ಆ್ಯಪ್ನಗರ

‘ಕಾಮೆಡ್‌-ಕೆ’ ಪ್ರವೇಶ ಪರೀಕ್ಷೆ: ಉತ್ತರ ಪ್ರದೇಶದ ಅಮಿತ್‌ ಪ್ರಥಮ

ಖಾಸಗಿ ಕಾಲೇಜುಗಳಲ್ಲಿ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಕಲ್ಪಿಸುವ 'ಕಾಮೆಡ್‌-ಕೆ' ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಉತ್ತರ ಪ್ರದೇಶದ ...

Vijaya Karnataka 28 May 2019, 5:00 am
ಬೆಂಗಳೂರು: ಖಾಸಗಿ ಕಾಲೇಜುಗಳಲ್ಲಿ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಕಲ್ಪಿಸುವ 'ಕಾಮೆಡ್‌-ಕೆ' ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಉತ್ತರ ಪ್ರದೇಶದ ಗಾಜಿಯಾಬಾದ್‌ನ ಅಮಿತ್‌ ಕುಮಾರ್‌ ಪ್ರಥಮ ರಾರ‍ಯಂಕ್‌ ಪಡೆದಿದ್ದಾರೆ.
Vijaya Karnataka Web kamed k
‘ಕಾಮೆಡ್‌-ಕೆ’ ಪ್ರವೇಶ ಪರೀಕ್ಷೆ: ಉತ್ತರ ಪ್ರದೇಶದ ಅಮಿತ್‌ ಪ್ರಥಮ


'ಕಾಮೆಡ್‌-ಕೆ' ಪ್ರವೇಶ ಪರೀಕ್ಷೆಯ ಫಲಿತಾಂಶವನ್ನು ಸೋಮವಾರ ಪ್ರಕಟಿಸಲಾಯಿತು. ಈ ಬಾರಿಯ ಪರೀಕ್ಷೆಯಲ್ಲಿ ಮೊದಲ ಮೂರು ರಾರ‍ಯಂಕ್‌ಗಳನ್ನು ಹೊರ ರಾಜ್ಯದ ವಿದ್ಯಾರ್ಥಿಗಳೇ ಪಡೆದಿದ್ದಾರೆ. ಮೊದಲ ಹತ್ತು ರಾರ‍ಯಂಕ್‌ಗಳಲ್ಲಿ ಐದು ರಾರ‍ಯಂಕ್‌ಗಳು ಕರ್ನಾಟಕದ ವಿದ್ಯಾರ್ಥಿಗಳ ಪಾಲಾಗಿವೆ.

ಈ ಬಾರಿ ಟ್ಟು 69,233 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಇದರಲ್ಲಿ, ಕರ್ನಾಟಕದ 17,012 ಹಾಗೂ ಹೊರ ರಾಜ್ಯಗಳ 41,073 ವಿದ್ಯಾರ್ಥಿಗಳೂ ಸೇರಿದಂತೆ ಒಟ್ಟು 58,085 ಮಂದಿ ಪರೀಕ್ಷೆ ಬರೆದಿದ್ದರು. ದೇಶಾದ್ಯಂತ ಒಟ್ಟು 133 ನಗರಗಳ 248 ಕೇಂದ್ರಗಳಲ್ಲಿ ಮೇ 12ರಂದು ಆನ್‌ಲೈನ್‌ನಲ್ಲಿ ಪರೀಕ್ಷೆ ನಡೆಸಲಾಗಿತ್ತು.

ಒಟ್ಟು 5000 ರಾರ‍ಯಂಕ್‌ ವಿಜೇತರಲ್ಲಿ 1,144 ಮಂದಿ ಶೇ.70ಕ್ಕಿಂತ ಹೆಚ್ಚು ಅಂಕ ಗಳಿಸಿದ್ದು, 3,856 ಮಂದಿ ಶೇ.58.33 ಹಾಗೂ ಶೇ.70ರ ನಡುವೆ ಅಂಕಗಳನ್ನು ಪಡೆದಿದ್ದಾರೆ. ಮೊದಲ 100 ರಾರ‍ಯಂಕ್‌ಗಳನ್ನು ಕರ್ನಾಟಕದ 37 ಮತ್ತು ಹೊರ ರಾಜ್ಯಗಳ 63 ಮಂದಿ ಹಂಚಿಕೊಂಡಿದ್ದಾರೆ. ಮೊದಲ 20 ರಾರ‍ಯಂಕ್‌ಗಳಲ್ಲಿ ಕರ್ನಾಟಕದ ಅಭ್ಯರ್ಥಿಗಳಿಗೆ 7 ರಾರ‍ಯಂಕ್‌ಗಳು ದಕ್ಕಿವೆ. ಮೊದಲ ಒಂದು ಸಾವಿರ ರಾರ‍ಯಂಕ್‌ಗಳಲ್ಲಿ 255 ಕರ್ನಾಟಕ ಮತ್ತು 745 ಇತರೆ ರಾಜ್ಯಗಳ ವಿದ್ಯಾರ್ಥಿಗಳ ಪಾಲಾಗಿವೆ. ಅಮಿತ್‌ ಕುಮಾರ್‌ ಅವರು ಒಟ್ಟು 180 ಅಂಕಗಳಿಗೆ 169 ಅಂಕಗಳನ್ನು ಪಡೆಯುವ ಮೂಲಕ ಟಾಪರ್‌ ಆಗಿ ಹೊರ ಹೊಮ್ಮಿದ್ದಾರೆ.

ರಾರ‍ಯಂಕ್‌ ವಿಜೇತರ ಪ್ರಮಾಣ ಪತ್ರಗಳು 'ಕಾಮೆಡ್‌-ಕೆ' ವೆಬ್‌ಸೈಟ್‌ (ಘ್ಕಿಡಿಡಿಡಿ.್ಚಟಞಛಿdk.ಟ್ಟಜ)ನಲ್ಲಿ ಲಭ್ಯವಿದೆ. ಎಂಜಿನಿಯರಿಂಗ್‌ ಸೀಟುಗಳ ಲಭ್ಯತೆ, ಶುಲ್ಕ ವಿವರ ಹಾಗೂ ಕೌನ್ಸೆಲಿಂಗ್‌ ಬಗ್ಗೆ ಶೀಘ್ರ ವೆಬ್‌ಸೈಟ್‌ನಲ್ಲಿ ವಿವರ ಪ್ರಕಟಿಸಲಾಗುತ್ತದೆ.

ರಾರ‍ಯಂಕ್‌ ವಿಜೇತರ ಪಟ್ಟಿ:

ಹೆಸರು ಪಡೆದ ಅಂಕ ಸ್ಥಳ

ಅಮಿತ್‌ ಕುಮಾರ್‌ 169 ಗಾಜಿಯಾಬಾದ್‌, ಉತ್ತರಪ್ರದೇಶ

ಅಕ್ಷಯ್‌ ಕುಮಾರ್‌ ಚೌರಾಸಿಯಾ 168 ಮೊರಾಹಿ ಪನೌಲಿ, ಉತ್ತರ ಪ್ರದೇಶ

ಮನುಬೋಲು ನರೇನ್‌ ಶ್ರೀಹಿತ್‌ 166 ಅನಂತಪುರ, ಆಂಧ್ರಪ್ರದೇಶ

ರಿಷಬ್‌ ಅಡಿಗ 165 ಬೆಂಗಳೂರು, ಕರ್ನಾಟಕ

ಗಗನ್‌ ಹೆಗ್ಡೆ 165 ಬೆಂಗಳೂರು, ಕರ್ನಾಟಕ

ವೈಭವ್‌ ಮಹಾಪಾತ್ರ 163 ಮುಂಬೈ, ಮಹಾರಾಷ್ಟ್ರ

ಎಂ.ಅಲೋಕ್‌ ಕೃಷ್ಣ 162 ಬೆಂಗಳೂರು, ಕರ್ನಾಟಕ

ಪೆದ್ದಮಲ್ಲು ಭುವನಶ್ರೀ 162 ಪುಲಿವೆಂದುಲ, ಕಡಪ ಜಿಲ್ಲೆ, ಆಂಧ್ರಪ್ರದೇಶ

ಪಿ.ರಕ್ಷಿತ್‌ 161 ಮೈಸೂರು, ಕರ್ನಾಟಕ

ಶಬರಿ ಎಸ್‌.ನಾಯರ್‌ 161 ಬೆಂಗಳೂರು, ಕರ್ನಾಟಕ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ