ಆ್ಯಪ್ನಗರ

ಜೆಡಿಎಸ್ ತನ್ನ ಚಿಹ್ನೆಯನ್ನು ''ಸೂಟ್‌ಕೇಸ್‌ ಅನ್ನು ತಲೆ ಮೇಲೆ ಹೊತ್ತ ಕಾಂಟ್ರ್ಯಾಕ್ಟರ್'' ಅನ್ನಾಗಿ ಬದಲಿಸಿಕೊಳ್ಳಲಿ: ಸಿ.ಟಿ.ರವಿ ವ್ಯಂಗ್ಯ

ಭ್ರಷ್ಟ ಎಂಜಿನಿಯರ್‌, ಕಾಂಟ್ರ್ಯಾಕ್ಟರ್‌ಗಳ ಮನೆ ಮೇಲೆ ನಡೆದ ಐಟಿ ದಾಳಿಯನ್ನು ವಿರೋಧಿಸುವ ಜೆಡಿಎಸ್‌ ತಮ್ಮ ಪಕ್ಷದ ಚಿಹ್ನೆಯನ್ನು ಬದಲಾಯಿಸಿಕೊಳ್ಳಲಿ. ಕಾಂಟ್ರ್ಯಾಕ್ಟರ್ ಸ್ಯೂಟ್‌ಕೇಸ್‌ ಅನ್ನು ತನ್ನ ತಲೆ ಮೇಲೆ ಇಟ್ಟುಕೊಂಡಿರುವ ಚಿಹ್ನೆಯನ್ನು ಜೆಡಿಎಸ್‌ ತನ್ನ ಪಕ್ಷದ ಚಿಹ್ನೆಯನ್ನಾಗಿ ಮಾಡಿಕೊಳ್ಳಬೇಕು ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.

Vijaya Karnataka Web 31 Mar 2019, 5:25 pm
ಬೆಂಗಳೂರು: ಚಿಕ್ಕಮಗಳೂರು ಬಿಜೆಪಿ ಶಾಸಕ ಸಿ.ಟಿ.ರವಿ ಜೆಡಿಎಸ್‌ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಭ್ರಷ್ಟ ಎಂಜಿನಿಯರ್‌, ಕಾಂಟ್ರ್ಯಾಕ್ಟರ್‌ಗಳ ಮನೆ ಮೇಲೆ ನಡೆದ ಐಟಿ ದಾಳಿಯನ್ನು ವಿರೋಧಿಸುವ ಜೆಡಿಎಸ್‌ ತಮ್ಮ ಪಕ್ಷದ ಚಿಹ್ನೆಯನ್ನು ಬದಲಾಯಿಸಿಕೊಳ್ಳಲಿ ಎಂದು ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.
Vijaya Karnataka Web ct ravi


ಈ ಸಂಬಂಧ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ ಸಿ.ಟಿ.ರವಿ, ಜೆಡಿಎಸ್‌ ನಾಯಕರಾದ ಎಚ್. ಡಿ. ಕುಮಾರಸ್ವಾಮಿ ಹಾಗೂ ದೇವೇಗೌಡರು ಭ್ರಷ್ಟ ಎಂಜಿನಿಯರ್‌ಗಳು ಹಾಗೂ ಕಾಂಟ್ರ್ಯಾಕ್ಟರ್‌ಗಳ ಮನೆ ಮೇಲೆ ನಡೆದ ಐಟಿ ದಾಳಿಗೆ ವಿರೋಧಿಸುತ್ತಾರೆ. ಹೀಗಾಗಿ, ಅವರು ತಮ್ಮ ಪಕ್ಷದ ಚಿಹ್ನೆಯನ್ನು ಬದಲಾಯಿಸಿಕೊಳ್ಳಲು ಇದು ಸರಿಯಾದ ಸಮಯ ಎಂದು ಪ್ರಶ್ನೆ ಮಾಡಿದ್ದಾರೆ.

ಸದ್ಯ, ''ಭತ್ತವನ್ನು ತಲೆ ಮೇಲೆ ಹೊತ್ತಿರುವ ರೈತ ಮಹಿಳೆ''ಯ ಚಿಹ್ನೆಯನ್ನು ಜೆಡಿಎಸ್‌ ಪಕ್ಷ ಹೊಂದಿದೆ. ಆದರೆ, ಅವರು ಈಗಲೇ ತಮ್ಮ ಪಕ್ಷದ ಲೋಗೋವನ್ನು ಬದಲಿಸಬೇಕು. ''ಕಾಂಟ್ರ್ಯಾಕ್ಟರ್ ಸೂಟ್‌ಕೇಸ್‌ ಅನ್ನು ತನ್ನ ತಲೆ ಮೇಲೆ ಇಟ್ಟುಕೊಂಡಿರುವ'' ಚಿಹ್ನೆಯನ್ನು ಜೆಡಿಎಸ್‌ ತನ್ನ ಪಕ್ಷದ ಚಿಹ್ನೆಯನ್ನಾಗಿ ಮಾಡಿಕೊಳ್ಳಬೇಕು ಎಂದು ಚಿಕ್ಕಮಗಳೂರು ನಗರದ ಬಿಜೆಪಿ ಶಾಸಕ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.


ಇತ್ತೀಚೆಗೆ ರಾಜ್ಯದ ಹಲವೆಡೆ ನಡೆದ ಐಟಿ ದಾಳಿಯನ್ನು ಜೆಡಿಎಸ್‌ ಹಾಗೂ ಕಾಂಗ್ರೆಸ್ ನಾಯಕರು ವಿರೋಧಿಸಿದ್ದರು. ಅಲ್ಲದೆ, ಬಿಜೆಪಿ ಹಾಗೂ ಐಟಿ ಇಲಾಖೆ ವಿರುದ್ಧ ಪ್ರತಿಭಟನೆಯನ್ನೂ ಮಾಡಿದ್ದರು. ಈ ಹಿನ್ನೆಲೆ ಶಾಸಕ ಸಿ.ಟಿ.ರವಿ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ರೀತಿ ವ್ಯಂಗ್ಯವಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ