ಬೆಂಗಳೂರು: ಭದ್ರಾವತಿಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ ಬೆಟಾಲಿಯನ್ ಸ್ಥಾಪನೆ ಶಂಕುಸ್ಥಾಪನೆ ಕಾರ್ಯಕ್ರಮದ ನಾಮಫಲಕದಲ್ಲಿ ಮತ್ತು ಬೆಳಗಾವಿ ಕಾರ್ಯಕ್ರಮದ ನಾಮಫಲಕದಲ್ಲಿ ಕನ್ನಡ ಭಾಷೆಯನ್ನು ಕಡೆಗಣಿಸಿರುವುದಕ್ಕೆ ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಕನ್ನಡದ ನೆಲದಲ್ಲಿ ಕನ್ನಡ ಭಾಷೆಯನ್ನೇ ಕಡೆಗಣಿಸಿರುವುದಕ್ಕೆ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ಭುಗಿಲೆದ್ದಿದ್ದು ಇದರ ಭಾಗವಾಗಿ ‘ಹಿಂದಿ ಗುಲಾಮಗಿರಿ ಬಿಡಿ’ ಎಂಬ ಹ್ಯಾಷ್ಟ್ಯಾಗ್ ಅಭಿಯಾನ ಟ್ವಿಟ್ಟರ್ನಲ್ಲಿ ಭಾರೀ ಸದ್ದು ಮಾಡಿದೆ. ಕಾಂಗ್ರೆಸ್, ಕರವೇ ಮುಖಂಡರು, ಕನ್ನಡ ಕಾರ್ಯಕರ್ತರು, ಸಿನಿಮಾ ಕಲಾವಿದರು ಸೇರಿದಂತೆ ಸಾವಿರಾರು ಮಂದಿ ಈ ಟ್ವಿಟ್ಟರ್ ಅಭಿಯಾನದಲ್ಲಿ ಪಾಲ್ಗೊಂಡಿದ್ದು, ಕುವೆಂಪು ಹುಟ್ಟಿದ ನಾಡಿನಲ್ಲೇ ಕನ್ನಡಕ್ಕೆ ಅವಮಾನ ಮಾಡಲಾಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಮಿತ್ ಶಾ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡದವನ್ನು ಕಡೆಗಣಿಸಿರುವುದನ್ನು ಖಂಡಿಸಿ ವಿರುದ್ಧ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ಟ್ವೀಟ್ ಮಾಡಿ ತೀವ್ರ ತರಾಟೆಗೆ ತೆಗೆದುಕೊಳ್ಳಲಾಗಿದೆ. ಬಿಜೆಪಿ ನಾಯಕರು ಉತ್ತರಭಾರತದ ನಾಯಕರನ್ನು ಓಲೈಸಲು ಮಾತೃಭಾಷೆಯನ್ನೇ ಕಡೆಗಣಿಸುತ್ತಿದ್ದಾರೆ. ಇದು ಮೊದಲೇನಲ್ಲ, ಈ ಹಿಂದೆಯೂ ಬಿಜೆಪಿಗರು ಮಾಡಿದ್ದಾರೆ ಎಂದು ದೂರಲಾಗಿದೆ. ಆ ಪೈಕಿ ಕೆಲವು ಆಯ್ದ ಟ್ವೀಟ್ಗಳನ್ನು ಇಲ್ಲಿ ಕೊಡಲಾಗಿದೆ.
ರಾಜ್ಯದ ಕಾರ್ಯಕ್ರಮದಲ್ಲಿ ಹಾಗೂ ಕೇಂದ್ರದಿಂದ ರಾಜ್ಯದಲ್ಲಿ ನಡೆಸುವ ಕಾರ್ಯಕ್ರಮದಲ್ಲಿ ಕನ್ನಡ ಕಡ್ಡಾಯ ಎಂಬ ನಿಯಮವನ್ನು ಗಾಳಿಗೆ ತೂರಿ, ಕುವೆಂಪು ಹುಟ್ಟೂರಲ್ಲೇ ಕನ್ನಡ ಮರೆಮಾಚಿ ಸ್ವಾಭಿಮಾನಿ ಕನ್ನಡಿಗರಿಗೆ ಅವಮಾನ ಮಾಡಿರುವ ಬಿಜೆಪಿಯ ಸರ್ವಾಧಿಕಾರಿ ಧೋರಣೆಯನ್ನು ಪಕ್ಷಾತೀತವಾಗಿ ಖಂಡಿಸೋಣ ಎಂದು ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಹೇಳಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿಎ ನಾರಾಯಣ ಗೌಡ ಅವರು ಟ್ವೀಟ್ ಮಾಡಿ, ಕರ್ನಾಟಕದ ರಾಜಕಾರಣಿಗಳೇ, ನಿಮ್ಮ ಸ್ವಾಭಿಮಾನವನ್ನು ಖುರ್ಚಿಯ ಆಸೆಗಾಗಿ ಮಾರಿಕೊಳ್ಳಬೇಡಿ. ನೂರು ವರ್ಷ ನಿರಭಿಮಾನಿಗಳಾಗಿ ಬದುಕುವುದಕ್ಕಿಂದ ಹತ್ತು ದಿನ ಎದೆಯುಬ್ಬಿಸಿ ಸ್ವಾಭಿಮಾನಿಗಳಾಗಿ ಬದುಕಿ ತೋರಿಸಿ. ಅದೇ ನೀವು ಕನ್ನಡಿಗರಿಗೆ ಮಾಡುವ ಬಹುದೊಡ್ಡ ಉಪಕಾರ ಎಂದು ಆಗ್ರಹಿಸಿದ್ದಾರೆ.
ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಟ್ವೀಟ್ ಮಾಡಿ, 'ಇಂಗ್ಲೀಷ್ ಮರದ ದೊಣ್ಣೆಯಾದರೆ ಹಿಂದಿ ಕಬ್ಬಿಣದ ಸಲಾಕೆ' ಎಂದು ಹಿಂದಿ ಹೇರಿಕೆಯನ್ನು ತೀವ್ರವಾಗಿ ವಿರೋಧಿಸಿದ್ದ ರಾಷ್ಟ್ರಕವಿ ಕುವೆಂಪು ಅವರು ಹುಟ್ಟಿದ ಜಿಲ್ಲೆಯಲ್ಲೇ ಕನ್ನಡಕ್ಕೆ ನೆಲೆ ಸಿಗದಂತಾದರೂ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಇದನ್ನು ಕಂಡು ಕಾಣದಂತೆ ಮೌನವಹಿಸಿರುವುದು ನಿಜಕ್ಕೂ ಬೇಸರದ ವಿಚಾರವಾಗಿದೆ ಎಂದಿದ್ದಾರೆ.
ಸಿನಿಮಾ ನಿರ್ದೇಶಕ ಪವನ್ ಒಡೆಯರ್ ಟ್ವೀಟ್ ಮಾಡಿ, ನಮ್ಮ ಮಾತೃ ಭಾಷೆ ಕನ್ನಡ. ಭಾಷೆಗೆ ಮಾತೃ ಸ್ಥಾನ ಕೊಟ್ಟ ಮೇಲೆ ಅದನ್ನು ಕಡೆಗಣಿಸುವುದು ಹೆತ್ತ ತಾಯಿಯನ್ನು ನಿರ್ಲಕ್ಷಿಸಿದಷ್ಟೇ ಪಾಪ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರ್ಆರ್ಬಿ ಪರೀಕ್ಷೆಯಲ್ಲಿ ಹಿಂದಿ ಅಭ್ಯರ್ಥಿಗಳು ಹಿಂದಿಯಲ್ಲಿ ಸಹಿ ಮಾಡಬಹುದು. ಆದರೆ, ಹಿಂದಿಯೇತರ ಅಭ್ಯರ್ಥಿಗಳಿಗೆ ಮಾತೃಭಾಷೆಯಲ್ಲಿ ಸಹಿ ಮಾಡಲು ಅವಕಾಶ ಇಲ್ಲ. ಅಲ್ಲದೆ, ಪೂರ್ವಭಾವಿ ಪರೀಕ್ಷೆಯನ್ನು ಹಿಂದಿ ಮತ್ತು ಇಂಗ್ಲಿಷ್ನಲ್ಲಿ ನಡೆಸಲಾಗುತ್ತದೆ. ಈ ಮೂಲಕ ಗ್ರಾಮಾಂತರ ಬ್ಯಾಂಕ್ಗಳಲ್ಲೂ ಹಿಂದಿ ಅಧಿಕಾರಿ ಮತ್ತು ಸಿಬ್ಬಂದಿಯನ್ನು ತುಂಬಲಾಗುತ್ತಿದೆ ಎಂದು ಎಚ್ಕೆ ನವನೀತ್ ಟ್ವೀಟ್ ಮಾಡಿದ್ದಾರೆ.
ಕನ್ನಡ ಕಾರ್ಯಕರ್ತ ಅರುಣ್ ಜಾವಗಲ್ ಟ್ವೀಟ್ ಮಾಡಿ, ಭಾರತ ಸರಕಾರ ನಾವು ಕೊಡುವ ತೆರಿಗೆ ದುಡ್ಡಲ್ಲಿ ನಮ್ಮ ಮೇಲೆ ಹಿಂದಿ ಹೇರಿಕೆ ಮಾಡುತ್ತಿದೆ. ನಮ್ಮೂರಲ್ಲಿ ನಮ್ಮ ಭಾಷೆ ಬಳಸುವುದಿಲ್ಲ ಅಂತಿದೆ. ಕನ್ನಡಿಗರನ್ನು ಪ್ರತಿನಿಧಿಸಬೇಕಿದ್ದ ಕರ್ನಾಟಕ ಸರಕಾರ ಹಿಂದಿ ರಾಜಕಾರಣಿಗಳ ಮುಂದೆ ಮಂಡಿಯೂರಿ ಕೂತಿದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟ್ವಿಟರ್ ಟ್ರೆಂಡಿಂಗ್ನಿಂದಲೇ ಮಾಯ..!
‘ಹಿಂದಿ ಗುಲಾಮಗಿರಿ ಬೇಡ’ ಟ್ರೆಂಡ್ ಸಂಜೆಯಿಂದ ಟ್ವಿಟರ್ನಲ್ಲಿ ಟ್ರೆಂಡ್ ಆಗುತ್ತಾ, ಟಾಪ್ 2ನೇ ಸ್ಥಾನಕ್ಕೇರಿತ್ತು. ಈ ಕುರಿತು ಟ್ವೀಟ್ಗಳು ವ್ಯಾಪಕವಾಗಿ ಬರುತ್ತಿರುವ ನಡುವೆ ರಾತ್ರಿ 9.15ರ ಸುಮಾರಿಗೆ ಏಕಾಏಕಿ ಟ್ವಿಟರ್ ಟ್ರೆಂಡ್ ಪಟ್ಟಿಯಿಂದ ‘ಹಿಂದಿ ಗುಲಾಮಗಿರಿ ಬೇಡ’ ಮಾಯವಾಯಿತು. ಕಾರಣ ನಿಗೂಢವಾಗಿದೆ. ಟ್ರೆಂಡ್ ಲೀಸ್ಟ್ನಿಂದ ತೆಗೆಯಲು ಟ್ವಿಟರ್ ಮೇಲೆ ಪ್ರಭಾವ ಬೀರಿರಬಹುದು ಅಥವಾ ಟ್ವಿಟರ್ನಲ್ಲಿರುವವರ ಕೈವಾಡ ಶಂಕೆ ವ್ಯಕ್ತವಾಗಿದೆ.
ಕನ್ನಡದ ನೆಲದಲ್ಲಿ ಕನ್ನಡ ಭಾಷೆಯನ್ನೇ ಕಡೆಗಣಿಸಿರುವುದಕ್ಕೆ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ಭುಗಿಲೆದ್ದಿದ್ದು ಇದರ ಭಾಗವಾಗಿ ‘ಹಿಂದಿ ಗುಲಾಮಗಿರಿ ಬಿಡಿ’ ಎಂಬ ಹ್ಯಾಷ್ಟ್ಯಾಗ್ ಅಭಿಯಾನ ಟ್ವಿಟ್ಟರ್ನಲ್ಲಿ ಭಾರೀ ಸದ್ದು ಮಾಡಿದೆ. ಕಾಂಗ್ರೆಸ್, ಕರವೇ ಮುಖಂಡರು, ಕನ್ನಡ ಕಾರ್ಯಕರ್ತರು, ಸಿನಿಮಾ ಕಲಾವಿದರು ಸೇರಿದಂತೆ ಸಾವಿರಾರು ಮಂದಿ ಈ ಟ್ವಿಟ್ಟರ್ ಅಭಿಯಾನದಲ್ಲಿ ಪಾಲ್ಗೊಂಡಿದ್ದು, ಕುವೆಂಪು ಹುಟ್ಟಿದ ನಾಡಿನಲ್ಲೇ ಕನ್ನಡಕ್ಕೆ ಅವಮಾನ ಮಾಡಲಾಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಮಿತ್ ಶಾ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡದವನ್ನು ಕಡೆಗಣಿಸಿರುವುದನ್ನು ಖಂಡಿಸಿ ವಿರುದ್ಧ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ಟ್ವೀಟ್ ಮಾಡಿ ತೀವ್ರ ತರಾಟೆಗೆ ತೆಗೆದುಕೊಳ್ಳಲಾಗಿದೆ. ಬಿಜೆಪಿ ನಾಯಕರು ಉತ್ತರಭಾರತದ ನಾಯಕರನ್ನು ಓಲೈಸಲು ಮಾತೃಭಾಷೆಯನ್ನೇ ಕಡೆಗಣಿಸುತ್ತಿದ್ದಾರೆ. ಇದು ಮೊದಲೇನಲ್ಲ, ಈ ಹಿಂದೆಯೂ ಬಿಜೆಪಿಗರು ಮಾಡಿದ್ದಾರೆ ಎಂದು ದೂರಲಾಗಿದೆ. ಆ ಪೈಕಿ ಕೆಲವು ಆಯ್ದ ಟ್ವೀಟ್ಗಳನ್ನು ಇಲ್ಲಿ ಕೊಡಲಾಗಿದೆ.
ರಾಜ್ಯದ ಕಾರ್ಯಕ್ರಮದಲ್ಲಿ ಹಾಗೂ ಕೇಂದ್ರದಿಂದ ರಾಜ್ಯದಲ್ಲಿ ನಡೆಸುವ ಕಾರ್ಯಕ್ರಮದಲ್ಲಿ ಕನ್ನಡ ಕಡ್ಡಾಯ ಎಂಬ ನಿಯಮವನ್ನು ಗಾಳಿಗೆ ತೂರಿ, ಕುವೆಂಪು ಹುಟ್ಟೂರಲ್ಲೇ ಕನ್ನಡ ಮರೆಮಾಚಿ ಸ್ವಾಭಿಮಾನಿ ಕನ್ನಡಿಗರಿಗೆ ಅವಮಾನ ಮಾಡಿರುವ ಬಿಜೆಪಿಯ ಸರ್ವಾಧಿಕಾರಿ ಧೋರಣೆಯನ್ನು ಪಕ್ಷಾತೀತವಾಗಿ ಖಂಡಿಸೋಣ ಎಂದು ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಹೇಳಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿಎ ನಾರಾಯಣ ಗೌಡ ಅವರು ಟ್ವೀಟ್ ಮಾಡಿ, ಕರ್ನಾಟಕದ ರಾಜಕಾರಣಿಗಳೇ, ನಿಮ್ಮ ಸ್ವಾಭಿಮಾನವನ್ನು ಖುರ್ಚಿಯ ಆಸೆಗಾಗಿ ಮಾರಿಕೊಳ್ಳಬೇಡಿ. ನೂರು ವರ್ಷ ನಿರಭಿಮಾನಿಗಳಾಗಿ ಬದುಕುವುದಕ್ಕಿಂದ ಹತ್ತು ದಿನ ಎದೆಯುಬ್ಬಿಸಿ ಸ್ವಾಭಿಮಾನಿಗಳಾಗಿ ಬದುಕಿ ತೋರಿಸಿ. ಅದೇ ನೀವು ಕನ್ನಡಿಗರಿಗೆ ಮಾಡುವ ಬಹುದೊಡ್ಡ ಉಪಕಾರ ಎಂದು ಆಗ್ರಹಿಸಿದ್ದಾರೆ.
ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಟ್ವೀಟ್ ಮಾಡಿ, 'ಇಂಗ್ಲೀಷ್ ಮರದ ದೊಣ್ಣೆಯಾದರೆ ಹಿಂದಿ ಕಬ್ಬಿಣದ ಸಲಾಕೆ' ಎಂದು ಹಿಂದಿ ಹೇರಿಕೆಯನ್ನು ತೀವ್ರವಾಗಿ ವಿರೋಧಿಸಿದ್ದ ರಾಷ್ಟ್ರಕವಿ ಕುವೆಂಪು ಅವರು ಹುಟ್ಟಿದ ಜಿಲ್ಲೆಯಲ್ಲೇ ಕನ್ನಡಕ್ಕೆ ನೆಲೆ ಸಿಗದಂತಾದರೂ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಇದನ್ನು ಕಂಡು ಕಾಣದಂತೆ ಮೌನವಹಿಸಿರುವುದು ನಿಜಕ್ಕೂ ಬೇಸರದ ವಿಚಾರವಾಗಿದೆ ಎಂದಿದ್ದಾರೆ.
ಸಿನಿಮಾ ನಿರ್ದೇಶಕ ಪವನ್ ಒಡೆಯರ್ ಟ್ವೀಟ್ ಮಾಡಿ, ನಮ್ಮ ಮಾತೃ ಭಾಷೆ ಕನ್ನಡ. ಭಾಷೆಗೆ ಮಾತೃ ಸ್ಥಾನ ಕೊಟ್ಟ ಮೇಲೆ ಅದನ್ನು ಕಡೆಗಣಿಸುವುದು ಹೆತ್ತ ತಾಯಿಯನ್ನು ನಿರ್ಲಕ್ಷಿಸಿದಷ್ಟೇ ಪಾಪ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರ್ಆರ್ಬಿ ಪರೀಕ್ಷೆಯಲ್ಲಿ ಹಿಂದಿ ಅಭ್ಯರ್ಥಿಗಳು ಹಿಂದಿಯಲ್ಲಿ ಸಹಿ ಮಾಡಬಹುದು. ಆದರೆ, ಹಿಂದಿಯೇತರ ಅಭ್ಯರ್ಥಿಗಳಿಗೆ ಮಾತೃಭಾಷೆಯಲ್ಲಿ ಸಹಿ ಮಾಡಲು ಅವಕಾಶ ಇಲ್ಲ. ಅಲ್ಲದೆ, ಪೂರ್ವಭಾವಿ ಪರೀಕ್ಷೆಯನ್ನು ಹಿಂದಿ ಮತ್ತು ಇಂಗ್ಲಿಷ್ನಲ್ಲಿ ನಡೆಸಲಾಗುತ್ತದೆ. ಈ ಮೂಲಕ ಗ್ರಾಮಾಂತರ ಬ್ಯಾಂಕ್ಗಳಲ್ಲೂ ಹಿಂದಿ ಅಧಿಕಾರಿ ಮತ್ತು ಸಿಬ್ಬಂದಿಯನ್ನು ತುಂಬಲಾಗುತ್ತಿದೆ ಎಂದು ಎಚ್ಕೆ ನವನೀತ್ ಟ್ವೀಟ್ ಮಾಡಿದ್ದಾರೆ.
ಕನ್ನಡ ಕಾರ್ಯಕರ್ತ ಅರುಣ್ ಜಾವಗಲ್ ಟ್ವೀಟ್ ಮಾಡಿ, ಭಾರತ ಸರಕಾರ ನಾವು ಕೊಡುವ ತೆರಿಗೆ ದುಡ್ಡಲ್ಲಿ ನಮ್ಮ ಮೇಲೆ ಹಿಂದಿ ಹೇರಿಕೆ ಮಾಡುತ್ತಿದೆ. ನಮ್ಮೂರಲ್ಲಿ ನಮ್ಮ ಭಾಷೆ ಬಳಸುವುದಿಲ್ಲ ಅಂತಿದೆ. ಕನ್ನಡಿಗರನ್ನು ಪ್ರತಿನಿಧಿಸಬೇಕಿದ್ದ ಕರ್ನಾಟಕ ಸರಕಾರ ಹಿಂದಿ ರಾಜಕಾರಣಿಗಳ ಮುಂದೆ ಮಂಡಿಯೂರಿ ಕೂತಿದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟ್ವಿಟರ್ ಟ್ರೆಂಡಿಂಗ್ನಿಂದಲೇ ಮಾಯ..!
‘ಹಿಂದಿ ಗುಲಾಮಗಿರಿ ಬೇಡ’ ಟ್ರೆಂಡ್ ಸಂಜೆಯಿಂದ ಟ್ವಿಟರ್ನಲ್ಲಿ ಟ್ರೆಂಡ್ ಆಗುತ್ತಾ, ಟಾಪ್ 2ನೇ ಸ್ಥಾನಕ್ಕೇರಿತ್ತು. ಈ ಕುರಿತು ಟ್ವೀಟ್ಗಳು ವ್ಯಾಪಕವಾಗಿ ಬರುತ್ತಿರುವ ನಡುವೆ ರಾತ್ರಿ 9.15ರ ಸುಮಾರಿಗೆ ಏಕಾಏಕಿ ಟ್ವಿಟರ್ ಟ್ರೆಂಡ್ ಪಟ್ಟಿಯಿಂದ ‘ಹಿಂದಿ ಗುಲಾಮಗಿರಿ ಬೇಡ’ ಮಾಯವಾಯಿತು. ಕಾರಣ ನಿಗೂಢವಾಗಿದೆ. ಟ್ರೆಂಡ್ ಲೀಸ್ಟ್ನಿಂದ ತೆಗೆಯಲು ಟ್ವಿಟರ್ ಮೇಲೆ ಪ್ರಭಾವ ಬೀರಿರಬಹುದು ಅಥವಾ ಟ್ವಿಟರ್ನಲ್ಲಿರುವವರ ಕೈವಾಡ ಶಂಕೆ ವ್ಯಕ್ತವಾಗಿದೆ.