ಆ್ಯಪ್ನಗರ

ಇನ್ನೂ ಸಿಗದ ಗಣೇಶ್‌; ರೌಡಿ ಶೀಟ್‌ ತೆರೆಯಲು ಪೊಲೀಸರ ಚಿಂತನೆ

ಬಿಡದಿಯ ಈಗಲ್ಟನ್‌ ರೆಸಾರ್ಟ್‌ನಲ್ಲಿ ಶಾಸಕರ ಬಡಿದಾಟ ಪ್ರಕರಣದ ಪ್ರಮುಖ ಆರೋಪಿ ಕಂಪ್ಲಿ ಶಾಸಕ ಜೆ.ಎನ್‌.ಗಣೇಶ್‌ರನ್ನು ಬಂಧಿಸುವ ಪೊಲೀಸರ ಪ್ರಯತ್ನಕ್ಕೆ ಇನ್ನೂ ಯಶ ಸಿಕ್ಕಿಲ್ಲ.

Vijaya Karnataka 25 Jan 2019, 5:00 am
ರಾಮನಗರ: ಬಿಡದಿಯ ಈಗಲ್ಟನ್‌ ರೆಸಾರ್ಟ್‌ನಲ್ಲಿ ಶಾಸಕರ ಬಡಿದಾಟ ಪ್ರಕರಣದ ಪ್ರಮುಖ ಆರೋಪಿ ಕಂಪ್ಲಿ ಶಾಸಕ ಜೆ.ಎನ್‌.ಗಣೇಶ್‌ರನ್ನು ಬಂಧಿಸುವ ಪೊಲೀಸರ ಪ್ರಯತ್ನಕ್ಕೆ ಇನ್ನೂ ಯಶ ಸಿಕ್ಕಿಲ್ಲ.
Vijaya Karnataka Web kampli ganesh not yet arrested
ಇನ್ನೂ ಸಿಗದ ಗಣೇಶ್‌; ರೌಡಿ ಶೀಟ್‌ ತೆರೆಯಲು ಪೊಲೀಸರ ಚಿಂತನೆ


ರಾಮನಗರ ಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಸಿಗಲು ತಡವಾಗುವುದರಿಂದ, ಪ್ರಕರಣ ರದ್ದುಕೋರಿ ಗಣೇಶ್‌ ಹೈಕೋರ್ಟ್‌ ಮೊರೆ ಹೊಗುವ ಸಾಧ್ಯತೆ ಇದೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.

ರೌಡಿ ಶೀಟ್‌ ಮತ್ತೆ ಆರಂಭ:

ಈ ಮಧ್ಯೆ ಶಾಸಕ ಗಣೇಶ್‌ ವಿರುದ್ಧ ಮತ್ತೆ ರೌಡಿ ಶೀಟ್‌ ಆರಂಭಿಸಲು ಪೊಲೀಸರು ಚಿಂತನೆ ನಡೆಸಿದ್ದಾರೆ. ಈ ಸಂಬಂಧ ಬಳ್ಳಾರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಜತೆ ಚರ್ಚೆ ನಡೆಸುತ್ತಿರುವುದಾಗಿ ರಾಮನಗರ ಎಸ್‌ಪಿ ಬಿ.ರಮೇಶ್‌ ತಿಳಿಸಿದ್ದಾರೆ. ಆರೋಪಿಗಾಗಿ ಎಲ್ಲೆಡೆ ಬಲೆ ಬೀಸಲಾಗಿದ್ದು, ಶೀಘ್ರವೇ ಅವರ ಬಂಧನ ನಿಶ್ಚಿತ ಎಂದು ಅವರು ಹೇಳಿದ್ದಾರೆ.

ಸಾಕ್ಷ್ಯ ಸಂಗ್ರಹ: ಹಲ್ಲೆ ಪ್ರಕರಣ ಸಂಬಂಧ ಪೊಲೀಸರು ಸಾಕ್ಷ್ಯ ಸಂಗ್ರಹ ಕಾರ‍್ಯದಲ್ಲಿ ನಿರತರಾಗಿದ್ದಾರೆ. ಬುಧವಾರವಷ್ಟೇ ಹಲ್ಲೆ ನಡೆದ ಸ್ಥಳದ ಮಹಜರು ನಡೆಸಿದ್ದ ಪೊಲೀಸರು, ಮತ್ತೆ ಈಗಲ್‌ಟನ್‌ ರೆಸಾಟ್‌ಗೆ ತೆರಳಿ, ಘಟನೆ ನಡೆದ ದಿನ ಸಿಸಿ ಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿದ್ದಾರೆ.

ನನ್ನ ತಪ್ಪಿಲ್ಲ ಎಂದ ಗಣೇಶ್‌: ಈ ಮಧ್ಯೆ ಆಜ್ಞಾತ ಸ್ಥಳದಿಂದಲೇ ಫೇಸ್‌ಬುಕ್‌ನಲ್ಲಿ ತಮ್ಮನ್ನು ಸಮರ್ಥಿಸಿಕೊಂಡಿರುವ ಗಣೇಶ್‌, ಆನಂದ್‌ ಸಿಂಗ್‌ ಅವರೇ ನನ್ನ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡಿದರು. ಅವಾಚ್ಯಶಬ್ಧಗಳಿಂದ ನಿಂದಿಸಿದರು. ನನ್ನ ಮೇಲೆ ಮೊದಲು ಅವರೇ ಹಲ್ಲೆ ನಡೆಸಿದರು. ಹೀಗಾಗಿ ಅನಿವಾರ‍್ಯವಾಗಿ ನನ್ನನ್ನು ನಾನು ರಕ್ಷಿಸಿಕೊಳ್ಳಲು ಆನಂದ್‌ಸಿಂಗ್‌ ಮೇಲೆ ಹಲ್ಲೆ ನಡೆಸಬೇಕಾಯಿತು ಎಂದು ಹೇಳಿಕೊಂಡಿದ್ದಾರೆ.

ಏನಿದು ಪ್ರಕರಣ?: ಆಪರೇಷನ್‌ ಕಮಲದಿಂದ ತಪ್ಪಿಸಿಕೊಳ್ಳಲು ಕಾಂಗ್ರೆಸ್‌ ಶಾಸಕರು ಬಿಡದಿಯ ಈಗಲ್‌ಟನ್‌ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಈ ವೇಳೆ ಮದ್ಯದ ಅಮಲಿನಲಿದ್ದ ಶಾಸಕರಾದ ಆನಂದ್‌ಸಿಂಗ್‌ ಹಾಗೂ ಕಂಪ್ಲಿ ಗಣೇಶ್‌ ಪರಸ್ಪರ ಬಡಿದಾಡಿಕೊಂಡಿದ್ದರು. ಬಡಿದಾಟದಲ್ಲಿ ಗಾಯಗೊಂಡ ಆನಂದ್‌ಸಿಂಗ್‌ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಗಣೇಶ್‌ ವಿರುದ್ಧ ಬಿಡದಿ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ