ಆ್ಯಪ್ನಗರ

ಕುಮಾರಸ್ವಾಮಿ ನಡವಳಿಕೆ ವಿರುದ್ಧ ಜೆಡಿಎಸ್‌ ಎಂಎಲ್ಸಿಗಳ ಅಸಮಧಾನ

ಯಡಿಯೂರಪ್ಪ ತಮಗಾಗಿ ಕೆಲಸ ಮಾಡಿದವರಿಗೆ ಹುಡುಕಿ ಹುದ್ದೆ, ಸ್ಥಾನಮಾನ ಕೊಡುತ್ತಿದ್ದಾರೆ. ಇಂತಹ ಔದಾರ್ಯವನ್ನು ಕುಮಾರಸ್ವಾಮಿ ತೋರಲಿಲ್ಲ ಎಂದು ಸಭೆಯಲ್ಲಿ ವಿಧಾಣ ಪರಿಷತ್ತಿನ ಸದಸ್ಯರು ಬೇಸರ ವ್ಯಕ್ತಪಡಿಸಿದರು.

Vijaya Karnataka 11 Oct 2019, 11:44 pm

ಬೆಂಗಳೂರು: ಹಲವು ಜೆಡಿಎಸ್‌ ಶಾಸಕರು ಬೇಲಿ ಹಾರಲು ಸಿದ್ಧರಾಗಿದ್ದಾರೆ ಎಂಬ ಮಾತುಗಳ ಬೆನ್ನಲ್ಲೇ, ಎಂಎಲ್ಸಿಗಳು ಶುಕ್ರವಾರ ಸಭೆ ಸೇರಿ ಪಕ್ಷದ ನಾಯಕತ್ವದ ವಿರುದ್ಧ ಅಸಮಾಧಾನ ತೋಡಿಕೊಂಡಿದ್ದಾರೆ.
Vijaya Karnataka Web Former Karnataka Chief Minister HD Kumaraswamy


ಮೇಲ್ಮನೆಯಲ್ಲಿ ಜೆಡಿಎಸ್‌ ಗುಂಪಿನ ನಾಯಕ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಉಪಸಭಾಪತಿ ಕೊಠಡಿಯಲ್ಲಿ ಸಭೆ ಸೇರಿದ ಎಂಎಲ್ಸಿಗಳು ಮಾಜಿ ಸಿಎಂ ಕುಮಾರಸ್ವಾಮಿ ನಡವಳಿಕೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಭೋಜೇಗೌಡ ಒಬ್ಬರನ್ನು ಜತೆಗಿಟ್ಟುಕೊಂಡು ಓಡಾಡುವ ಕುಮಾರಸ್ವಾಮಿ ಪಕ್ಷಕ್ಕಾಗಿ ದುಡಿದ ನಮ್ಮೆಲ್ಲರನ್ನೂ ಸಂಪೂರ್ಣವಾಗಿ ಅಲಕ್ಷಿಸಿದ್ದಾರೆ. 2ನೇ ದರ್ಜೆ ನಾಗರಿಕರಂತೆ ನಮ್ಮನ್ನೆಲ್ಲಾ ನಡೆಸಿಕೊಂಡರು ಎಂದು ಅಳಲು ತೋಡಿಕೊಂಡಿದ್ದಾರೆ.

ಮನಸ್ಸು ಮಾಡಿದರೆ ಪರಿಹಾರಕ್ಕೆ 15,000 ಕೋಟಿ ರೂ. ಹೊಂದಿಸಬಹುದು: ಎಚ್‌ಡಿಕೆ

ಮೊದಲಿಗೆ ಹೊರಟ್ಟಿ ಅವರೇ ಮಾತು ಆರಂಭಿಸಿ, ''ಪರಿಷತ್‌ನಲ್ಲಿಅತೀ ಹಿರಿಯ ಸದಸ್ಯನಾದ ನನಗೇ ಕಳೆದ 7 ವರ್ಷಗಳಿಂದ ನನ್ನ ಹಿರಿತನಕ್ಕೆ ಬೆಲೆ ಸಿಕ್ಕಿಲ್ಲ. ಮೈತ್ರಿ ಸರಕಾರದಲ್ಲಿ ಸಭಾಪತಿ ಆಗುವ ಅವಕಾಶ ತಪ್ಪಿಸಿದರು. ಮಂತ್ರಿಗಿರಿಯನ್ನೂ ನೀಡಲಿಲ್ಲ. ಇನ್ನೂ ಎಷ್ಟು ದಿನ ಈ ನೋವನ್ನು ಸಹಿಸಿಕೊಂಡಿರಬೇಕು. ನಮ್ಮ ಭವಿಷ್ಯ ಏನು?" ಎಂದು ನೇರವಾಗಿಯೇ ಅಸಮಾಧಾನ ವ್ಯಕ್ತಪಡಿಸಿದರು ಎನ್ನಲಾಗಿದೆ.

ಹೊರಟ್ಟಿ ಅವರ ನೋವಿಗೆ ಉಳಿದ ಎಂಎಲ್ಸಿಗಳೂ ಧ್ವನಿಗೂಡಿಸಿ, ಯಡಿಯೂರಪ್ಪ ತಮಗಾಗಿ ಕೆಲಸ ಮಾಡಿದವರಿಗೆ ಹುಡುಕಿ ಹುದ್ದೆ, ಸ್ಥಾನಮಾನ ಕೊಡುತ್ತಿದ್ದಾರೆ. ಇಂತಹ ಔದಾರ್ಯವನ್ನು ಕುಮಾರಸ್ವಾಮಿ ತೋರಲಿಲ್ಲ ಎಂದು ಸಭೆಯಲ್ಲಿ ಬೇಸರ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ