ಆ್ಯಪ್ನಗರ

ಉಗ್ರರ ಮನೆಯಲ್ಲಿ ಸ್ಫೋಟಕ: ಪ್ರತ್ಯೇಕ ತನಿಖೆಗೆ ಅನುಮತಿ ಕೋರಿದ ಎನ್‌ಐಎ

ಜೆಎಂಬಿ ಉಗ್ರ ಸಂಘಟನೆಗೆ ಸೇರಿದ ಉಗ್ರರು ಚಿಕ್ಕಬಾಣವಾರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಿಧ್ವಂಸಕ ...

Vijaya Karnataka 11 Jul 2019, 5:00 am
ಬೆಂಗಳೂರು: ಜೆಎಂಬಿ ಉಗ್ರ ಸಂಘಟನೆಗೆ ಸೇರಿದ ಉಗ್ರರು ಚಿಕ್ಕಬಾಣವಾರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಿಧ್ವಂಸಕ ಕೃತ್ಯ ನಡೆಸುವುದಕ್ಕೆ ಸಂಚು ರೂಪಿಸಿದ್ದ ಪ್ರಕರಣವನ್ನು ಪ್ರತ್ಯೇಕವಾಗಿ ತನಿಖೆ ನಡೆಸಲು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಕೇಂದ್ರ ಸರಕಾರದ ಅನುಮತಿ ಕೋರಿ ಪತ್ರ ಬರೆದಿದೆ.
Vijaya Karnataka Web 0907-2-2-00000 (2)


ಸ್ಫೋಟಕ ಪತ್ತೆ ಮತ್ತು ಮತ್ತು ಶಂಕಿತ ಉಗ್ರರ ವಿರುದ್ಧ ಸೋಲದೇವನಹಳ್ಳಿ ಠಾಣೆಗೆ ದೂರು ನೀಡಿರುವ ಎನ್‌ಐಎ ಅಧಿಕಾರಿಗಳು, ಬಾಡಿಗೆ ಮನೆಯಲ್ಲಿ ಭಾರಿ ಪ್ರಮಾಣದ ಸ್ಫೋಟಕ ಪತ್ತೆ ಪ್ರಕರಣವನ್ನು ಪ್ರತ್ಯೇಕ ತನಿಖೆ ನಡೆಸಲು ನಿರ್ಧರಿಸಿದ್ದಾರೆ.

ಮನೆಯಲ್ಲಿ ಪತ್ತೆಯಾಗಿರುವ ಸ್ಫೋಟಕ ಸಾಮಗ್ರಿಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ತಲೆಮರೆಸಿಕೊಂಡಿರುವ ಶಂಕಿತ ಉಗ್ರರಾದ ನಜೀರ್‌ ಶೇಖ್‌, ನಜ್ರುಲ್‌ ಇಸ್ಲಾಂ, ಆಸೀಫ್‌ ಇಕ್ಬಾಲ್‌, ಆರೀಫ್‌ ಸೇರಿದಂತೆ ಇನ್ನಿತರರ ಬಂಧನಕ್ಕೆ ಎನ್‌ಐಎ ಬಲೆ ಬೀಸಿದೆ.

ಕೂಲಿ ಕಾರ್ಮಿಕರು, ಬಟ್ಟೆ, ಬಳೆ ವ್ಯಾಪಾರಿಗಳ ಸೋಗಿನಲ್ಲಿ ಮನೆ ಬಾಡಿಗೆ ಪಡೆದಿದ್ದ ಆರೋಪಿಗಳು, ವ್ಯಾಪಾರದ ಸೋಗಿನಲ್ಲಿ ಹೊರಗೆ ಓಡಾಡುತ್ತಿದ್ದರು. ಮನೆಗೆ ಬೇಕಾದ ವಸ್ತುಗಳು ಮತ್ತು ಎಲೆಕ್ಟ್ರಿಕಲ್‌ ಕೆಲಸಕ್ಕೆಂದು ವೈರ್‌, ಸರ್ಕೂ್ಯಟ್‌ ಸೇರಿದಂತೆ ಇತರ ವಸ್ತುಗಳನ್ನು ಖರೀದಿಸಿಕೊಂಡು ಮನೆಗೆ ಬರುತ್ತಿದ್ದರು. ಜಾಲದ ಇತರರು ನೀಡಿದ ನಿರ್ದೇಶನದಂತೆ ಸ್ಫೋಟಕ್ಕೆ ಕಚ್ಚಾ ವಸ್ತುಗಳನ್ನು ಖರೀದಿ ಮಾಡಿ ಮಾಹಿತಿ ನೀಡುತ್ತಿದ್ದರು. ನಂತರ ಅವುಗಳನ್ನು ಜೋಡಿಸಿ ಸಿದ್ಧ್ದಪಡಿಸುವ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಹೊರ ರಾಜ್ಯದಲ್ಲಿ ಟೆಸ್ಟಿಂಗ್‌ ?

ಸ್ಫೋಟಕ ಸಾಮಗ್ರಿಗಳನ್ನು ತಮಿಳುನಾಡಿನ ಕೃಷ್ಣಗಿರಿ ಬಳಿಯ ಬೆಟ್ಟ ಪ್ರದೇಶಗಳಿಗೆ ತೆರಳಿ ಅಲ್ಲಿ ಸ್ಫೋಟಕಗಳನ್ನು ಟೆಸ್ಟಿಂಗ್‌ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಟೆಸ್ಟಿಂಗ್‌ ಪ್ರದೇಶ ಮತ್ತು ಅವರು ಬಾಡಿಗೆಗೆ ಇದ್ದ ಮನೆಯನ್ನು ಪತ್ತೆ ಮಾಡುವ ಕೆಲಸದಲ್ಲಿ ಎನ್‌ಐಎ ಅಧಿಕಾರಿಗಳು ತೊಡಗಿದ್ದಾರೆ.

ಕೃಷ್ಣಗಿರಿಯ ಟೆಸ್ಟಿಂಗ್‌ ಪ್ರದೇಶ ಪತ್ತೆಗೆ ತೆರಳಿದ ಅಧಿಕಾರಿಗಳು

ಜಾಲದ ಸದಸ್ಯರ ನಿರ್ದೇಶನದಂತೆ ಕಚ್ಚಾ ವಸ್ತುಗಳ ಖರೀದಿ

ಶಂಕಿತ ಉಗ್ರರ ಬಂಧನಕ್ಕೆ ಬಲೆ ಬೀಸಿದ ಎನ್‌ಐಎ

ಸ್ಫೋಟಕ ಸಾಮಗ್ರಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾ
ನೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ