ಆ್ಯಪ್ನಗರ

ನಿತ್ಯೋತ್ಸವದ ಕವಿಗೆ ಪತ್ನಿ ವಿಯೋಗ

ತೀವ್ರ ಅನಾರೋಗ್ಯದಿಂದ ಬಳಲಿ ಕಳೆದ 15 ದಿನದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕವಿ ನಿಸ್ಸಾರ್ ಅಹಮದ್ ಮತ್ತು 4 ಮಕ್ಕಳು ಹಾಗೂ ಅಪಾರ ಬಳಗವನ್ನು ಅಗಲಿದ್ದಾರೆ. "ನನ್ನ ಎಲ್ಲಾ ಸಾಹಿತ್ಯಾಸಕ್ತಿಗೆ ನನ್ನ ಪತ್ನಿ ಸ್ಪೂರ್ತಿಯಾಗಿದ್ದರು. ನನ್ನ ಸಾಹಿತ್ಯಕ್ಕೆ ಅವರ ಕೊಡುಗೆಯನ್ನು ಯಾವತ್ತೂ ಮರೆಯಲಾರೆ" ಎಂದು ಕವಿ ನಿಸಾರ್ ಅಹಮದ್ ಭಾವುಕರಾಗಿ ನುಡಿದರು.

Vijaya Karnataka Web 23 Mar 2019, 11:36 pm
Vijaya Karnataka Web Shanavaz Begam
ಬೆಂಗಳೂರು: ಖ್ಯಾತ ಸಾಹಿತಿ ನಿತ್ಯೋತ್ಸವ ಕವಿ ಡಾ. ನಿಸ್ಸಾರ್ ಅಹಮದ್ ಅವರ ಪತ್ನಿ ಶಾನವಾಜ್ ಬೇಗಮ್ ಶನಿವಾರ ನಿಧನರಾದರು. ಅವರಿಗೆ 77 ವರ್ಷ ವಯಸ್ಸಾಗಿತ್ತು.

ತೀವ್ರ ಅನಾರೋಗ್ಯದಿಂದ ಬಳಲಿ ಕಳೆದ 15 ದಿನದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕವಿ ನಿಸ್ಸಾರ್ ಅಹಮದ್ ಮತ್ತು 4 ಮಕ್ಕಳು ಹಾಗೂ ಅಪಾರ ಬಳಗವನ್ನು ಅಗಲಿದ್ದಾರೆ.

"ನನ್ನ ಎಲ್ಲಾ ಸಾಹಿತ್ಯಾಸಕ್ತಿಗೆ ನನ್ನ ಪತ್ನಿ ಸ್ಪೂರ್ತಿಯಾಗಿದ್ದರು. ನನ್ನ ಸಾಹಿತ್ಯಕ್ಕೆ ಅವರ ಕೊಡುಗೆಯನ್ನು ಯಾವತ್ತೂ ಮರೆಯಲಾರೆ" ಎಂದು ಕವಿ ನಿಸಾರ್ ಅಹಮದ್ ಭಾವುಕರಾಗಿ ನುಡಿದರು.

ಶಾಲೆಯಲ್ಲಿ ಮುಖ್ಯೋಪಾಧ್ಯಾಯಿನಿಯಾಗಿದ್ದ ಶಾನವಾಜ್ ಬೇಗಮ್ 16 ವರ್ಷದ ಹಿಂದೆ ನಿವೃತ್ತರಾಗಿದ್ದರು.

ಅಂತ್ಯಕ್ರಿಯೆ ಭಾನುವಾರ ಮಧ್ಯಾಹ್ನ 2 ಗಂಟೆಗೆ ದೂರದರ್ಶನ ಕೇಂದ್ರದ ಬಳಿಯ ಸ್ಮಶಾನದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ