ಆ್ಯಪ್ನಗರ

ಸಮಯ ಸಾಧಿಸಿ ಗಾಯಬ್‌ ಆದ ಶಂಕರ್‌!

ಡಿಸಿಎಂ ನಿವಾಸದಲ್ಲಿ ಆಯೋಜನೆಯಾಗಿದ್ದ ಉಪಾಹಾರ ಕೂಟದಲ್ಲಿ ಭಾಗಿಯಾಗಿದ್ದ ಪಕ್ಷೇತರ ಶಾಸಕ ಆರ್‌ಶಂಕರ್‌ ಸದ್ದಿಲ್ಲದೆ ಕೈಕೊಟ್ಟು ಗಾಯಬ್‌ ಆದ ಸ್ಟೋರಿ ಸ್ವಾರಸ್ಯಕರವಾಗಿದೆ...

Vijaya Karnataka 10 Jul 2019, 5:00 am
ಬೆಂಗಳೂರು : ಡಿಸಿಎಂ ನಿವಾಸದಲ್ಲಿ ಆಯೋಜನೆಯಾಗಿದ್ದ ಉಪಾಹಾರ ಕೂಟದಲ್ಲಿ ಭಾಗಿಯಾಗಿದ್ದ ಪಕ್ಷೇತರ ಶಾಸಕ ಆರ್‌.ಶಂಕರ್‌ ಸದ್ದಿಲ್ಲದೆ ಕೈಕೊಟ್ಟು ಗಾಯಬ್‌ ಆದ ಸ್ಟೋರಿ ಸ್ವಾರಸ್ಯಕರವಾಗಿದೆ.
Vijaya Karnataka Web 0807-2-2-09 (1)


ಸೋಮವಾರ ಬೆಳಗ್ಗೆ ಡಿಸಿಎಂ ನಿವಾಸದ ಬ್ರೇಕ್‌ಫಾಸ್ಟ್‌ ಮೀಟಿಂಗ್‌ನಲ್ಲಿ ಶಂಕರ್‌ ಲವಲವಿಕೆಯಿಂದ ಭಾಗವಹಿಸಿದ್ದರು. ಸಭೆಯಲ್ಲಿರುವಾಗಲೇ ಮತ್ತೊಬ್ಬ ಪಕ್ಷೇತರ ಶಾಸಕ ನಾಗೇಶ್‌ ಬಿಜೆಪಿ ಗಾಳಕ್ಕೆ ಬಿದ್ದು, ಮುಂಬಯಿಗೆ ಹಾರಲು ಸಜ್ಜಾಗಿದ್ದಾರೆ ಎಂಬ ಬ್ರೇಕಿಂಗ್‌ ನ್ಯೂಸ್‌ ಬಂತು.

ಈ ಸುದ್ದಿ ಬರುತ್ತಿದ್ದಂತೆ ಶಂಕರ್‌ ಮುಖ ಕಳೆಗುಂದತೊಡಗಿತು. ಅವರ ಫೋನ್‌ ಸಂಭಾಷಣೆ ಗಮನಿಸಿದ ಕಾಂಗ್ರೆಸ್‌ ನಾಯಕರು ಶಂಕರ್‌ ಮೇಲೆ ನಿಗಾ ಇಟ್ಟಿದ್ದರು. ಹಾಗಾಗಿ ಪಂಜರದೊಳಗೆ ಸಿಲುಕಿದ ಗಿಳಿಯಂತೆ ಶಂಕರ್‌ ಚಡಪಡಿಸತೊಡಗಿದ್ದರು. ಈ ನಡುವೆ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಡಿಸಿಎಂ ನಿವಾಸಕ್ಕೆ ಆಗಮಿಸಿದರು. ಎಲ್ಲ ನಾಯಕರ ಗಮನ ಸಿಎಂ ಕಡೆಗೆ ಹೋಯಿತು. ಈ ಅವಕಾಶ ಬಳಸಿಕೊಂಡ ಶಂಕರ್‌ ಜನಜಂಗುಳಿಯಲ್ಲಿ ತೂರಿಕೊಂಡು ಅಲ್ಲಿಂದ ಎಸ್ಕೇಪ್‌ ಆದರು. ಅವರು ಗೇಟ್‌ ದಾಟುತ್ತಿರುವಾಗ ಕೈಕೊಡುತ್ತಿದ್ದಾರೆಂಬ ಸುಳಿವು ಸಿಕ್ಕಿ ಹಿಡಿದು ನಿಲ್ಲಿಸಬೇಕೆನ್ನುವಷ್ಟರಲ್ಲಿ ಅವರು ಕಾರು ಹತ್ತಿ ಹೊರಟಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ