ಆ್ಯಪ್ನಗರ

ದೇವೇಗೌಡ, ಖರ್ಗೆ ಸೋಲು ನೋವು ತಂದಿದೆ: ಡಿಕೆಶಿ

ಗೌಡರು, ಖರ್ಗೆ, ಮೊಯ್ಲಿ ಅವರಂತಹ ಹಿರಿಯರ ಸೋಲು ನಿಜಕ್ಕೂ ಶಾಕ್‌ ತಂದಿದೆ. ಕಾಂಗ್ರೆಸ್‌ನಿಂದ ಒಬ್ಬರು ಸಂಸದರಷ್ಟೇ ಲೋಕಸಭೆಗೆ ಹೋಗಿದ್ದಾರೆಂದರೆ ನಂಬಲು ಸಾಧ್ಯವಾಗುತ್ತಿಲ್ಲ.

Vijaya Karnataka Web 28 May 2019, 8:35 pm
ಬೆಂಗಳೂರು: ದೇವೇಗೌಡರು, ಮಲ್ಲಿಕಾರ್ಜುನ ಖರ್ಗೆ ಸೇರಿ ಹಿರಿಯರ ಸೋಲು ದಿಗ್ಭ್ರಮೆ ತಂದಿದೆಯೆಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.
Vijaya Karnataka Web Dev


ಲೋಕಸಭೆ ಚುನಾವಣೆ ಫಲಿತಾಂಶ ಸಂದರ್ಭ ವಿದೇಶ ಪ್ರವಾಸದಲ್ಲಿದ್ದ ಡಿಕೆಶಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ನಮ್ಮ ನಿರೀಕ್ಷೆಗೆ ವಿರುದ್ಧವಾದ ಫಲಿತಾಂಶ ಬಂದಿದೆ. ಗೌಡರು, ಖರ್ಗೆ, ಮೊಯ್ಲಿ ಅವರಂತಹ ಹಿರಿಯರ ಸೋಲು ನಿಜಕ್ಕೂ ಶಾಕ್‌ ತಂದಿದೆ. ಕಾಂಗ್ರೆಸ್‌ನಿಂದ ಒಬ್ಬರು ಸಂಸದರಷ್ಟೇ ಲೋಕಸಭೆಗೆ ಹೋಗಿದ್ದಾರೆಂದರೆ ನಂಬಲು ಸಾಧ್ಯವಾಗುತ್ತಿಲ್ಲ.

ಎಲ್ಲಿ ಏನು ತಪ್ಪಾಗಿದೆಯೆಂದು ಹೇಳುವುದೂ ಕಷ್ಟವಾಗುತ್ತಿದೆ. ಸಹೋದರ ಡಿ.ಕೆ.ಸುರೇಶ್‌ ಆಯ್ಕೆಯಾಗಿದ್ದರೂ ಹಿರಿಯರ ಸೋಲಿನ ನಡುವೆ ಈ ಗೆಲುವಿನಿಂದ ಖುಷಿಯಾಗುತ್ತಿಲ್ಲ. ಅವರೊಬ್ಬರೇ ಸಂಸತ್ತಿನಲ್ಲಿದ್ದರೆ ಏನು ಪ್ರಯೋಜನ ? ನಮ್ಮ ಮತ್ತು ಜೆಡಿಎಸ್‌ ಕಾರ್ಯಕರ್ತರೆಲ್ಲ ಸೇರಿ ಅವರನ್ನು ಆಯ್ಕೆ ಮಾಡಿದ್ದಾರೆ ಎಂದರು.

ಮೈತ್ರಿ ವಿಚಾರದಲ್ಲಿ ಈಗೇನೂ ಹೇಳುವುದಿಲ್ಲ. ಗಾಂಧೀಜಿ ಹೇಳಿದಂತೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು, ಕಿವಿಗೆ ಹತ್ತಿ ಹಾಕಿಕೊಂಡು, ಬಾಯಿಗೆ ಬೀಗ ಹಾಕಿಕೊಂಡಂತೆ ನಾನು ಇದ್ದೇನೆ. ಸರಕಾರ ಉಳಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ. ಯಡಿಯೂರಪ್ಪ ಏನೇನು ಮಾಡಲು ಸಾಧ್ಯವೋ ಅದನ್ನೆಲ್ಲ ಮಾಡಲಿ.

ಲಿಂಗಾಯತರು ಸೇರಿದಂತೆ ಯಾವುದೇ ಧರ್ಮದ ಬಗ್ಗೆ ಮಾತನಾಡಲು ತಯಾರಿಲ್ಲ. ಮಾಧ್ಯಮಗಳ ಎದುರು ಹೇಳಿಕೆ ನೀಡಬಾರದೆಂದು ನಮಗೆ ಸೂಚನೆಯಿದೆ. ಅದರಂತೆ ನಡೆದುಕೊಳ್ಳುತ್ತಿದ್ದೇನೆ ಎಂದು ಪ್ರತಿಕ್ರಿಯಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ