ಆ್ಯಪ್ನಗರ

ಕಣ್ವಗೆ ಸೇರಿದ 255.17 ಕೋಟಿ ರೂ. ಆಸ್ತಿ ಮುಟ್ಟುಗೋಲು, ವಂಚನೆ ಸಾಲದ ಮೊತ್ತ 120 ಕೋಟಿ ರೂ. ಬಾಕಿ !

ಕಣ್ವಗೆ ಸೇರಿದ 255.17 ಕೋಟಿ ರೂ. ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. 13 ಸಾವಿರ ಜನರಿಂದ 650 ಕೋಟಿ ರೂ. ಹಣ ಸಂಗ್ರಹಿಸಿ ವಂಚನೆ ಸಾಲದ ಮೊತ್ತ 120 ಕೋಟಿ ರೂ. ಬಾಕಿ ಇದೆ.

Vijaya Karnataka Web 26 Sep 2020, 7:51 am
ಬೆಂಗಳೂರು: ಕಣ್ವ ಗ್ರೂಪ್‌ ಆಫ್‌ ಕಂಪನೀಸ್‌ ಮತ್ತು ಕಣ್ವ ಸಹಕಾರ ಕ್ರೆಡಿಟ್‌ ಲಿಮಿಟೆಡ್‌ನಿಂದ ಅಧಿಕ ಬಡ್ಡಿ ಅಮಿಷ ಒಡ್ಡಿ ಸಾರ್ವಜನಿಕರಿಂದ ವಿವಿಧ ಪೋಂಜಿ ಸ್ಕೀಂಗಳ ಹೆಸರಿನಲ್ಲಿ ಹಣ ಸಂಗ್ರಹಿಸಿ ವಂಚಿಸಿದ ಪ್ರಕರಣದ ಸಂಬಂಧ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ, 255.17 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಮತ್ತು ಚರಾಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.
Vijaya Karnataka Web kanva group
ಕಣ್ವ ಗ್ರೂಪ್‌ನ ಮಾಲೀಕ ಎನ್‌.ನಂಜುಂಡಯ್ಯ


ಕಣ್ವ ಗ್ರೂಪ್‌ನ ಮಾಲೀಕರಾದ ಎನ್‌.ನಂಜುಂಡಯ್ಯ ಮತ್ತು ಕುಟುಂಬ ಸದಸ್ಯರ ಹೆಸರಿನಲ್ಲಿ ರಾಜ್ಯದ ವಿವಿಧೆಡೆಯಿದ್ದ ಕೃಷಿ, ಕೃಷಿಯೇತರ ಜಮೀನುಗಳು, ಕಟ್ಟಡಗಳು ಮತ್ತು ರೆಸಾರ್ಟ್‌ ರೂಪದಲ್ಲಿ ಹಾಗೂ ಬ್ಯಾಂಕ್‌ ಖಾತೆಗಳಲ್ಲಿ ಇದ್ದ ಸ್ಥಿರಾಸ್ತಿ ಮತ್ತು ಚರಾಸ್ತಿಯನ್ನು ಇ.ಡಿ ಮುಟ್ಟುಗೋಲು ಹಾಕಿಕೊಂಡಿದೆ.

ರಿಟರ್ನ್‌ ನೀಡುವಷ್ಟು ವಹಿವಾಟು ಅಥವಾ ಹಣದ ಹರಿವು ಇಲ್ಲದೇ ಇದ್ದರೂ ಹೂಡಿಕೆ ಮೇಲೆ ಹೆಚ್ಚಿನ ಬಡ್ಡಿ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ 650 ಕೋಟಿ ರೂ.ಯನ್ನು ಕಣ್ವ ಸಂಗ್ರಹಿಸಿದೆ. ಆದರೆ, ಮೆಚ್ಯುರಿಟಿ ಬಳಿಕ ಠೇವಣಿ ಹಣ, ಬಡ್ಡಿ ಮರಳಿಸಿಲ್ಲ.

ಕಣ್ವ ಸೌಹಾರ್ದ ಸಹಕಾರಿ ಸಂಘದ ಅವ್ಯವಹಾರ ಪ್ರಕರಣ, ಕಣ್ವಗ್ರೂಪ್‌ ಸಂಸ್ಥೆಗಳ ಮೇಲೆ ಇಡಿ ದಾಳಿ

ಸಾರ್ವಜನಿಕರು ಹೂಡಿಕೆ ಮಾಡಿದ ಹಣವನ್ನು ಸಾಲದ ರೂಪದಲ್ಲಿಬೇರೆಯವರಿಗೆ ವರ್ಗಾಯಿಸಿದ್ದಾರೆ. ಮರುಪಾವತಿಗಳು ಮತ್ತು ಲಭ್ಯವಿರುವ ಸಂಪನ್ಮೂಲ ಸಾಮರ್ಥ್ಯ ಮೀರಿ ವಹಿವಾಟು ನಡೆಸಲಾಗಿದೆ. ಕಾಯ್ದೆ ಮತ್ತು ನಿಯಮಗಳನ್ನು ಉಲ್ಲಂಘಿಘಿಸಿ ವಹಿವಾಟು ನಡೆಸಿರುವುದು ತನಿಖೆಯಲ್ಲಿಗೊತ್ತಾಗಿದೆ ಎಂದು ಇ.ಡಿ ತಿಳಿಸಿದೆ.

ಕಣ್ವ ವಂಚನೆ ಪ್ರಕರಣ ಸಿಐಡಿಗೆ ವಹಿಸುವ ಸಾಧ್ಯತೆ

ಜೈಲಿನಲ್ಲಿರುವ ನಂಜುಂಡಯ್ಯ
ಪೊಲೀಸ್‌ ಠಾಣೆಯಲ್ಲಿದಾಖಲಾಗಿದ್ದ ದೂರು ಆಧರಿಸಿ ಕೇಸ್‌ ದಾಖಲಿಸಿಕೊಂಡಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಎನ್‌. ನಂಜುಂಡಯ್ಯ, ಕಣ್ವ ಗ್ರೂಪ್‌ ಆಫ್‌ ಕಂಪನಿ, ಸೌಹಾರ್ದ ಸಹಕಾರ ಕ್ರೆಡಿಟ್‌ ಲಿಮಿಟೆಡ್‌ ಸಂಬಂಧ ಕುಟುಂಬ ಸದಸ್ಯರ ಸ್ಥಳಗಳ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಮಹತ್ವದ ದಾಖಲೆಗಳು ಪತ್ತೆಯಾಗಿದ್ದವು. 2020ರ ಆ.25ರಂದು ನಂಜುಂಡಯ್ಯ ಅವರನ್ನು ಬಂಧಿಸಲಾಗಿತ್ತು. 7 ದಿನಗಳ ಕಾಲ ವಶಕ್ಕೆ ಪಡೆದು ವಿಚಾರಣೆ ನಡೆಸಿದ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನಂಜುಂಡಯ್ಯ ಈಗ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

ಪೊಲೀಸರಿಂದ ಕಣ್ವ ಸಂಸ್ಥೆಯ ದಾಖಲೆ ಸಂಗ್ರಹ: ಆರ್‌ಬಿಐ, ಸಹಕಾರ ಇಲಾಖೆ, ಚಾರ್ಟರ್ಡ್‌ ಅಕೌಂಟೆಂಟ್‌ಗಳ ನೆರವಿಗೆ ಪತ್ರ

ನಷ್ಟದಲ್ಲಿದ್ದರೂ ಲಾಭ ತೋರಿಸಿ ಮೋಸ !
ಕಣ್ವ ಗ್ರೂಪ್‌ ಆಫ್‌ ಕಂಪನಿ ಮತ್ತು ಸೊಸೈಟಿ ನಷ್ಟದಲ್ಲಿತ್ತು. ಆದರೂ, ಸೊಸೈಟಿಯ ಹಣಕಾಸಿನ ನೈಜ ಸ್ಥಿತಿಯನ್ನು ಮರೆಮಾಚಿ ಲಾಭದಲ್ಲಿದೆ ಎಂದು ದಾಖಲೆಗಳನ್ನು ತಿರುಚಿ ಅಮಾಯಕ ಜನರನ್ನು ಆಕರ್ಷಿಸಲಾಯಿತು. ಹೂಡಿಕೆ ಮೇಲೆ ಶೇ.12ರಿಂದ 15ರವರೆಗೆ ಬಡ್ಡಿ ಕೊಡುವುದಾಗಿ ಹೇಳಿ ಅನಧಿಕೃತ ಹಣ ಸಂಗ್ರಹ ಕೇಂದ್ರಗಳು ಮತ್ತು ಕಲೆಕ್ಷನ್‌ ಏಜೆಂಟರ ಮೂಲಕ ಸುಮಾರು 13 ಸಾವಿರ ಜನರಿಂದ 650 ಕೋಟಿ ರೂ. ಸಂಗ್ರಹಿಸಲಾಗಿದೆ. ಮತ್ತೊಂದೆಡೆ ಸಾಲ ಪಡೆದವರು ಮರುಪಾವತಿ ಮಾಡುವ ಸಾಮರ್ಥ್ಯ ಹೊಂದಿರದೇ ಇದ್ದರೂ ನಿಯಮಗಳನ್ನು ಉಲ್ಲಂಘಿಘಿಸಿ ಅವರಿಗೆ ಸಾಲದ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.

ಕಂಪನಿ ನಷ್ಟದಲ್ಲಿದ್ದರೂ ಹಣ ಸಂಗ್ರಹ ಕೇಂದ್ರಗಳು, ಏಜೆಂಟರಿಗಾಗಿ ಕಾನೂನುಬಾಹಿರವಾಗಿ ಹಣ ಖರ್ಚು ಮಾಡಲಾಗಿದೆ. ಕಣ್ವ ಗ್ರೂಪ್‌ ಆಫ್‌ ಕಂಪನಿಯ ಸಿಬ್ಬಂದಿಯ ವೇತನ ಮತ್ತು ಇನ್ನಿತರ ಅನಗತ್ಯ ಸೌಲಭ್ಯಗಳಿಗಾಗಿ ಹಣವನ್ನು ಬೇಕಾಬಿಟ್ಟಿಯಾಗಿ ಬಳಕೆ ಮಾಡಲಾಗಿದೆ.

ಸೊಸೈಟಿಯ ಖಾತೆಯಲ್ಲಿತೀರಾ ಕಡಿಮೆ ಹಣವನ್ನು ನಿರ್ವಹಿಸಲಾಗುತ್ತಿತ್ತು. ಆದರೆ, ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಲೆಕ್ಕಪತ್ರಗಳನ್ನು ಸಲ್ಲಿಸುವ ವೇಳೆ ಕ್ಲೌಡ್‌ ಆಧಾರಿತ ಜೆನಿತ್‌ ಸಾಫ್ಟ್‌ವೇರ್‌ ಬಳಸಿ ನೈಜ ಮಾಹಿತಿಯನ್ನು ತಿರುಚಿ ಎಲ್ಲವೂ ಸರಿ ಇರುವಂತೆ ಸಲ್ಲಿಕೆ ಮಾಡುತ್ತಿದ್ದರು. ಈ ಮೂಲಕ ಸೊಸೈಟಿಯು ಉದ್ದೇಶಪೂರ್ವಕವಾಗಿ ಸೌಹಾರ್ದ ಸಹಕಾರಿ ಕಾಯ್ದೆ, ನಿಯಮಗಳು, ಬೈಲಾಗಳು ಮತ್ತು ಸುತ್ತೋಲೆಗಳನ್ನು ಉಲ್ಲಂಘಿಘಿಸಿದೆ ಎಂದು ಇ.ಡಿ ಆರೋಪಿಸಿದೆ.

ಶ್ಯೂರಿಟಿ ಇಲ್ಲದೇ ಸೊಸೈಟಿ ಹಣ ಕಣ್ವ ಕಂಪನಿಗೆ ವರ್ಗಾವಣೆ
ಸೊಸೈಟಿಯಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಿದ 400 ಕೋಟಿ ರೂ.ಯನ್ನು ಅಕ್ರಮವಾಗಿ ಯಾವುದೇ ಶ್ಯೂರಿಟಿ ಇಲ್ಲದ ಸಾಲದ ರೂಪದಲ್ಲಿಎನ್‌.ನಂಜುಂಡಯ್ಯ ಅವರ ಕಣ್ವ ಗ್ರೂಪ್‌ ಆಫ್‌ ಕಂಪನಿಗಳಿಗೆ ವರ್ಗಾವಣೆ ಮಾಡಲಾಗಿದೆ. ಈ ಸಾಲ ಇನ್ನೂ ಬಾಕಿ ಇದೆ. ಮತ್ತೊಂದೆಡೆ ವಿವಿಧ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಂದ ನಂಜುಂಡಯ್ಯ ಅವರು 120 ಕೋಟಿ ರೂ. ಸಾಲವನ್ನು ಪಡೆದಿದ್ದು, ಅದು ಕೂಡ ಬಾಕಿ ಇದೆ.

ಸೊಸೈಟಿ ಹಣ ನೇರವಾಗಿ ಸದಸ್ಯರ ಖಾತೆಗೆ !
ಸುಳ್ಳು ಆಶ್ವಾಸನೆ ನೀಡಿ ಅಮಾಯಕರಿಂದ ಸಂಗ್ರಹಿಸಿದ ಹಣವನ್ನು ಕಣ್ವ ಗ್ರೂಪ್‌ ಕಂಪನಿಯ ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. ಅಲ್ಲದೇ, ಆರೋಪಿ ನಂಜುಂಡಯ್ಯ ಮತ್ತು ಅವರ ಕುಟುಂಬ ಸದಸ್ಯರು ಮತ್ತು ಸೊಸೈಟಿಗೆ ಸಂಬಂಧಿಸಿದವರ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಹೀಗೆ, ಅಕ್ರಮವಾಗಿ ಪಡೆದ ಹಣದಿಂದ 160ಕ್ಕೂ ಹೆಚ್ಚು ಸ್ಥಿರಾಸ್ತಿ ಮತ್ತು ಚರಾಸ್ತಿಗಳನ್ನು ಖರೀದಿಸಿದ್ದಾರೆ.

ಹಣ ಹೂಡಿಕೆ ಮಾಡಿದವರಿಗೆ ಹಣ ಮರುಪಾವತಿ ಮಾಡಲಾಗದೇ ಇದ್ದಾಗ, ಖರೀದಿ ಮಾಡಿದ ಆಸ್ತಿಗಳನ್ನು ಹೂಡಿಕೆದಾರರಿಗೆ ನೀಡಲಾಗಿದೆ. ಈ ರೀತಿ ನಂಜುಂಡಯ್ಯ ಮತ್ತಿತರು ಸೇರಿ ಅಪರಾಧ ನಧಿಡೆಧಿಸುವ ಉದ್ದೇಶದಿಂದಲೇ ಪೋಂಜಿ ಸ್ಕೀಂ ಆರಂಭಿಸಿ ದೊಡ್ಡ ಪ್ರಮಾಣದಲ್ಲಿಸಾರ್ವಜನಿಕರಿಗೆ ವಂಚಿಸಿರುವುದು ತನಿಖೆಯಲ್ಲಿಬೆಳಕಿಗೆ ಬಂದಿದೆ. ತನಿಖೆ ಮುಂದುವರಿದಿದೆ ಎಂದು ಇ.ಡಿ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ