ಆ್ಯಪ್ನಗರ

ಜ್ಯೋತಿಷ್ಯ ಬೆಳಕು ನೀಡುವ ವಿಜ್ಞಾನ ಶಾಸ್ತ್ರ: ಜಿ.ಎಚ್‌.ಇಮ್ರಾಪುರ್‌

'ಜ್ಯೋತಿಷ್ಯ ಮೂಢನಂಬಿಕೆಯಲ್ಲ, ಜನರ ಜೀವನದ ಅಂಧಕಾರ ತೊಲಗಿಸಿ ಬೆಳಕು ನೀಡುವ ವಿಜ್ಞಾನ ಶಾಸ್ತ್ರ' ಎಂದು ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ...

Vijaya Karnataka 12 Aug 2019, 5:00 am
ಬೆಂಗಳೂರು: 'ಜ್ಯೋತಿಷ್ಯ ಮೂಢನಂಬಿಕೆಯಲ್ಲ, ಜನರ ಜೀವನದ ಅಂಧಕಾರ ತೊಲಗಿಸಿ ಬೆಳಕು ನೀಡುವ ವಿಜ್ಞಾನ ಶಾಸ್ತ್ರ' ಎಂದು ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ ನಿರ್ದೇಶಕ ಜಿ.ಎಚ್‌. ಇಮ್ರಾಪುರ್‌ ಹೇಳಿದರು.
Vijaya Karnataka Web 1108-2-2-KSG_21


ಜ್ಞಾನಜ್ಯೋತಿ ಜ್ಯೋತಿಷ್ಯ ವಿದ್ಯಾಕೇಂದ್ರದ ವತಿಯಿಂದ ಬೆಂಗಳೂರಿನಲ್ಲಿ ಭಾನುವಾರ ಆಯೋಜಿಸಿದ್ದ 'ರಾಜ್ಯ ಮಟ್ಟದ ಜ್ಯೋತಿಷ್ಯ, ವಾಸ್ತು ಹಸ್ತಸಾಮುದ್ರಿಕಾ ಪರಿಣಿತರ ಮಹಾಸಮ್ಮಿಲನ- 2019' ಸಧಿಮಾಧಿರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಋುಷಿಮುನಿಗಳ ಕಾಲದಲ್ಲಿ ಲೋಕಕಲ್ಯಾಣಕ್ಕಾಗಿ ಮಾಡಿದ ಜ್ಯೋತಿಷ್ಯ ನಾನಾ ಕಷ್ಟ ಕಾರ್ಪಣ್ಯಗಳಿಗೆ ಸಿಲುಕಿದ ಜನರಿಗೆ ಮಾನಧಿಸಿಧಿಕ ಸ್ಥೈರ್ಯ ನೀಡಲಿದೆ. ಆದರೆ, ಜ್ಯೋತಿಷ್ಯದಲ್ಲಿ ಪೂರ್ಣ ಪ್ರಮಾಣದ ಪರಿಹಾರ ಸಾಧ್ಯವಿಲ್ಲ. ಆದರೆ, ಜೀವನದಲ್ಲಿ ಎದುರಾಗುವ ಸಂಕಷ್ಟಗಳನ್ನು ಎದುರಿಸುವ ಮನೋಬಲ ತುಂಬಲಿದೆ,'' ಎಂದರು.

ಅಧ್ಯಯನ ಮಾಡದವರಿಂದ ಮೋಸ
ಇಂದು ಮೂಲ ಗ್ರಂಥಗಳ ಅಧ್ಯಯನ ಮಾಡದೆ ಜ್ಯೋತಿಷ್ಯ ಹೇಳಿ ಜನರಿಗೆ ಮೋಸ ಮಾಡುವ ಮೂಲಕ ಹಣ ಸಂಪಾದಿಸುವವರು ಇದ್ದಾರೆ. ಇಂತಹವರ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕು. ಸಾವಿರಾರು ವರ್ಷಗಳಿಂದ ಸಾಗಿಬಂದಿರುವ ಜ್ಯೋತಿಷ್ಯವನ್ನು ಒಳ್ಳೆಯ ರೀತಿಯಲ್ಲಿ ಬಳಸಬೇಕು. ವಿಜ್ಞಾನ ಮತ್ತು ಗಣಿತ ತಿಳಿದವರಿಗೆ ಮಾತ್ರವೇ ಜ್ಯೋತಿಷ್ಯದಲ್ಲಿ ಪರಿಧಿಣಧಿತಿ ಹೊಂದಲು ಸಾಧ್ಯ. ಹೀಗಾಗಿ ಉತ್ತಮ ರೀತಿಯ ಅಧ್ಯಯನದಿಂದ ಜ್ಯೋತಿಷ್ಯ ಶಾಸ್ತ್ರವನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆಯಾಗಿದೆ,' ಎಂದು ಹೇಳಿದರು.

ಜ್ಞಾನಜ್ಯೋತಿ ಜ್ಯೋತಿಷ್ಯ ವಿದ್ಯಾಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಪ್ರೊ. ಡಾ. ಆರ್‌. ಕೃಷ್ಣಕುಮಾರ್‌ ಮಾತನಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ