ಆ್ಯಪ್ನಗರ

ರಾಜ್ಯಾದ್ಯಂತ ಕನಕದಾಸ ಜಯಂತಿ ಆಚರಣೆ : ಮೂರ್ತಿ, ಬೂದಾಳ್‌ಗೆ ಕನಕಶ್ರೀ ಪ್ರಶಸ್ತಿ

ದಾಸ ಶ್ರೇಷ್ಠರಾದ ಸಂತ ಕನಕದಾಸರ ಜಯಂತಿಯನ್ನು ಶುಕ್ರವಾರ ರಾಜ್ಯಾದ್ಯಂತ ಆಚರಿಸಲಾಗಿದೆ. ಕನಕ ಜಯಂತಿ ಅಂಗವಾಗಿ ಬೆಮಗಳೂರಿನ ರವೀದ್ರ ಕಲಾಕ್ಷೇತ್ರದಲ್ಲಿ ಬಿ .ಎನ್ ಮೂರ್ತಿ ಹಾಗೂ ನಟರಾಜ್ ಬೂದಾಳ್ ಅವರಿಗೆ 2019ನೇ ಸಾಲಿನ ಕನಕ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.

Vijaya Karnataka Web 15 Nov 2019, 6:55 pm
ಬೆಂಗಳೂರು: ದಾಸ ಶ್ರೇಷ್ಠರಾದ ಸಂತ ಕನಕದಾಸರ ಜಯಂತಿಯನ್ನು ಶುಕ್ರವಾರ ರಾಜ್ಯಾದ್ಯಂತ ಆಚರಿಸಲಾಗಿದೆ. ಕನಕದಾಸರ ಜಯಂತಿ ಅಂಗವಾಗಿ ಮುಖ್ಯಮಂತ್ರಿ ಬಿ.ಎಸ್‌. ಎಡಿಯೂರಪ್ಪ ಅವರು ಶಾಸಕರ ಭವನದ ಬಳಿ ಇರುವ ಕನಕದಾಸರ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಕನಕದಾಸ ಜಯಂತಿ ಆಚರಿಸಿದರು.
Vijaya Karnataka Web kanaka jayanthi 2019
ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಕನಕದಾಸ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ನಮಿಸಿದರು.


ಸುಕ್ಷೇತ್ರ ಕಾಗಿನೆಲೆ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು ಹಾಗೂ ಮಾಜಿ ಸಚಿವ ಹೆಚ್.ಎಂ.ರೇವಣ್ಣ ಅವರ ನಿಯೋಗವು ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಹಲವು ಬೇಡಿಕೆಗಳನ್ನಿಟ್ಟರು.

ಬಿ.ಎನ್ ಮೂರ್ತಿ ಹಾಗೂ ನಟರಾಜ್ ಬೂದಾಳ್ಗೆ ಕನಕಶ್ರೀ ಪ್ರಶಸ್ತಿ
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ದಲ್ಲಿ ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ವತಿಯಿಂದ ಕನಕದಾಸ ಜಯಂತಿ, ಕನಕ ಶ್ರೀ ಪ್ರಶಸ್ತಿ ಪ್ರದಾನ ಹಾಗೂ ಕನಕದಾಸರನ್ನು ಕುರಿತಾದ ಪುಸ್ತಕಗಳ ಬಿಡುಗಡೆ ಸಮಾರಂಭಕ್ಕೆ ಸಿಎಂ ಯಡಿಯೂರಪ್ಪ ಅವರಿಂದ ಚಾಲನೆ ನೀಡಿದರು.



ಬಿ.ಎನ್ ಮೂರ್ತಿ ಹಾಗೂ ನಟರಾಜ್ ಬೂದಾಳ್ ಗೆ 2019ನೇ ಸಾಲಿನ ಕನಕ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಿಸಿಎಂ ಗೋವಿಂದ ಕಾರಜೋಳ ಅವರು ಮಾತನಾಡಿ, ಜಯಂತಿಗಳು ಒಂದು ದಿನಕ್ಕೆ ಸೀಮಿತವಾಗಿತ್ತಿದೆ. ಇದು ಸರಿಯಾದ ಕ್ರಮವಲ್ಲ. ವರ್ಷಪೂರ್ತಿ ಮಹಾಪುರುಷರ ಚಿಂತನೆಗಳನ್ಮು‌ಚಿಂತನೆಗಳನ್ಮು ನಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಎಲ್ಲ ಜನಗಳು ಸೇರಿ ಜಯಂತಿ‌ಗಳನ್ನು ಆಚರಿಸುವ ಸ್ಥಿತಿ ನಿರ್ಮಾಣ ವಾಗಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಚಿವ ಸಿ.ಟಿ.ರವಿ, ಡಿಸಿಎಂ ಗೋವಿಂದ ಕಾರಜೋಳ, ಸ್ಥಳೀಯ ಶಾಸಕ ಉದಯ್ ಗರುಡಾಚಾರ್, ಒಲಾಖೆಉ ನಿರ್ದೇಶಕ ಎಸ್.ರಂಗಪ್ಪ ಹಾಜರಿದ್ದರು.

ಹಾಸನದಲ್ಲಿ ಅರ್ಥಪೂರ್ಣ ಆಚರಣೆ:
ಹಾಸನ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಸಂತ ಶ್ರೇಷ್ಠ ಕನಕದಾಸರ ಜಯಂತಿಯನ್ನು ಸರಳವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಶ್ವೇತಾದೇವರಾಜ್ ಅವರು ಎಲ್ಲಾ ಮಹನೀಯರ ಬದುಕು ಆದರ್ಶಗಳನ್ನ ಅರಿತು ಅನುಸರಿಸುವ ಮೂಲಕ ಇತರರಿಗೂ ಮಾದರಿಯಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಹಾಸನ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ನಿಂಗೇಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್‍ನಿವಾಸ್ ಸೆಪಟ್, ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಉಪವಿಭಾಗಾಧಿಕಾರಿ ಡಾ. ನವೀನ್ ಭಟ್, ಜಿಲ್ಲಾ ನೌಕರ ಸಂಘದ ಅಧ್ಯಕ್ಷರಾದ ಕೃಷ್ಣೇಗೌಡ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ಕುರುಬ ಸಂಘದ ಪದಾಧಿಕಾರಿಗಳಾದ ಸಿದ್ದೇಗೌಡ ಸಿದ್ದೇಗೌಡ, ಮಾಳಪ್ಪ, ಶಿವಪ್ಪ, ಬೀರಪ್ಪ, ಸೋಮಣ್ಣ, ಮತ್ತಿತರರು ಹಾಜರಿದ್ದರು.

ಬೀದರ್‌ನಲ್ಲಿ ಕನಕ ಜಯಂತಿ ಪ್ರಯುಕ್ತ ಶಿಳ್ಳೆ ಹಾಕಿ ಸಂಭ್ರಮಿಸಿದ ರಾಜಕೀಯ ನಾಯಕರು



ಬೀದರ್‌ನಲ್ಲಿ ಶಿಳ್ಳೆ ಹಾಕಿ ಸಂಭ್ರಮಿಸಿದ ನಾಯಕರು:
ಭಕ್ತ ಶ್ರೇಷ್ಠ ಕನಕದಾಸ ಜಯಂತಿ ಜಯಂತಿ ನಿಮಿತ್ತದ ಜಿಲ್ಲಾಡಳಿತದ ಮೆರವಣಿಗೆಯಲ್ಲಿ ಸಂಸದ, ಶಾಸಕರಿಂದ ಡಾನ್ಸ್. ಸಂಸದ ಭಗವಂತ ಖೂಬಾ, ಶಾಸಕ ಮಾಜಿ ಸಚಿವ ಬಂಡೆಪ್ಪ ಕಾಶಂಪುರ, ಎಂಎಲ್ಸಿ ವಿಜಯಸಿಂಗ್ ಡಾನ್ಸ ಮಾಡಿ, ಶಿಳ್ಳೆ ಹಾಕಿ ಗಮನ ಸೆಳೆದರು.

ರಾಮನಗರದಲ್ಲಿ ರಂಜಿಸಿದ ಕಾಂಗ್ರೆಸ್ಎಂಎಲ್‌ಸಿ ಸಿ.ಎಂ.ಲಿಂಗಪ್ಪರಾಮನಗರದ ಅಂಬೇಡ್ಕರ್ ಭವನದಲ್ಲಿ ಕನಕದಾಸರ ಜಯಂತಿ ಆಚರಿಸಲಾಯಿತು. ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾಂಗ್ರೆಸ್ ಎಂಎಲ್‌ಸಿ ಸಿ.ಎಂ.ಲಿಂಗಪ್ಪ ಕಾರ್ಯಕ್ರಮದಲ್ಲಿ ಕನಕದಾಸರ ಹಾಡು ಹಾಡಿ ರಂಜಿಸಿದರು. ಜನರು ಲಿಂಗಪ್ಪ ಅವರು ಹಾಡುವಾಗ ಮಧ್ಯದಲ್ಲೇ ಚಪ್ಪಾಳೆ ತಟ್ಟಿದರು. ಇನ್ನು ಹಾಡು ಮುಗಿದಿಲ್ಲ ಎಂದು ನಕ್ಕು ಸಿಎಂ ಲಿಂಗಪ್ಪ ಅವರು ಮತ್ತೆ ಹಾಡು ಮುಂದುವರಿಸಿದ ಪ್ರಸಂಗ ನಡೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ