ಆ್ಯಪ್ನಗರ

ಪಕ್ಷ ಸಂಘಟನೆಗೆ ಜಾತಿವಾರು ಸಭೆಗೆ ಮುಂದಾದ ಜೆಡಿಎಸ್‌

ಜಾತಿವಾರು ಸಭೆ, ಸಮಾವೇಶಗಳ ಮೂಲಕ ಪಕ್ಷ ಸಂಘಟನೆ ಬಲಪಡಿಸಲು ಜೆಡಿಎಸ್‌ ಮುಂದಾಗಿದೆ...

Vijaya Karnataka 16 Jun 2019, 5:00 am
ಬೆಂಗಳೂರು: ಜಾತಿವಾರು ಸಭೆ, ಸಮಾವೇಶಗಳ ಮೂಲಕ ಪಕ್ಷ ಸಂಘಟನೆ ಬಲಪಡಿಸಲು ಜೆಡಿಎಸ್‌ ಮುಂದಾಗಿದೆ.
Vijaya Karnataka Web jds symbol


ಸಣ್ಣ ಪುಟ್ಟ ಜಾತಿ, ಸಮುದಾಯಗಳ ಉತ್ಸಾಹಿ ಮುಂದಾಳುಗಳನ್ನು ಗುರುತಿಸಿ ಪಕ್ಷ ಸಂಘಟನೆ ಚುರುಕುಗೊಳಿಸುವ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರ ಒತ್ತಾಸೆಯಂತೆ ಪಕ್ಷದ ಜಾತಿವಾರು ಸರಣಿ ಸಭೆಗಳು ಚುರುಕು ಪಡೆದುಕೊಂಡಿವೆ.

ಶುಕ್ರವಾರ ಪರಿಶಿಷ್ಟರ ವಿಭಾಗದ ಸಭೆ ನಡೆದಿದ್ದು, ಭಾನುವಾರ ಪಕ್ಷದ ಕಚೇರಿಯಲ್ಲಿ ಉಪ್ಪಾರ ಸಮುದಾಯದ ಸಭೆ ನಡೆಯಲಿದೆ. ಸಮುದಾಯದ ನಾಯಕರು ಹಾಗೂ ರಾಜ್ಯದ ನಾನಾ ಭಾಗಗಳಿಂದ ಸಮುದಾಯದ ಪ್ರಮುಖರನ್ನು ಸಭೆಗೆ ಆಹ್ವಾನಿಸಲಾಗಿದೆ.

ಜೆಡಿಎಸ್‌ ಎಸ್‌ಸಿ ಮತ್ತು ಎಸ್‌ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಎ.ಆನಂದ್‌ ನೇತೃತ್ವದಲ್ಲಿ ಘಟಕದ ಪದಾಧಿಕಾರಿಗಳು ಹಾಗೂ ಜಿಲ್ಲಾಧ್ಯಕ್ಷರ ಸಭೆ ಶುಕ್ರವಾರ ನಡೆದು, ಪಕ್ಷ ಸಂಘಟನೆ ಬಲಪಡಿಸಲು ಹಾಗೂ ಘಟಕದ ಮೂಲಕ 10 ಲಕ್ಷ ಸದಸ್ಯರ ನೋಂದಣಿಗೆ ತೀರ್ಮಾನ ಕೈಗೊಳ್ಳಲಾಗಿದೆ. ಶಾಸಕರಾದ ಬಿ.ಬಿ.ನಿಂಗಯ್ಯ, ದೇವಾನಂದ ಚವ್ಹಾಣ್‌, ನಿಸರ್ಗ ನಾರಾಯಣಸ್ವಾಮಿ, ಶ್ರೀನಿವಾಸಮೂರ್ತಿ ಸೇರಿದಂತೆ ಹಲವು ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ