ಆ್ಯಪ್ನಗರ

ಸಿದ್ದರಾಮಯ್ಯರೇ ಮುಂದಿನ ಸಿಎಂ ಅಭ್ಯರ್ಥಿಯೆಂದು ಘೋಷಿಸಿ : ರಾಹುಲ್‌ಗೆ ದೇವೇಗೌಡರ ಸವಾಲು

'ಮುಂದಿನ ಅವಧಿಗೂ ಸಿದ್ದರಾಮಯ್ಯ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿಯೆಂದು ಘೋಷಣೆ ಮಾಡಿ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಅವರು ರಾಜ್ಯಕ್ಕೆ ಬರಲಿ, ಮುಂದೆ ಅಖಾಡ ನೋಡೋಣ' ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಸವಾಲು ಹಾಕಿದ್ದಾರೆ.

Vijaya Karnataka 31 Dec 2017, 8:37 am

-ಎಚ್‌ಡಿಕೆ, ಬಿಎಸ್‌ವೈ ಸಿಎಂ ಆಗೋದಿಲ್ಲ ಎಂಬ ಹೇಳಿಕೆಗೆ ಗರಂ

-ನಿಮ್ಮದು ಸರಕಾರಿ ಕಾರ್ಯಕ್ರಮವೋ, ಪ್ರಚಾರವೋ? ಗೌಡರ ಪ್ರಶ್ನೆ

ಬೆಂಗಳೂರು: 'ಮುಂದಿನ ಅವಧಿಗೂ ಸಿದ್ದರಾಮಯ್ಯ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿಯೆಂದು ಘೋಷಣೆ ಮಾಡಿ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಅವರು ರಾಜ್ಯಕ್ಕೆ ಬರಲಿ, ಮುಂದೆ ಅಖಾಡ ನೋಡೋಣ' ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಸವಾಲು ಹಾಕಿದ್ದಾರೆ.

ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,'' ಕಳೆದ ಬಾರಿ ಕಾಂಗ್ರೆಸ್‌ 120 ಸೀಟುಗಳನ್ನು ಗೆಲ್ಲಲು ಕಾರಣವೇನು? ಇವರೇನು ಗೆದ್ದಿಲ್ಲ. ಈ ಬಾರಿ ಬರಲಿ ನೋಡೋಣ. ಕುಮಾರಸ್ವಾಮಿ, ಯಡಿಯೂರಪ್ಪ ಮತ್ತೆ ಸಿಎಂ ಆಗಲ್ಲವೆಂದು ಪದೇಪದೆ ಹೇಳುತ್ತಿದ್ದಾರೆ. ಏನು ಹಣೆಮೇಲೆ ಬರೆದಿದ್ದಾರಾ. ಸ್ವಲ್ಪ ದಿನ ತಡೆದುಕೊಳ್ಳಿ, ಎಲ್ಲವನ್ನು ಗಮನಿಸುತ್ತಿದ್ದೇನೆ,'' ಎಂದು ಚಾಟಿ ಬೀಸಿದರು.

''ಸಿಎಂ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ, ಜಾಮೀನು ಪಡೆದುಕೊಂಡವರೆಲ್ಲಾ ಸಿಎಂ ಆಗೋಕೆ ಹೇಗೆ ಸಾಧ್ಯ ಎಂದು ಹೇಳುತ್ತಿದ್ದಾರೆ. ನನಗೂ ತಾಳ್ಮೆ ಇದೆ. ತಾಳ್ಮೆ ಮೀರಿದಾಗ ಏನಾಗುತ್ತೆ ನೋಡೋಣ. ಬಿರುಸಿನ ಮಾತು ಸ್ವಲ್ಪ ಕಡಿಮೆ ಮಾಡಿ, ಇಲ್ಲದಿದ್ದರೆ ಅದಕ್ಕೆ ಪ್ರತಿಯಾಗಿ ಬಿರುಸಿನ ಪ್ರತಿಕ್ರಿಯೆ ಕೊಡುವ ಶಕ್ತಿ ನಮಗೂ ಇದೆ,'' ಎಂದು ಎಚ್ಚರಿಕೆ ನೀಡಿದರು.

''ಆಪರೇಷನ್‌ ಕಮಲದಲ್ಲಿ ಏನು ಮಾಡಿದ್ರೀ? ಯಡಿಯೂರಪ್ಪ ಸಿಎಂ ಆಗಿದ್ದಾಗ ಪ್ರತಿಪಕ್ಷದಲ್ಲಿದ್ದ ಸಿದ್ದರಾಮಯ್ಯ ಏನು ಮಾಡಿದ್ದರು? ಕುಮಾರಸ್ವಾಮಿ ಹೋರಾಟ ಮಾಡಿದ್ದನ್ನು ಕುಳಿತು ನೋಡುತ್ತಿದ್ದರು. ಜನವರಿ ಬಳಿಕ ಕುಮಾರಸ್ವಾಮಿ ಒಂದು ಕಡೆ, ನಾನು ಮತ್ತೊಂದು ಕಡೆ ಪ್ರವಾಸ ಮಾಡುತ್ತೇವೆ, ಆಗ ಗೊತ್ತಾಗುತ್ತದೆ ತಮ್ಮ ಶಕ್ತಿ,'' ಎಂದು ಎಚ್ಚರಿಸಿದರು.

ನಾಯಕರ ಬಗ್ಗೆ ಲಘು ಮಾತಿಲ್ಲ

''ಪ್ರಧಾನಿ ಮೋದಿ, ಸೋನಿಯಾ, ರಾಹುಲ್‌ ಬಗ್ಗೆಯೂ ಲಘುವಾಗಿ ಮಾತನಾಡಿಲ್ಲ, ಮಾತನಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

''ಮಹದಾಯಿ ವಿಚಾರದಲ್ಲಿ ಪರಸ್ಪರ ದೋಷಾರೋಪದಿಂದ ಏನೂ ಆಗುವುದಿಲ್ಲ. ಮಹದಾಯಿಗೆ ಕಟ್ಟಿರುವ ತಡೆಗೋಡೆ ರಕ್ಷಣೆ ಜವಾಬ್ದಾರಿ ಕರ್ನಾಟಕ ಸರಕಾರದ್ದು. ಅದು ಈಗಲೂ ಅದೇ ರೀತಿ ಮುಂದುವರಿಯುತ್ತದೆ ಎಂದು ಭಾವಿಸಿದ್ದೇನೆ,''ಎಂದು ಹೇಳಿದರು.

ಅಯ್ಯೋ ಯಾವ ಮುಖ್ಯಮಂತ್ರಿಯೂ ಇವರ ರೀತಿ ಮಾಡಿಲ್ಲ. ಇವರೊಬ್ಬರೇ ನವ ಕರ್ನಾಟಕ ನಿರ್ಮಾಣ ಮಾಡೋರು.

Vijaya Karnataka Web karanataka cm candidate
ಸಿದ್ದರಾಮಯ್ಯರೇ ಮುಂದಿನ ಸಿಎಂ ಅಭ್ಯರ್ಥಿಯೆಂದು ಘೋಷಿಸಿ : ರಾಹುಲ್‌ಗೆ ದೇವೇಗೌಡರ ಸವಾಲು

-ಎಚ್‌.ಡಿ.ದೇವೇಗೌಡ, ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ