ಆ್ಯಪ್ನಗರ

ಕಾಂಗ್ರೆಸ್‌ನಲ್ಲಿ ಮುಗಿಯದ ಮುನಿಸು; ಅಭ್ಯರ್ಥಿ ಆಯ್ಕೆ ಸಭೆಗೆ ಹಿರಿಯರು ಚಕ್ಕರ್‌

ಉಪಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲು ಗುರುವಾರ ಕರೆದಿದ್ದ ಸಭೆಗೆ ಹಿರಿಯ ನಾಯಕರು ಗೈರು ಹಾಜರಾಗುವ ಮೂಲಕ ಸಿದ್ದರಾಮಯ್ಯ ಹಾಗೂ ಮೂಲ ಕಾಂಗ್ರೆಸಿಗರ ನಡುವಿನ ಸಂಘರ್ಷ ತೀವ್ರಗೊಂಡಿದೆ.

Vijaya Karnataka 14 Nov 2019, 9:59 pm
ಬೆಂಗಳೂರು: ಉಪಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲು ಗುರುವಾರ ಕರೆದಿದ್ದ ಸಭೆಗೆ ಹಿರಿಯ ನಾಯಕರು ಗೈರು ಹಾಜರಾಗುವ ಮೂಲಕ ಸಿದ್ದರಾಮಯ್ಯ ಹಾಗೂ ಮೂಲ ಕಾಂಗ್ರೆಸಿಗರ ನಡುವಿನ ಸಂಘರ್ಷ ತಾರಕಕ್ಕೇರಿದೆ.
Vijaya Karnataka Web karanataka by election congress meeting senior leaders not attended
ಕಾಂಗ್ರೆಸ್‌ನಲ್ಲಿ ಮುಗಿಯದ ಮುನಿಸು; ಅಭ್ಯರ್ಥಿ ಆಯ್ಕೆ ಸಭೆಗೆ ಹಿರಿಯರು ಚಕ್ಕರ್‌


ಕೈ ತಪ್ಪಿದ ಬಿಜೆಪಿ ಟಿಕೆಟ್; ಪಕ್ಷೇತರವಾಗಿ ಸ್ಪರ್ಧೆಗೆ ರೋಷನ್ ಬೇಗ್ ಸಿದ್ದತೆ?

ಬಾಕಿ ಉಳಿದಿರುವ 7 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವ ಹಾಗೂ ಉಪಚುನಾವಣೆ ಕಾರ್ಯತಂತ್ರ ನಿರ್ಧರಿಸಲು ಕೆಪಿಸಿಸಿ ಕಚೇರಿಯಲ್ಲಿ ಹಿರಿಯ ಮುಖಂಡರ ಸಭೆ ಕರೆಯಲಾಗಿತ್ತು. 8 ಕ್ಷೇತ್ರಗಳ ಅಭ್ಯರ್ಥಿ ಆಯ್ಕೆಯ ಮೊದಲ ಪಟ್ಟಿ ಪ್ರಕಟಿಸುವಲ್ಲಿ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಸಿದ್ದರಾಮಯ್ಯ ವಿರುದ್ಧ ಮುನಿದಿರುವ ಮೂಲ ಕಾಂಗ್ರೆಸಿನ ಹಿರಿಯ ನಾಯಕರು, ಗುರುವಾರದ ಸಭೆಗೆ ಉದ್ದೇಶಪೂರ್ವಕ ಗೈರು ಹಾಜರಾದರು. ಈ ಮೂಲಕ ಉಪಚುನಾವಣೆ ಸೋಲು -ಗೆಲುವು ಎರಡಕ್ಕೂ ಸಿದ್ದರಾಮಯ್ಯ ಅವರೇ ಹೊಣೆಗಾರರು ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಉಪಚುನಾವಣೆಯಲ್ಲಿ ಪಕ್ಷಾಂತರ ಪರ್ವ; ‘ಕೈ’ ಹಿಡಿದ ಕಮಲದ ರಾಜು ಕಾಗೆ

ಭಾನುವಾರದ ಸಭೆಯಲ್ಲಿ ಸಿದ್ದರಾಮಯ್ಯ ಅವರೊಟ್ಟಿಗೆ ಜಟಾಪಟಿ ನಡೆಸಿದ್ದ ಬಿ.ಕೆ.ಹರಿಪ್ರಸಾದ್‌, ಕೆ.ಎಚ್‌.ಮುನಿಯಪ್ಪ ಮಾತ್ರವಲ್ಲದೆ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್‌, ಹಿರಿಯ ನಾಯಕರಾದ ಡಿ.ಕೆ.ಶಿವಕುಮಾರ್‌, ಎಚ್‌.ಕೆ. ಪಾಟೀಲ್‌, ಸಂಸದರಾದ ಜಿ.ಸಿ.ಚಂದ್ರಶೇಖರ್‌, ಡಿ.ಕೆ.ಸುರೇಶ್‌, ಡಾ.ಎಲ್‌.ಹನುಮಂತಯ್ಯಸೇರಿ ಬಹಳಷ್ಟು ಹಿರಿಯ ನಾಯಕರು ಸಭೆಗೆ ಬರಲಿಲ್ಲ.

ಈಗಲೂ ಸಿದ್ದರಾಮಯ್ಯ ಬಯಸುವ ಅಭ್ಯರ್ಥಿಗಳ ಪಟ್ಟಿಯೇ ಅಂತಿಮಗೊಳ್ಳುವ ಸಾಧ್ಯತೆಗಳಿವೆ ಎಂಬುದು ಹಿರಿಯರ ನಿರೀಕ್ಷೆ. ಇಂತಹ ಸ್ಥಿತಿಯಲ್ಲಿಅಭ್ಯರ್ಥಿ ಆಯ್ಕೆ ಸಭೆಯಲ್ಲಿಪಾಲ್ಗೊಂಡರೆ ಪ್ರಯೋಜನ ಏನು? ಸಾಮೂಹಿಕ ನಿರ್ಧಾರದ ಸಂದೇಶ ರವಾನೆಯಾಗಿ ಸಿದ್ದರಾಮಯ್ಯ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುತ್ತಾರೆ. ಹೀಗಾಗಿ, ಸಭೆಯಲ್ಲಿ ಭಾಗೀದಾರರಾಗುವುದು ಬೇಡ ಎಂಬ ತೀರ್ಮಾನಕ್ಕೆ ಹಿರಿಯರು ಬಂದಿದ್ದಾರೆ ಎನ್ನಲಾಗಿದೆ.

ಶುಕ್ರವಾರ ಪಟ್ಟಿ ಪ್ರಕಟ

ಹಿರಿಯರ ಗೈರುಹಾಜರಿಯಲ್ಲೇ ಬಾಕಿ 7 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿ ಎಐಸಿಸಿ ಒಪ್ಪಿಗೆಗೆ ರವಾನಿಸಲಾಗಿದೆ. ಶುಕ್ರವಾರ ಕಾಂಗ್ರೆಸ್‌ ಅಭ್ಯರ್ಥಿಗಳ 2ನೇ ಪಟ್ಟಿ ಪ್ರಕಟವಾಗುವ ನಿರೀಕ್ಷೆಯಿದೆ. ಸಿದ್ದರಾಮಯ್ಯ, ದಿನೇಶ್‌ ಗುಂಡೂರಾವ್‌, ಈಶ್ವರ್‌ ಖಂಡ್ರೆ, ಕೆ.ಜೆ.ಜಾರ್ಜ್ ಎಸ್‌.ಆರ್‌.ಪಾಟೀಲ್‌, ಎಂ.ಬಿ.ಪಾಟೀಲ್‌, ಶಿವಶಂಕರರೆಡ್ಡಿ, ಕೃಷ್ಣ ಬೈರೇಗೌಡ ಹಾಗೂ ನಸೀರ್‌ ಅಹ್ಮದ್‌ ಅವರು ಸಭೆಯಲ್ಲಿ ಪಾಲ್ಗೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ