ಆ್ಯಪ್ನಗರ

ಕಾವೇರಿ ಕೂಗು ಅಭಿಯಾನ ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಾಧೀಶ

ಬೆಂಗಳೂರು ಸಾರ್ವಜನಿಕರಿಂದ ಕಾವೇರಿ ಕೂಗು ಅಭಿಯಾನಕ್ಕಾಗಿ ಕೋಟ್ಯಂತರ ರೂಪಾಯಿ ಸಂಗ್ರಹ ಮಾಡುತ್ತಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯಿಂದ ನ್ಯಾಯಾಧೀಶ ಹಿಂದಕ್ಕೆ ಸರಿದಿದ್ದಾರೆ.

Vijaya Karnataka Web 23 Oct 2019, 7:22 am
ಬೆಂಗಳೂರು: ಸಾರ್ವಜನಿಕರಿಂದ ಕಾವೇರಿ ಕೂಗು ಅಭಿಯಾನಕ್ಕಾಗಿ ಕೋಟ್ಯಂತರ ರೂಪಾಯಿ ಸಂಗ್ರಹ ಮಾಡುತ್ತಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯಿಂದ ನ್ಯಾ. ಎಸ್‌.ಆರ್‌. ಕೃಷ್ಣಕುಮಾರ್‌ ಹಿಂದೆ ಸರಿದಿದ್ದಾರೆ.
Vijaya Karnataka Web cavery


ಕಾವೇರಿ ಕೂಗಿಗೆ ರೈತ ಸಂಘದ ವಿರೋಧ

ವಕೀಲ ಎ.ವಿ. ಅಮರನಾಥನ್‌ ಸಲ್ಲಿಸಿದ ಅರ್ಜಿಯ ವಿಚಾರಣೆಯು ಮಂಗಳವಾರ ಸಿಜೆ ಎ.ಎಸ್‌. ಓಕ್‌ ಹಾಗೂ ನ್ಯಾ. ಎಸ್‌.ಆರ್‌. ಕೃಷ್ಣಕುಮಾರ್‌ ಅವರಿದ್ದ ಪೀಠದ ಮುಂದೆ ಬಂದಿತ್ತು. ಆಗ ಈ ಅರ್ಜಿ ವಿಚಾರಣೆಯಿಂದ ಹಿಂದೆ ಸರಿಯುತ್ತಿರುವುದಾಗಿ ನ್ಯಾ. ಕೃಷ್ಣಕುಮಾರ್‌ ಹೇಳಿದರು. ಹಾಗಾಗಿ ಸಿಜೆ, ಈ ಅರ್ಜಿಯನ್ನು ಬೇರೊಂದು ಪೀಠದ ಮುಂದೆ ವಿಚಾರಣೆಗೆ ನಿಗದಿಪಡಿಸುವಂತೆ ಹೈಕೋರ್ಟ್‌ ರಿಜಿಸ್ಟ್ರಾರ್‌ಗೆ ಸೂಚಿಸಿ ವಿಚಾರಣೆಯನ್ನು ಮುಂದೂಡಿದರು.

ಕಾವೇರಿ ರಕ್ಷಣೆಗೆ ಬೈಕ್‌ ಹತ್ತಿದ ಸದ್ಗುರು: ಇಶಾ ಫೌಂಡೇಷನ್‌ನಿಂದ ಕಾವೇರಿ ಕೂಗು ಆಂದೋಲನ

'ಕಾವೇರಿ ಕೂಗು' ಹೆಸರಲ್ಲಿಈಶ ಫೌಂಡೇಷನ್‌ 253 ಕೋಟಿ ಸಸಿ ನೆಡುವ ಅಭಿಯಾನ ಹಮ್ಮಿಕೊಂಡಿದೆ. ಅದಕ್ಕೆ ಜನರಿಂದ ಒಂದು ಸಸಿಗೆ 42 ರೂ.ಗಳಂತೆ 10,626 ಕೋಟಿ ರೂ. ಸಂಗ್ರಹಿಸಲಾಗುತ್ತಿದೆ. ಸಸಿ ನೆಡುವುದಕ್ಕೆ ಆಕ್ಷೇಪವಿಲ್ಲ. ಆದರೆ, ಸರಕಾರಿ ಜಮೀನಿನಲ್ಲಿಇಷ್ಟೊಂದು ದೊಡ್ಡ ಸಂಖ್ಯೆಯ ಸಸಿ ನೆಡಲು ಜನರಿಂದ ಸಾವಿರಾರು ಕೋಟಿ ರೂ. ಸಂಗ್ರಹ ಮಾಡುವುದಕ್ಕೆ ವಿರೋಧವಿದೆ,'' ಎಂದು ಅರ್ಜಿದಾರರು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ