ಆ್ಯಪ್ನಗರ

ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ನೇಮಕಾತಿಗೆ ಸರ್ಕಾರ ಬ್ರೇಕ್, ಹೋರಾಟದ ಎಚ್ಚರಿಕೆ ನೀಡಿದ ಹೊರಟ್ಟಿ

ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರ ನೇಮಕಾತಿಗೆ ಕೊರೊನಾ ಕಾರಣ ನೀಡಿ ತಡೆ ಒಡ್ಡಿದ ಸರ್ಕಾರದ ಕ್ರಮವನ್ನು ವಿಧಾನಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಖಂಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಈ ಕುರಿತಾಗಿ ಹೇಳಿದ್ದಿಷ್ಟು.

Vijaya Karnataka Web 16 Jun 2020, 2:53 pm
ಬೆಂಗಳೂರು: ಕೊರೊನಾ ಹೆಸರಿನಲ್ಲಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ನೇಮಕಾತಿಗೆ ರಾಜ್ಯ ಸರ್ಕಾರ ತಡೆ ಒಡ್ಡಿರುವುದನ್ನು ಜೆಡಿಎಸ್‌ ಮುಖಂಡ ಬಸವರಾಜ್ ಹೊರಟ್ಟಿ ಖಂಡಿಸಿದ್ದಾರೆ. ಸರ್ಕಾರ ತನ್ನ ನಿರ್ಧಾರವನ್ನು ವಾಪಸ್‌ ಪಡೆಯದೇ ಇದ್ದರೆ ಹೋರಾಟ ನಡೆಸುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.
Vijaya Karnataka Web horatti


ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಬಸವರಾಜ್ ಹೊರಟ್ಟಿ ಹಾಗೂ ಶ್ರೀಕಂಠೇಗೌಡ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿದರು. ಸರ್ಕಾರ ಕೊರೊನಾ ನೆಪ ಇಟ್ಟುಕೊಂಡು ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ನೇಮಕಾತಿಗೆ ಸರ್ಕಾರ ಬ್ರೇಕ್ ಹಾಕಿದೆ. ಉಪನ್ಯಾಸರ ನೇಮಕಕ್ಕೂ ಅನುಮತಿ ಕೊಟ್ಟಿಲ್ಲ. ಇದರಿಂದ ಅನೇಕ ಅನುದಾನಿತ ಶಿಕ್ಷಣ ಸಂಸ್ಥೆಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಾಲೆ ಶುಲ್ಕ ಕಟ್ಟುವುದಿಲ್ಲ ಎಂದು ಹೇಳುವ ಮುನ್ನ ಈ ಲೇಖನ ಓದಿರಿ

ಅನುದಾನಿತ ಶಿಕ್ಷಣ ಸಂಸ್ಥೆಗಳ ಅನುದಾನಕ್ಕೆ ಆರ್ಥಿಕ ಇಲಾಖೆಯಿಂದ ಕತ್ತರಿ ಹಾಕಲಾಗಿದೆ. ಸರ್ಕಾರ ಕೂಡಲೇ ಅನುದಾನಿತ ಶಿಕ್ಷಣ ಸಂಸ್ಥೆಗಳ ನೇಮಕಾತಿಗೆ ಅವಕಾಶ ನೀಡಬೇಕು. ಶಿಕ್ಷಣ, ಆರೋಗ್ಯ, ಪೊಲೀಸ್ ಇಲಾಖೆಗೆ ಯಾವುದೇ ನಿಬಂಧನೆ ಹಾಕಬಾರದು ಎಂದು ಅವರು ಒತ್ತಾಯಿಸಿದ್ದಾರೆ.

ಈ ವಿಚಾರವಾಗಿ ಆರ್ಥಿಕ ಇಲಾಖೆಗೆ ಹೊರಡಿಸಿರೋ ಆದೇಶ ಹಿಂಪಡೆಯಬೇಕು. ಇದಕ್ಕೆ ಮೂರು ತಿಂಗಳ ಗಡುವು ನೀಡಲಾಗುವುದು ಎಂದ ಅವರು ಇಲ್ಲದಿದ್ರೆ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂಬ ಎಚ್ಚರಿಕೆ ನೀಡಿದ್ದಾರೆ.

ಆನ್ ಲೈನ್ ಕ್ಲಾಸ್ ಗೆ ಹೊರಟ್ಟಿ ವಿರೋಧ

ಕೊರೊನಾ ಲಾಕ್‌ಡೌನ್ ಕಾರಣದಿಂದಾಗಿ ಆನ್‌ಲೈನ್ ತರಗತಿಗಳನ್ನು ನಡೆಸಲು ಸರ್ಕಾರದ ನಿರ್ಧಾರಕ್ಕೂ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಹಳ್ಳಿಗಳಲ್ಲಿ ಕರೆಂಟ್ ಎಲ್ಲಿದೆ, ಸ್ಮಾರ್ಟ್ ಫೋನ್ ಎಲ್ಲಿದೆ. ಇದು ಹೇಗೆ ನಡೆಯುತ್ತದೋ ಗೊತ್ತಿಲ್ಲ ಎಂದ ಅವರು 10 ನೇ ತರಗತಿವರೆಗೆ ಆನ್ ಲೈನ್ ತರಗತಿ ಮಾಡಬಾರದು ಎಂದು ತಾಕೀತು ಮಾಡಿದರು.

ರಾಜ್ಯದಲ್ಲಿ ಪೂರ್ಣ ಪ್ರಮಾಣದ ಅನ್‌ಲಾಕ್‌ ! ಕೇಂದ್ರದ ಅನುಮತಿ ಪಡೆಯಲು ಬಿಎಸ್‌ವೈ ನಿರ್ಧಾರ

ಭೂ ಸುಧಾರಣೆ ಕಾಯ್ದೆಗೆ ಹೊರಟ್ಟಿ ವಿರೋಧ

ರಾಜ್ಯ ಸರ್ಕಾರದ ವಿವಾದಿತ ಭೂಸುಧಾರಣೆ ಕಾಯ್ದೆಗೂ ಬಸವರಾಜ್ ಹೊರಟ್ಟಿ ವಿರೋಧ ವ್ಯಕ್ತಪಡಿಸಿದ್ದಾರೆ. ಯಾರು ಬೇಕಾದರೂ ಕೃಷಿ ಭೂಮಿ ಖರೀದಿ ಮಾಡಬಹುದು ಅಂತ ಆದೇಶ ಹೊರಡಿಸಿದ್ದಾರೆ. ಈ ಕಾನೂನು ಸರಿಯಿಲ್ಲ. ರಾಜ್ಯದಲ್ಲಿ 28% ಭೂಮಿ ರಿಯಲ್ ಎಸ್ಟೇಟ್ ಗೆ ಹೋಗಿದೆ.

ಈಗ ಈ ಕಾಯ್ದೆ ತಂದ್ರೆ ಮತ್ತಷ್ಟು ಭೂಮಿ ರಿಯಲ್ ಎಸ್ಟೇಟ್ ಗೆ ಹೋಗುತ್ತೆ. ಕಾಯ್ದೆಯಲ್ಲಿ ಲೋಪ ಇದೆ ಎಂದರು.
ಕೃಷಿಗೆ ತೆಗೆದುಕೊಂಡ ಭೂಮಿ ಕೃಷಿಗೆ ಬಳಸಬೇಕು, ಇಲ್ಲದೇ ಹೋದರೆ ಅವರನ್ನು ಜೈಲಿಗೆ ಕಳುಹಿಸಿ ಈ ನಿಟ್ಟಿನಲ್ಲಿ ಇಂತಹ ತಿದ್ದುಪಡಿ ಸರ್ಕಾರ ತರಬೇಕು ಎಂದು ಅವರು ಒತ್ತಾಯಿಸಿದರು. ಬಿಎಸ್‌ವೈ ತನ್ನನ್ನು ರೈತರ ಪರ ಎಂದು ಕರೆದುಕೊಳ್ಳುತ್ತಾರೆ. ಹಸಿರು ಟವೆಲ್ ಹಾಕಿಕೊಳ್ಳುತ್ತಾರೆ. ಆದರೆ ಈ ಕಾಯ್ದೆ ಜಾರಿಗೆ ತರುವುದರಿಂದ ರೈತರಿಗೆ ಅನ್ಯಾಯವಾಗಲಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ