ಆ್ಯಪ್ನಗರ

ಕಲ್ಲಹಳ್ಳಿ ಹತ್ಯೆ ಪ್ರಕರಣ: 9 ಆರೋಪಿಗಳು ಖುಲಾಸೆ

2008ರ ವಿಧಾನಸಭಾ ಚುನಾವಣೆ ವೇಳೆ ಮಂಡ್ಯದ ಪ್ರವಾಸಿ ಮಂದಿರ ಎದುರು ನಡೆದಿದ್ದ ಕಲ್ಲಹಳ್ಳಿ ರಂಗಸ್ವಾಮಿ ಮಹೇಶ್‌ ಎಂಬುವರ ಹತ್ಯೆ ಪ್ರಕರಣ ಸಂಬಂಧ ಅಧೀನ ನ್ಯಾಯಾಲಯದಿಂದ ಜೀವಾವಧಿಗೆ ಶಿಕ್ಷೆಗೆ ಒಳಗಾಗಿದ್ದ 9 ಆರೋಪಿಗಳನ್ನು ಹೈಕೋರ್ಟ್‌ ಖುಲಾಸೆಗೊಳಿಸಿದೆ.

Vijaya Karnataka 8 Jun 2018, 5:00 am
ಬೆಂಗಳೂರು: 2008ರ ವಿಧಾನಸಭಾ ಚುನಾವಣೆ ವೇಳೆ ಮಂಡ್ಯದ ಪ್ರವಾಸಿ ಮಂದಿರ ಎದುರು ನಡೆದಿದ್ದ ಕಲ್ಲಹಳ್ಳಿ ರಂಗಸ್ವಾಮಿ ಮಹೇಶ್‌ ಎಂಬುವರ ಹತ್ಯೆ ಪ್ರಕರಣ ಸಂಬಂಧ ಅಧೀನ ನ್ಯಾಯಾಲಯದಿಂದ ಜೀವಾವಧಿಗೆ ಶಿಕ್ಷೆಗೆ ಒಳಗಾಗಿದ್ದ 9 ಆರೋಪಿಗಳನ್ನು ಹೈಕೋರ್ಟ್‌ ಖುಲಾಸೆಗೊಳಿಸಿದೆ.
Vijaya Karnataka Web COURT


ಚೇತನ್‌ ಸೇರಿ ಇತರೆ ಎಂಟು ಆರೋಪಿಗಳು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್‌.ಬಿ.ಬೂದಿಹಾಳ್‌ ನೇತೃತ್ವದ ವಿಭಾಗೀಯ ಪೀಠ, ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸಿ ಅಧೀನ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆ ರದ್ದುಪಡಿಸಿತು.

ಮಂಡ್ಯದ ಎಂ.ಸಿ.ರಸ್ತೆಯ ಪ್ರವಾಸಿ ಮಂದಿರ ಮುಂಭಾಗದ 2008ರ ಏ.22ರಂದು ಬೆ. 10.45ರ ವೇಳೆಯಲ್ಲಿ ಕಲ್ಲಹಳ್ಳಿ ರಂಗಸ್ವಾಮಿ ಮಹೇಶ್‌ ಹತ್ಯೆ ನಡೆದಿತ್ತು. ತನಿಖೆ ನಡೆಸಿದ್ದ ಮಂಡ್ಯ ಪಶ್ಚಿಮ ಠಾಣಾ ಪೊಲೀಸರು ಒಟ್ಟು 14 ಮಂದಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಮಂಡ್ಯದ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್‌ ಕೋರ್ಟ್‌ 2012ರ ನ.29ರಂದು ಆರೋಪಿಗಳಾದ ಜಗದೀಶ್‌, ನಾಗೇಂದ್ರ, ಡಿ.ದಿಲಿಪ್‌, ಚೇತನ್‌, ಬಸವರಾಜು, ಸೈಯದ್‌ ಜೋಹರ್‌, ಮಹೇಶ್‌, ಸತೀತ್‌ ಮತ್ತು ಶಿವರಾಜ ಅವರನ್ನು ದೋಷಿಗಳೆಂದು ಪರಿಗಣಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ