ಆ್ಯಪ್ನಗರ

ಕನ್ನಡ ಗೊತ್ತಿಲ್ಲಟ್ವೀಟ್‌: ಪ್ರವಾಸಿಗನಿಗೆ ಸ್ಪಂದಿಸಿದ ಸಚಿವಗೆ ತರಾಟೆ

ಕನ್ನಡ ಗೊತ್ತಿಲ್ಲಎಂಬ ಕಾರಣಕ್ಕೆ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳದಲ್ಲಿನನ್ನ ಕುಟುಂಬಕ್ಕೆ ಅವಹೇಳನ ಮಾಡಿರುವ ಹಿನ್ನೆಲೆಯಲ್ಲಿದಕ್ಷಿಣ ...

Vijaya Karnataka 16 Sep 2019, 5:00 am
ಬೆಂಗಳೂರು: ಕನ್ನಡ ಗೊತ್ತಿಲ್ಲಎಂಬ ಕಾರಣಕ್ಕೆ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳದಲ್ಲಿನನ್ನ ಕುಟುಂಬಕ್ಕೆ ಅವಹೇಳನ ಮಾಡಿರುವ ಹಿನ್ನೆಲೆಯಲ್ಲಿದಕ್ಷಿಣ ಭಾರತಕ್ಕೆ ಪ್ರವಾಸ ತೆರಳುವುದನ್ನು ನಿಲ್ಲಿಸಿದ್ದೇನೆ ಎಂದು ಟ್ವೀಟ್‌ ಮಾಡಿದ್ದ ವಿರಾಟ್‌ ಎಂಬುವರನ್ನು ಸಾಂತ್ವನಗೊಳಿಸಲು ಮುಂದಾದ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಈಗ ನೆಟ್ಟಿಗರ ಆಕ್ಷೇಪಕ್ಕೆ ಗುರಿಯಾಗಿದ್ದಾರೆ.
Vijaya Karnataka Web ct


ಈ ಬಗ್ಗೆ ಕಳೆದರಡು ದಿನಗಳಿಂದ ಜಾಲತಾಣದಲ್ಲಿಭಾರಿ ಚರ್ಚೆ ನಡೆಯುತ್ತಿದೆ. ಉತ್ತರ ಭಾರತದ ವಿರಾಟ್‌ ಎಂಬುವರು ಮಾಡಿರುವ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಸಿ.ಟಿ.ರವಿ, ನಿಮಗೆ ಎದುರಾದ ಈ ದುರಾದೃಷ್ಟಕರ ಅನುಭವ ಕೇಳಿ ನಾನು ಕ್ಷಮೆ ಕೇಳುತ್ತೇನೆ. ನೀವು ಇನ್ನೊಮ್ಮೆ ಕರ್ನಾಟಕ ಪ್ರವಾಸ ಮಾಡುವ ಸಂದರ್ಭವನ್ನು ನನ್ನ ಗಮನಕ್ಕೆ ತನ್ನಿ. ನಿಮ್ಮ ಹಾಗೂ ಕುಟುಂಬಕ್ಕೆ ಈ ತಿರುಗಾಟ ಸ್ಮರಣೀಯವಾಗಿ ಉಳಿಯುವಂತೆ ಮಾಡುವ ಪ್ರಯತ್ನವನ್ನು ನಾನು ಮಾಡುತ್ತೇನೆ ಎಂದು ಸಾಂತ್ವನ ಹೇಳಿದ್ದರು.

ಉತ್ತರ ಭಾರತೀಯರ ಜತೆಗೆ ದಕ್ಷಿಣ ಕನ್ನಡದ ಜನತೆ ಈ ರೀತಿ ವರ್ತಿಸಿರಲಿಕ್ಕಿಲ್ಲ. ಈ ಟ್ವೀಟ್‌ಗೆ ಪ್ರವಾಸೋದ್ಯಮ ಸಚಿವರು ಈ ಮಟ್ಟದ ಆತಿಥ್ಯ ನೀಡುವ ಅಗತ್ಯವಿರಲಿಲ್ಲಎಂದು ಸಾಮಾಜಿಕ ಜಾಲ ತಾಣದಲ್ಲಿಈಗ ಆಕ್ಷೇಪದ ಸುರಿಮಳೆಯೇ ಆಗುತ್ತಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ