ಆ್ಯಪ್ನಗರ

ಮೇಲ್ಜಾತಿ ಮೀಸಲು ವಿಧೇಯಕಕ್ಕೆ ಜೆಡಿಎಸ್ ಬೆಂಬಲ: ಎಚ್.ಡಿ. ದೇವೇಗೌಡ ಘೋಷಣೆ

ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಹೊರತುಪಡಿಸಿ ಉಳಿದ ಪ್ರತಿಪಕ್ಷಗಳು ವಿಧೇಯಕ ಬೆಂಬಲಿಸುವ ಸಂಕೇತಗಳನ್ನು ನೀಡಿವೆ. ಹೀಗಾಗಿ ವಿಧೇಯಕ ಅಂಗೀಕಾರವಾದರೆ ಸಾಮಾಜಿಕವಾಗಿ ಅತ್ಯಂತ ದೂರಗಾಮಿ ಪರಿಣಾಮ ಬೀರುವ ಮಹತ್ವದ ಮೀಸಲು ನೀತಿ ಜಾರಿಗೆ ಬರಲಿದೆ.

Vijaya Karnataka Web 8 Jan 2019, 3:14 pm
ಬೆಂಗಳೂರು: ಮೇಲ್ಜಾತಿಗಳ ಬಡವರಿಗೆ ಸರಕಾರಿ ಉದ್ಯೋಗ ಮತ್ತು ಉನ್ನತ ಶೀಕ್ಷಣದಲ್ಲಿ ಶೇ 10ರ ಮೀಸಲಾತಿ ಒದಗಿಸುವ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ವಿಧೇಯಕವನ್ನು ಬೆಂಬಲಿಸುವುದಾಗಿ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡ ಹೇಳಿದ್ದಾರೆ.
Vijaya Karnataka Web H.D Devegowda


ಈ ಕುರಿತು ಟ್ವೀಟ್ ಮಾಡಿರುವ ಅವರು, ಸಮಾಜದ ಎಲ್ಲ ವರ್ಗಗಳ ದುರ್ಬಲರ ಏಳಿಗೆಗೆ ಪಕ್ಷ ಬದ್ಧವಾಗಿದೆ. ನಾವು ಈ ವಿಧೇಯಕವನ್ನು ಬೆಂಬಲಿಸುತ್ತೇವೆ ಎಂದು ತಿಳಿಸಿದ್ದಾರೆ.


ಸೋಮವಾರವಷ್ಟೇ ಕೇಂದ್ರ ಸಚಿವ ಸಂಪುಟ ಅನುಮೋದಿಸಿದ್ದ ಮೇಲ್ಜಾತಿ ಮೀಸಲು ವಿಧೇಯಕವನ್ನು ಸರಕಾರ ಇಂದು (ಮಂಗಳವಾರ) ಸಂಸತ್ತಿನಲ್ಲಿ ಮಂಡಿಸಿದೆ. ಲೋಕಸಭೆಯಲ್ಲಿ ವಿಧೇಯಕ ಅಂಗೀಕಾರ ಸುಲಭವಾದರೂ, ರಾಜ್ಯಸಭೆಯಲ್ಲಿ ಅಂಗೀಕಾರವಾಗುವುದೆ? ಎಂಬುದು ಸದ್ಯದ ಪ್ರಶ್ನೆಯಾಗಿದೆ.

ಆದರೆ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಹೊರತುಪಡಿಸಿ ಉಳಿದ ಪ್ರತಿಪಕ್ಷಗಳು ವಿಧೇಯಕ ಬೆಂಬಲಿಸುವ ಸಂಕೇತಗಳನ್ನು ನೀಡಿವೆ. ಹೀಗಾಗಿ ವಿಧೇಯಕ ಅಂಗೀಕಾರವಾದರೆ ಸಾಮಾಜಿಕವಾಗಿ ಅತ್ಯಂತ ದೂರಗಾಮಿ ಪರಿಣಾಮ ಬೀರುವ ಮಹತ್ವದ ಮೀಸಲು ನೀತಿ ಜಾರಿಗೆ ಬರಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ