ಆ್ಯಪ್ನಗರ

*ರೆಸಾರ್ಟ್‌ನಲ್ಲಿ ಜೆಡಿಎಸ್‌ ಶಾಸಕರೊಂದಿಗೆ ಸಿಎಂ ಸಭೆ

ಸೋಮವಾರ ರಾತ್ರಿ ದೇವನಹಳ್ಳಿ ಸಮೀಪದ ಪ್ರೆಸ್ಟೀಜ್‌ ಗಾಲ್ಫ್‌ಶೇರ್‌ ರೆಸಾರ್ಟ್‌ ಸೇರಿದ ಜೆಡಿಎಸ್‌ ಶಾಸಕರು ಮಂಗಳವಾರ ಅಲ್ಲಿಯೇ ಬೀಡು ಬಿಟ್ಟಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಮಹತ್ವದ ರಾಜಕೀಯ ಚರ್ಚೆ ನಡೆಸಿದರು.

Vijaya Karnataka Web 10 Jul 2019, 5:00 am
ಬೆಂಗಳೂರು ಗ್ರಾಮಾಂತರ: ಸೋಮವಾರ ರಾತ್ರಿ ದೇವನಹಳ್ಳಿ ಸಮೀಪದ ಪ್ರೆಸ್ಟೀಜ್‌ ಗಾಲ್ಫ್‌ಶೇರ್‌ ರೆಸಾರ್ಟ್‌ ಸೇರಿದ ಜೆಡಿಎಸ್‌ ಶಾಸಕರು ಮಂಗಳವಾರ ಅಲ್ಲಿಯೇ ಬೀಡು ಬಿಟ್ಟಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಮಹತ್ವದ ರಾಜಕೀಯ ಚರ್ಚೆ ನಡೆಸಿದರು.
Vijaya Karnataka Web 0807-2-2-KSG_030 (9)


ಮಂಗಳವಾರ ಮಧ್ಯಾಹ್ನ ಸುಮಾರು 3 ಗಂಟೆ ಸುಮಾರಿಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ರೆಸಾರ್ಟ್‌ಗೆ ಆಗಮಿಸಿ ಶಾಸಕರೊಂದಿಗೆ ಮಾತುಕತೆ ನಡೆಸಿದರು. ಯಾವೊಬ್ಬ ಶಾಸಕರು ರೆಸಾರ್ಟ್‌ ಹೊರಗಡೆ ಓಡಾಡುವುದು, ಮಾಧ್ಯಮದವರೊಂದಿಗೆ ಮಾತುಕತೆ ನಡೆಸಬಾರದು ಎಂದು ಸೂಚಿಸಿದ್ದರಿಂದ ಸ್ಥಳೀಯ ಶಾಸಕ ನಿಸರ್ಗ ನಾರಾಯಣಸ್ವಾಮಿ ಆದಿಯಾಗಿ ಯಾರೊಬ್ಬರು ಹೊರಗಡೆ ಸುಳಿಯಲಿಲ್ಲ. ಆದರೆ ಸಚಿವ ಬಂಡೆಪ್ಪ ಕಾಶಂಪುರ ಮಾತ್ರ ಹೊರಗಡೆ ಕಾಣಿಸಿಕೊಂಡು ಮಾರಮ್ಮ ಗುಡಿಗೆ ತೆರಳಿ ಪೂಜೆಸಲ್ಲಿಸಿದ್ದು ವಿಶೇಷವೆನಿಸಿತು.

ವಾರಾಂತ್ಯದವರೆಗೂ ರೆಸಾರ್ಟ್‌ ವಾಸ್ತವ್ಯ !

ರೆಸಾರ್ಟ್‌ನಲ್ಲಿರುವ ವಿಲ್ಲಾಗಳು ಜು.13ರವರೆಗೂ ಬುಕ್‌ ಆಗಿದೆ ಎಂದು ರೆಸಾರ್ಟ್‌ ಆಡಳಿತ ಮಂಡಳಿ ತಿಳಿಸಿದ್ದು, ಜೆಡಿಎಸ್‌ ಶಾಸಕರು ವಾರಂತ್ಯದವರೆಗೂ ಇಲ್ಲೇ ಬೀಡುಬಿಡುವುದು ನಿಚ್ಚಳವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ