ಆ್ಯಪ್ನಗರ

ಟ್ವಿಟ್ಟರ್ ನಲ್ಲಿ ಧೂಳೆಬ್ಬಿಸಿದ ನೋ ಕನ್ನಡ- ನೋ ಬಿಸಿನೆಸ್‌

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕನ್ನಡ ಬಳಕೆ ವಿಚಾರವಾಗಿ ನಿರ್ಲಕ್ಷ್ಯತನದ ವಿರುದ್ಧ ಟ್ವಿಟರ್‌ನಲ್ಲಿ ನಡೆದ 'ನೋ ಕನ್ನಡ, ನೋ ಬಿಸಿನೆಸ್‌' ಅಭಿಯಾನಕ್ಕೆ ಕನ್ನಡಿಗರು ಭಾರೀ ಬೆಂಬಲ ಸೂಚಿಸಿ ಟ್ವೀಟ್‌ ಮಾಡಿದ್ದಾರೆ.

Vijaya Karnataka Web 1 Jan 2020, 3:04 pm
ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಬ್ಯಾಂಕ್‌, ಕೇಂದ್ರ ಸರಕಾರದ ಕಚೇರಿಗಳು, ಟೆಲಿಕಾಂ ಕಂಪನಿಗಳು, ಔಷಧ ಮಳಿಗೆಗಳು, ವಾಣಿಜ್ಯ ಮಳಿಗೆಗಳು, ಕಂಪನಿಗಳಲ್ಲಿ ಕನ್ನಡ ಬಳಕೆ ವಿಚಾರವಾಗಿ ನಿರ್ಲಕ್ಷ್ಯತನದ ವಿರುದ್ಧ ಟ್ವಿಟರ್‌ನಲ್ಲಿ ನಡೆದ 'ನೋ ಕನ್ನಡ, ನೋ ಬಿಸಿನೆಸ್‌' (NoKannadaNoBusiness)ಅಭಿಯಾನಕ್ಕೆ ಕನ್ನಡಿಗರು ಭಾರೀ ಬೆಂಬಲ ಸೂಚಿಸಿ ಟ್ವೀಟ್‌ ಮಾಡಿದ್ದಾರೆ.
Vijaya Karnataka Web no kannada no business




ಸೋಮವಾರ ಆರಂಭವಾದ ಟ್ವಿಟರ್‌ ಅಭಿಯಾನ ಮಂಗಳವಾರವೂ ಮುಂದುವರಿದಿತ್ತು. ಕನ್ನಡ ಭಾಷೆ ಬಳಕೆ ವಿಚಾರವಾಗಿ ಸಾರ್ವಜನಿಕರು ಹಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಕನ್ನಡ ಬಳಕೆಗೆ ರಾಜ್ಯ ಸರಕಾರ ಕೂಡ ಒತ್ತು ನೀಡಬೇಕು ಎಂದು ಜನ ಒತ್ತಾಯಿಸಿದ್ದಾರೆ.



'ಯಾವುದೇ ಕಂಪನಿ, ಮಳಿಗೆಗಳು ಕನ್ನಡ ಬಳಕೆ ಮಾಡದೆ ಇದ್ದಲ್ಲಿ ಕನ್ನಡ ನಾಡಿನಲ್ಲಿ ವ್ಯಾಪಾರ ಮಾಡುವುದೇ ಬೇಡ. ಕನ್ನಡ ಭಾಷೆಯನ್ನು ಗೌರವಿಸಿ, ಬಳಕೆ ಮಾಡಲೇಧಿಬೇಕು' ಎಂಬ ಒತ್ತಾಯ ಒಕ್ಕೊರಲಿನಿಂದ ಕೇಳಿ ಬಂದಿದೆ. ರೀಟೇಲರ್ಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾದಿಂದ ಸಿಎಂಗೆ ಪತ್ರ ಈ ನಡುವೆ, ಮಳಿಗೆಗಳಲ್ಲಿ ಕನ್ನಡ ಬಳಕೆ ಮಾಡುವಂತೆ ಬಿಬಿಎಂಪಿ ಆಯುಕ್ತರು ಹೊರಡಿಸಿರುವ ಸುತ್ತೋಲೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ ರೀಟೇಲರ್ಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾದಿಂದ (ಆರ್‌ಎಐ) ಸಿಎಂ ಯಡಿಯೂರಪ್ಪ ಅವರಿಗೆ ಡಿ.18ರಂದು ಪತ್ರ ಬರೆದಿರುವುದು ಬೆಳಕಿಗೆ ಬಂದಿದೆ.



ಈ ಪತ್ರವನ್ನು ರೂಪೇಶ್‌ ರಾಜಣ್ಣ ಎಂಬುವರು ಟ್ವಿಟರ್‌ನಲ್ಲಿ ಶೇರ್‌ ಮಾಡಿದ್ದಾರೆ. ಆರ್‌ಐಎನ ಪತ್ರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. 'ಜಾಗತಿಕ ಬ್ರ್ಯಾಂಡ್‌ಗಳ ಲೋಗೊ ಗ್ರಾಹಕರ ಗುರುತಿಸುವಿಕೆಗಾಗಿ ಇಂಗ್ಲಿಷ್‌ನಲ್ಲಿಇರುತ್ತವೆ. ಅವುಗಳನ್ನು ಸ್ಥಳೀಯ ಭಾಷೆಯಲ್ಲಿ ಪ್ರಕಟಿಸಬೇಕು ಎನ್ನುವ ಆದೇಶ ಸರಿಯಲ್ಲ. ಅಲ್ಲದೆ, ಬಿಬಿಎಂಪಿಯ ಸುತ್ತೋಲೆ ಕಾನೂನುಬಾಹಿರ. ಬಿಬಿಎಂಪಿ ಆಯುಕ್ತರ ಕಿರುಕುಳ ಮುಂದುವರಿದರೆ ವ್ಯಾಪಾರ, ವಹಿವಾಚು ನಡೆಸಲು ಸಮಸ್ಯೆಯಾಗುತ್ತದೆ' ಎಂದು ಆರ್‌ಎಐ ವಾದಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ