅಸಮಾಧಾನ ವ್ಯಕ್ತಪಡಿಸಿದರು. ಉತ್ತರದಿಂದ ನೋವುಂಟಾಗಿದೆ ಎಂದು ಹೇಳಿ ಸದನ ಬಹಿಷ್ಕರಿಸಿ ಹೊರ ನಡೆದರು. ಅವರ ಹಿಂದೆಯೇ ಜೆಡಿಎಸ್ ನ ಎಲ್ಲಾ ಸದಸ್ಯರು ಧಿಕ್ಕಾರ ಕೂಗುತ್ತಾ ಸದನದಿಂದ ಹೊರನಡೆದರು.. ಕಡತದಿಂದ ಪದ ತೆಗೆದು ರೂಲಿಂಗ್ ಮರಿತಿಬ್ಬೇಗೌಡ ಪ್ರಶ್ನೆ ಕೇಳುವಾಗ ಆಡಳಿತ ಪಕ್ಷದ ಸಾಲಿನಲ್ಲಿ ಕೆಲ ಸದಸ್ಯರ ಜೊತೆ ಇಂಧನ ಸಚಿವ ಸುನೀಲ್ ಕುಮಾರ್ ಮಾತನಾಡುತ್ತಿದ್ದರು. ಈ ವೇಳೆ ಕ್ರೋಧರಾದ ಮರಿತಿಬ್ಬೇಗೌಡ ಸಚಿವರನ್ನು ಗದರುವ ರೀತಿ ಪದ ಬಳಕೆ ಮಾಡಿದರು.

ಈ ರೀತಿಯ ಪದ ಬಳಕೆಗೆ ಬಿಜೆಪಿ ಸದಸ್ಯರು ಗರಂ‌ ಆದರು, ಮರಿತಿಬ್ಬೇಗೌಡ ವಿರುದ್ಧ ವಾಗ್ದಾಳಿ ನಡೆಸಿದರು. ಈ ವೇಳೆ ನನ್ನದು ತಪ್ಪು ಒಪ್ಪಿಕೊಳ್ಳುತ್ತೇನೆ ಆದರೆ ಸದನ ನಡೆಯುವಾಗ ಮಾತಾಡುತ್ತಾ ಗಲಾಟೆ ಮಾಡಲು ಅವಕಾಶ ಇದೆಯಾ ಎಂದು ಏರುದನಿಯಲ್ಲಿ ಜೆಡಿಎಸ್ ಸದಸ್ಯರಾದ ಮರಿತಿಬ್ಬೇಗೌಡ ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಮರಿತಿಬ್ಬೇಗೌಡ ಮತ್ತು ಬಿಜೆಪಿ ಸದಸ್ಯರ ನಡುವೆ ಮಾತಿನ‌ ಜಟಾಪಟಿ ನಡೆಯಿತು . ಅಂತಿಮವಾಗಿ ಮಧ್ಯಪ್ರವೇಶ ಮಾಡಿದ ಸಭಾಪತಿ ಬಸವರಾಜ ಹೊರಟ್ಟಿ, ಮರಿತಿಬ್ಬೇಗೌಡ ಬಳಸಿದ್ದ ಪದವನ್ನು ಕಡತದಿಂದ ತೆಗೆದುಹಾಕಿ ರೂಲಿಂಗ್ ನೀಡಿ, ಮೊದಲು ಸಭಾಪತಿಗಳಿಗೆ ಗೌರವ ಕೊಡುವುದನ್ನ ಕಲಿಯಿರಿ ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ