ಬೆಂಗಳೂರು: ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಸಾವಿರ ದಾಟಿದೆ. ರಾಜ್ಯದಲ್ಲಿ ಶನಿವಾರ ಏಳು ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಖಂಡಿತ ಕೊರೊನಾ ಹೆಚ್ಚಾಗಿದೆ ಎಂದು ಒಪ್ಪಿಕೊಳ್ಳಬೇಕು ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಜನಸಾಮಾನ್ಯರ ನಡವಳಿಕೆಗಳು ಬದಲಾಗಬೇಕು. ಕೋವಿಡ್ ನಿಯಮಾನುಸಾರ ನಡೆದುಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಸುಧಾಕರ್ ಎಚ್ಚರಿಸಿದ್ದಾರೆ.
ಸೋಂಕು ಬಂದಾಗ ಲಸಿಕೆ ಕೊಡಬಹುದು. ಆದರೆ ಮುಂದೆ ಹೆಚ್ಚಾದರೆ ಕಷ್ಟ ಆಗುತ್ತದೆ. ಸೋಂಕು ಹೆಚ್ಚಾದರೆ ಸರ್ಕಾರ ಕೂಡ ನಿಯಂತ್ರಣ ಮಾಡಲು ಆಗುವುದಿಲ್ಲ ಎಂದು ಸುಧಾಕರ್ ಹೇಳಿದರು.
ನೀವು ಸುರಕ್ಷಿತವಾಗಿದ್ದರೆ ನಿಮ್ಮನ್ನು ನಂಬಿದವರು ಮನೆಯಲ್ಲಿ ಸುರಕ್ಷಿತವಾಗಿರುತ್ತಾರೆ. ಹಿರಿಯ ನಾಗರಿಕರಿಗೆ ಲಸಿಕೆ ಕೊಡಿಸುವ ಕೆಲಸ ಮಾಡಿ. ಯುವಕರು ಅನಗತ್ಯ ಚಟುವಟಿಕೆಗೆ ಕಡಿವಾಣ ಹಾಕಿ ಎಂದು ಆರೋಗ್ಯ ಸಚಿವರು ಸಲಹೆ ನೀಡಿದರು.
ಎರಡನೇ ಅಲೆ ನಿಯಂತ್ರಣ ಮಾಡಬೇಕಿದೆ:
ರಾಜ್ಯದಲ್ಲಿ ಕೋವಿಡ್-19 ಎರಡನೇ ಅಲೆ ನಿಯಂತ್ರಣ ಮಾಡಬೇಕಿದೆ. ರಾಜ್ಯದಲ್ಲಿ ಕೋವಿಡ್ ಸಮಸ್ಯೆ ಇದೆ ಎಂದು ತಾಂತರ್ರಿಕ ಸಲಹಾ ಸಮಿತಿ ಎಚ್ಚರಿಸಿದೆ. ತಜ್ಞರ ಎಚ್ಚರಿಕೆಯನ್ನು ಕಡೆಗಣಿಸದಿದ್ದರೆ ಮುಂದೆ ಕಠಿಣ ದಿನಗಳನ್ನು ಎದುರಿಸಬೇಕಾಗಬಹುದು ಎಂದು ಸುಧಾಕರ್ ಹೇಳಿದರು.
ಮರಕ ವೈರಾಣುವಿನಿಂದ ಬಡವರು, ಕೂಲಿ ಕಾರ್ಮಿಕರು ಸೇರಿದಂತೆ ರಾಜ್ಯದ ಜನರನ್ನು ರಕ್ಷಣೆ ಮಾಡಬೇಕಿದೆ. ಸರ್ಕಾರದ ಈ ಜವಾಬ್ದಾರಿಗೆ ಜನರು ಹಗೆಗಲು ಕೊಡಬೇಕು ಎಂದು ಸುಧಾಕರ್ ಮನವಿ ಮಾಡಿದರು.
ಕೊರೊನಾ ಅಲೆ ತಡೆಗಟ್ಟಲು ವಿಪಕ್ಷಗಳ ಸಹಕಾರವೂ ಅಗತ್ಯವಿದ್ದು, ಸರ್ವಪಕ್ಷ ಸಭೆ ಕರೆಯುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುವುದಾಗಿ ಸುಧಾಕರ್ ಸ್ಪಷ್ಟಪಡಿಸಿದರು.
ಹೊರ ರಾಜ್ಯದ ಜನ ಕೊರೊನಾ ನೆಗೆಟಿವ್ ವರದಿ ತಂದರೆ ಮಾತ್ರ ರಾಜ್ಯದಲ್ಲಿ ಬರಲು ಅನುಮತಿ ನೀಡಲಾಗುವುದು. ಗಡಿ ಭಾಗದಲ್ಲಿ ಹೆಚ್ಚಿನ ನಿಗಾ ಇಡುವ ಅವಶ್ಯಕತೆಯಿದೆ ಎಂದು ಆರೋಗ್ಯ ಸಚಿವರು ಅಭಿಪ್ರಾಯಪಟ್ಟರು.
ಒಟ್ಟಿನಲ್ಲಿ ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಅಪ್ಪಳಿಸುತ್ತಿದೆ ಎಂದು ಎಚ್ಚರಿಕೆ ನೀಡಿದ ಆರೋಗ್ಯ ಸಚಿವ ಸುಧಾಕರ್, ಕೊರೊನಾ ಹರಡುವಿಕೆಯನ್ನು ತಡೆಗಟ್ಟಲು ಸರ್ಕಾರದೊಂದಿಗೆ ಸಹಕರಿಸುವಂತೆ ಜನತೆಯಲ್ಲಿ ಮನವಿ ಮಾಡಿದ್ದಾರೆ.
ಸೋಂಕು ಬಂದಾಗ ಲಸಿಕೆ ಕೊಡಬಹುದು. ಆದರೆ ಮುಂದೆ ಹೆಚ್ಚಾದರೆ ಕಷ್ಟ ಆಗುತ್ತದೆ. ಸೋಂಕು ಹೆಚ್ಚಾದರೆ ಸರ್ಕಾರ ಕೂಡ ನಿಯಂತ್ರಣ ಮಾಡಲು ಆಗುವುದಿಲ್ಲ ಎಂದು ಸುಧಾಕರ್ ಹೇಳಿದರು.
ನೀವು ಸುರಕ್ಷಿತವಾಗಿದ್ದರೆ ನಿಮ್ಮನ್ನು ನಂಬಿದವರು ಮನೆಯಲ್ಲಿ ಸುರಕ್ಷಿತವಾಗಿರುತ್ತಾರೆ. ಹಿರಿಯ ನಾಗರಿಕರಿಗೆ ಲಸಿಕೆ ಕೊಡಿಸುವ ಕೆಲಸ ಮಾಡಿ. ಯುವಕರು ಅನಗತ್ಯ ಚಟುವಟಿಕೆಗೆ ಕಡಿವಾಣ ಹಾಕಿ ಎಂದು ಆರೋಗ್ಯ ಸಚಿವರು ಸಲಹೆ ನೀಡಿದರು.
ಎರಡನೇ ಅಲೆ ನಿಯಂತ್ರಣ ಮಾಡಬೇಕಿದೆ:
ರಾಜ್ಯದಲ್ಲಿ ಕೋವಿಡ್-19 ಎರಡನೇ ಅಲೆ ನಿಯಂತ್ರಣ ಮಾಡಬೇಕಿದೆ. ರಾಜ್ಯದಲ್ಲಿ ಕೋವಿಡ್ ಸಮಸ್ಯೆ ಇದೆ ಎಂದು ತಾಂತರ್ರಿಕ ಸಲಹಾ ಸಮಿತಿ ಎಚ್ಚರಿಸಿದೆ. ತಜ್ಞರ ಎಚ್ಚರಿಕೆಯನ್ನು ಕಡೆಗಣಿಸದಿದ್ದರೆ ಮುಂದೆ ಕಠಿಣ ದಿನಗಳನ್ನು ಎದುರಿಸಬೇಕಾಗಬಹುದು ಎಂದು ಸುಧಾಕರ್ ಹೇಳಿದರು.
ಮರಕ ವೈರಾಣುವಿನಿಂದ ಬಡವರು, ಕೂಲಿ ಕಾರ್ಮಿಕರು ಸೇರಿದಂತೆ ರಾಜ್ಯದ ಜನರನ್ನು ರಕ್ಷಣೆ ಮಾಡಬೇಕಿದೆ. ಸರ್ಕಾರದ ಈ ಜವಾಬ್ದಾರಿಗೆ ಜನರು ಹಗೆಗಲು ಕೊಡಬೇಕು ಎಂದು ಸುಧಾಕರ್ ಮನವಿ ಮಾಡಿದರು.
ಕೊರೊನಾ ಅಲೆ ತಡೆಗಟ್ಟಲು ವಿಪಕ್ಷಗಳ ಸಹಕಾರವೂ ಅಗತ್ಯವಿದ್ದು, ಸರ್ವಪಕ್ಷ ಸಭೆ ಕರೆಯುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುವುದಾಗಿ ಸುಧಾಕರ್ ಸ್ಪಷ್ಟಪಡಿಸಿದರು.
ಹೊರ ರಾಜ್ಯದ ಜನ ಕೊರೊನಾ ನೆಗೆಟಿವ್ ವರದಿ ತಂದರೆ ಮಾತ್ರ ರಾಜ್ಯದಲ್ಲಿ ಬರಲು ಅನುಮತಿ ನೀಡಲಾಗುವುದು. ಗಡಿ ಭಾಗದಲ್ಲಿ ಹೆಚ್ಚಿನ ನಿಗಾ ಇಡುವ ಅವಶ್ಯಕತೆಯಿದೆ ಎಂದು ಆರೋಗ್ಯ ಸಚಿವರು ಅಭಿಪ್ರಾಯಪಟ್ಟರು.
ಒಟ್ಟಿನಲ್ಲಿ ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಅಪ್ಪಳಿಸುತ್ತಿದೆ ಎಂದು ಎಚ್ಚರಿಕೆ ನೀಡಿದ ಆರೋಗ್ಯ ಸಚಿವ ಸುಧಾಕರ್, ಕೊರೊನಾ ಹರಡುವಿಕೆಯನ್ನು ತಡೆಗಟ್ಟಲು ಸರ್ಕಾರದೊಂದಿಗೆ ಸಹಕರಿಸುವಂತೆ ಜನತೆಯಲ್ಲಿ ಮನವಿ ಮಾಡಿದ್ದಾರೆ.