ಆ್ಯಪ್ನಗರ

ಜೆಡಿಎಸ್‌ಗೆ ನೂತನ ಸಾರಥಿ ಮಧು ಸಾಧ್ಯತೆ

ಆಷಾಢ ಒಳಗೆ ಪಕ್ಷಕ್ಕೆ ನೂತನ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಲು ಜೆಡಿಎಸ್‌ ವರಿಷ್ಠ ಎಚ್‌ಡಿ...

Vijaya Karnataka 26 Jun 2019, 5:00 am
ಬೆಂಗಳೂರು: ಆಷಾಢ ಒಳಗೆ ಪಕ್ಷಕ್ಕೆ ನೂತನ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಲು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಮುಂದಾಗಿದ್ದು, ಪರಿಶಿಷ್ಟ ಅಥವಾ ಹಿಂದುಳಿದ ವರ್ಗ ಪೈಕಿ ಯಾರಿಗೆ ಪಟ್ಟ ಕಟ್ಟುವುದು ಎಂಬ ಗೊಂದಲದಲ್ಲಿದ್ದಾರೆ.
Vijaya Karnataka Web madu


ನೂತನ ಅಧ್ಯಕ್ಷರನ್ನು ಈ ವಾರಾಂತ್ಯದೊಳಗೇ ನೇಮಕ ಮಾಡಲು ದೇವೇಗೌಡರು ಬಯಸಿದ್ದಾರೆ. ಸತತ 3 ಚುನಾವಣೆ ಸೋತಿರುವ ಮಧು ಬಂಗಾರಪ್ಪ ಅವರಿಗೆ ಯುವ ಘಟಕದ ಅಧ್ಯಕ್ಷ ಸ್ಥಾನದಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಡ್ತಿ ಕೊಡುವ ಚಿಂತನೆ ನಡೆದಿದೆ. ಇದರಿಂದ ಹಿಂದುಳಿದ ವರ್ಗ ಮತ್ತು ಯುವಕರೊಬ್ಬರಿಗೆ ಅವಕಾಶ ಸಿಗುವುದು ಎಂಬ ಲೆಕ್ಕಾಚಾರ ನಡೆದಿದೆ. ಮಧು ಹೆಸರನ್ನು ಹಾಲಿ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಪ್ರಸ್ತಾಪಿಸಿದ್ದಾರೆ. ಹಿಂದುಳಿದ ವರ್ಗದ ಕೋಟಾದಲ್ಲಿ ಮಾಜಿ ಶಾಸಕ ಸುರೇಶ್‌ಬಾಬು ಅಥವಾ ಎಚ್‌.ಸಿ.ನೀರಾವರಿ ರೇಸ್‌ನಲ್ಲಿದ್ದಾರೆ.

ಪರಿಶಿಷ್ಟ ಸಮುದಾಯಕ್ಕೆ ಸೇರಿದ ಶಾಸಕ ಎಚ್‌.ಕೆ.ಕುಮಾರಸ್ವಾಮಿ ಅಥವಾ ಬಿ.ಬಿ.ನಿಂಗಯ್ಯ ನೇಮಕವಾಗುವ ಸಾಧ್ಯತೆಗಳೂ ಇವೆ. ಪಕ್ಷದ ಹಿರಿಯ ಶಾಸಕರಾದ ಕುಮಾರಸ್ವಾಮಿ ಅವರಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ಸಿಕ್ಕಿಲ್ಲ. ದಲಿತರೊಬ್ಬರಿಗೆ ಅವಕಾಶ ನೀಡುವುದಾದರೆ ಅವರನ್ನೇ ಏಕೆ ಪರಿಗಣಿಸಬಾರದು ಎಂಬ ಚಿಂತನೆಯಲ್ಲಿ ದೇವೇಗೌಡರು ತೊಡಗಿದ್ದಾರೆ. ಪಕ್ಷದ ನೆಲೆ ವಿಸ್ತರಣೆ ತವಕದಲ್ಲಿ 'ಅಹಿಂದ' ಸಮುದಾಯವನ್ನು ಜೆಡಿಎಸ್‌ ತೆಕ್ಕೆಗೆ ಸೆಳೆಯುವ ಗಂಭೀರ ಪ್ರಯತ್ನ ಆರಂಭಿಸಿರುವ ದೇವೇಗೌಡರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ಅಥವಾ ದಲಿತರಿಗೆ ಅವಕಾಶ ಕಲ್ಪಿಸುವುದಂತೂ ಸ್ಪಷ್ಟ ಎಂದು ಜೆಡಿಎಸ್‌ ಮೂಲಗಳು ಹೇಳಿವೆ.

ಜುಲೈ 2ರ ಬಳಿಕ ಆಷಾಢ ಆರಂಭವಾಗುತ್ತಿದ್ದು, ಅಷ್ಟರೊಳಗೆ ನೂತನ ರಾಜ್ಯಾಧ್ಯಕ್ಷರನ್ನು ನೇಮಕ ಮಾಡುವುದಕ್ಕೆ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ