ಆ್ಯಪ್ನಗರ

'ತೇಜೋವಧೆ'ಗೆ ಮನನೊಂದು ಶಾಸಕ ಸ್ಥಾನ ತ್ಯಜಿಸಿದ ಸಾ.ರಾ ಮಹೇಶ್

ಜೆಡಿಎಸ್ ಪಕ್ಷದ ಮಾಜಿ ಸಚಿವ ಸಾರಾ ಮಹೇಶ್ ರವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಟೀಕೆಗಳಿಂದ ಬೇಸತ್ತು ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದು ರಾಜೀನಾಮೆ ಬಳಿಕ ಹೇಳಿಕೆ ನೀಡಿದ್ದಾರೆ.

Vijaya Karnataka Web 16 Oct 2019, 2:00 pm
ಮೈಸೂರು: ಜೆಡಿಎಸ್ ಪಕ್ಷದ ಮಾಜಿ ಸಚಿವ ಸಾರಾ ಮಹೇಶ್ ರವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅನರ್ಹ ಶಾಸಕ ಅಡಗೂರು ಎಚ್. ವಿಶ್ವನಾಥ್ ಹಾಗೂ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಮಧ್ಯೆ ಆಣೆ ಪ್ರಮಾಣ ರಾಜಕೀಯ ಮತ್ತೆ ಜೋರಾಗಿದೆ. ಇದರ ಬೆನ್ನಲ್ಲೇ ರಾಜೀನಾಮೆ ಬಗ್ಗೆ ಮಹೇಶ್ ಘೋಷಣೆ ಹೊರಡಿಸಿದ್ದಾರೆ.
Vijaya Karnataka Web sara


ಚಾಮುಂಡೇಶ್ವರಿ ತಾಯಿ ಎದುರು ಪ್ರಮಾಣ: ವಿಶ್ವನಾಥ್‌ ಸವಾಲು ಸ್ವೀಕರಿಸಿದ ಸಾ.ರಾ. ಮಹೇಶ್‌

ಮೈಸೂರಿನ ಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈಯುಕ್ತಿಕ ಟೀಕೆಯಿಂದ ಬೇಸತ್ತು ರಾಜೀನಾಮೆ ಸಲ್ಲಿಸಲಾಗುತ್ತಿದೆ. ಅನರ್ಹ ಶಾಸಕ ಎಚ್.ವಿಶ್ವನಾಥ್ ಮಾಡಿದ ಟೀಕೆಗಳಿಂದ ಮನನೊಂದು ರಾಜೀನಾಮೆ ನೀಡುತಿದ್ದೇನೆ ಎಂದಿದ್ದಾರೆ.



ಚಾಮುಂಡಿ ಬೆಟ್ಟಕ್ಕೆ ಬರೋಕೆ ನಾನ್ ರೆಡಿ, ನೀವೂ ಬರ್ತೀರಾ? ಸಾರಾ ಮಹೇಶ್‌ಗೆ ವಿಶ್ವನಾಥ್ ಸವಾಲ್

ನನ್ನ ವಿರುದ್ದ ಬಳಸಿರುವ ಪದಗಳು ಮನಸ್ಸಿಗೆ ಘಾಸಿ ಉಂಟುಮಾಡಿದೆ. ಅಶ್ಲೀಲ ಆರೋಪ ಹೊತ್ತು ಸಾರ್ವಜನಿಕ ಜೀವನದಲ್ಲಿ ಇರಲು ನನಗೆ ಮನಸ್ಸಿಲ್ಲ. ಆದ್ದರಿಂದ ಸ್ವಇಚ್ಛೆಯಿಂದ ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದರು.



ಈ ಬಗ್ಗೆ ತಮ್ಮ ಪತ್ರದಲ್ಲಿ ಅವರು ಹೀಗೆ ಉಲ್ಲೇಖಿಸಿದ್ದಾರೆ.,

" ನಾನು ಈಗಲೂ ಸಹ ಸದನದ ಒಳಗೆ ಮತ್ತು ಹೊರಗೆ ಮಾಡಿರುವ ಆರೋಪಗಳಿಗೆ ಸಾಕ್ಷಿ ಒದಗಿಸಲು ಸಿದ್ದನಿದ್ದೇನೆ. ಆದರೆ ನನ್ನ ವಿರುದ್ಧ ಅವರು ಮಾಡಿರುವ ಆರೋಪವನ್ನು ಸಾಬೀತುಪಡಿಸಲಿ ಅಥವಾ ಸಾಬೀತುಪಡಿಸಲಾಗದಿದ್ದಲ್ಲಿ ಧರ್ಮಸ್ಥಳ ಅಥವಾ ಚಾಮುಂಡಿಬೆಟ್ಟಕ್ಕೆ ಬಂದು ನನ್ನ ಮೇಲೆ ಅವರು ಮಾಡಿರುವ ಆರೋಪಗಳು ಸತ್ಯವೆಂದು ಪ್ರಮಾಣ ಮಾಡಲಿ. ಇಲ್ಲವೆಂದಲ್ಲಿ ನಾನು ಅವರ ಮೇಲೆ ಮಾಡಿರುವ ಕೆಲವು ಆರೋಪಗಳಿಗೆ ಸಾಕ್ಷಿಗಳನ್ನು ನೀಡಿ ಪ್ರಮಾಣ ಮಾಡುತ್ತೇನೆ. ತಾವು ನಾನು ನಂಬಿಕೆ ಇಟ್ಟಿರುವ ಸಜ್ಜನ ರಾಜಕಾರಣಿಗಳಲ್ಲಿ ಒಬ್ಬರಾಗಿರುವುದರಿಂದ ದಯಮಾಡಿ ಈ ನನ್ನ ಮನವಿಯನ್ನು ಪರಿಶೀಲಿಸಿ ಕೂಡಲೇ ಅತಿ ಜರೂರೆಂದು ಭಾವಿಸಿ ಕ್ರಮ ವಹಿಸಬೇಕೆಂದು ಕೋರುತ್ತೇನೆ. ಇಲ್ಲವಾದಲ್ಲಿ ಇಂತಹ ಅಶ್ಲೀಲ ಆರೋಪವನ್ನು ಹೊತ್ತುಕೊಂಡು ಸಾರ್ವಜನಿಕ ಜೀವನದಲ್ಲಿ ಇರಲು ಮನಸ್ಸಾಗುತ್ತಿಲ್ಲ. ಮೇಲ್ಕಂಡ ಎಲ್ಲಾ ಕಾರಣಗಳಿಂದಾಗಿ ನೊಂದು ಸ್ವಇಚ್ಚೆಯಿಂದ ವಿಧಾನ ಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೀದ್ದೇನೆ.

ವಂದನೆಗಳೊಂದಿಗೆ, ತಮ್ಮ ವಿಶ್ವಾಸಿ ಸಾ.ರಾ. ಮಹೇಶ್

‘ವೈಯಕ್ತಿಕ ವಿಚಾರ ನಿಲ್ಲಿಸಿ’; ಸಾರಾ ಮಹೇಶ್‌ ವಿರುದ್ಧ ಕದನ ವಿರಾಮ ಘೋಷಿಸಿದ ವಿಶ್ವನಾಥ್‌


ಈ ಹಿಂದೆ ಸೆಪ್ಟೆಂಬರ್ 24 ರಂದು ತಾವು ಬರೆದ ರಾಜೀನಾಮೆ ಪತ್ರದಲ್ಲಿ ಕೂಡ, ವೈಯಕ್ತಿಕ ತೇಜೋವಧೆಗೆ ಮನನೊಂದು ಮತ್ತು ಹೆಚ್ ವಿಶ್ವನಾಥ್ ಅವರು ಮಾಡಿರುವ ಟೀಕೆಯಿಂದ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದರು. ಆದರೆ ಅವರ ರಾಜೀನಾಮೆ ಪತ್ರ ಅಂಗೀಕಾರವಾಗಿರಲಿಲ್ಲ. ಇಂದು ಮತ್ತೆ ತಮ್ಮ ರಾಜೀನಾಮೆ ಬಗ್ಗೆ ಎರಡನೇ ಪತ್ರವನ್ನು ಸಾ.ರಾ ಮಹೇಶ್ ಬರೆದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ