ಆ್ಯಪ್ನಗರ

ಟ್ವಿಟರ್‌ನಲ್ಲಿ ಹರಿದು ಹೋದ 'ಸ್ಪೀಕರ್' ಚಿತ್ರ ಹಾಕಿ ರಮೇಶ್ ಕುಮಾರ್ ಕಾಲೆಳೆದ ಈಶ್ವರಪ್ಪ

ಬಿಜೆಪಿ ನಾಯಕ ಕೆ ಎಸ್ ಈಶ್ವರಪ್ಪ ಅವರು ಟ್ವಿಟರ್‌ನಲ್ಲಿ ಸ್ಪೀಕರ್ ರಮೇಶ್ ಕುಮಾರ್ ಕಾಲೆಳೆದಿದ್ದಾರೆ.

Vijaya Karnataka Web 19 Jul 2019, 8:29 am
ಬೆಂಗಳೂರು: ಹರಿದು ಹೋದ ಸ್ಪೀಕರ್ (ಧ್ವನಿವರ್ದಕ) ಚಿತ್ರ ಟ್ವೀಟ್ ಮಾಡುವ ಮೂಲಕ ಬಿಜೆಪಿ ನಾಯಕ ಕೆ ಎಸ್ ಈಶ್ವರಪ್ಪ ಅವರು ಪರೋಕ್ಷವಾಗಿ ಸ್ಪೀಕರ್ ರಮೇಶ್ ಕುಮಾರ್ ಕಾಲೆಳೆದಿದ್ದಾರೆ.
Vijaya Karnataka Web speaker


ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹರಿದು ಹೋದ ಸ್ಪೀಕರ್ ಚಿತ್ರ ಟ್ವೀಟ್ ಮಾಡಿರುವ ಈಶ್ವರಪ್ಪ, ಈ ಸ್ಪೀಕರ್ ಕೆಟ್ಟು ಹೋಗಿದೆ ಎಂಬ ಶೀರ್ಷಿಕೆ ನೀಡಿದ್ದಾರೆ.


ಬಳಿಕ ಇನ್ನೊಂದು ಟ್ವೀಟ್ ಮಾಡಿರುವ ಅವರು, 'ಒಂದು ಕಡೆ ಎಲ್ಲಾ ಸಚಿವರ ರಾಜೀನಾಮೆ ನಾಟಕ, ಇನ್ನೊಂದು ಕಡೆ ರಾಜ್ಯಪಾಲರ ಆದೇಶವನ್ನು ಉಲ್ಲಂಘಿಸಿ ಕಡತಗಳಿಗೆ ಸಹಿ. ಸಚಿವರೇ ಇಲ್ಲದ ಸರ್ಕಾರ ಯಾವ ಪುರುಷಾರ್ಥಕ್ಕಾಗಿ ಮುಖ್ಯಮಂತ್ರಿಗಳೇ ಎಂದು ಪ್ರಶ್ನಿಸಿದ್ದಾರೆ.


ಇದಕ್ಕೂ ಮೊದಲು ಟ್ವೀಟ್ ಮಾಡಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಟೀಕೆ ಮಾಡಿರುವ ಅವರು, 'ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಅನ್ನು ವಾಚಾಮಗೋಚರ ಟೀಕಿಸಿ, 'ಕಾಂಗ್ರೆಸ್ ಜೊತೆ ಮೈತ್ರಿ ಇಲ್ಲ' ಎಂದು ಆಣೆ ಮಾಡಿ, ಅಧಿಕಾರದ ಆಸೆಗೆ ಅದೇ ಕಾಂಗ್ರೆಸ್ ಜೊತೆಗೆ 'ಅಪವಿತ್ರ ಮೈತ್ರಿ' ಮಾಡಿಕೊಂಡು ಗದ್ದುಗೆ ಏರಿದ ಎಚ್ ಡಿ ಕುಮಾರಸ್ವಾಮಿ ಅವರು ಇಂದು ಸದನದಲ್ಲಿ ಸಂವಿಧಾನ, ಪ್ರಜಾಪ್ರಭುತ್ವ ನೈತಿಕತೆ,ಮೌಲ್ಯಗಳ ಬಗ್ಗೆ ಭಾಷಣ ಹಾಸ್ಯಾಸ್ಪದ' ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ