ಅಧಿವೇಶನದಲ್ಲಿ ಶಾಸಕರೊಂದಿಗೆ ಚರ್ಚೆ ನಡೆಸಲು ಸಿದ್ಧ : ಸಿಎಂ
ರಾಜಕೀಯ ಬೆಳವಣಿಗೆ ಕುರಿತು ಮಾಧ್ಯಮಗಳಲ್ಲಿ ಪ್ರತಿಕ್ರಿಯೆ ನೀಡುವ ಅವಶ್ಯಕತೆ ಇಲ್ಲ...
Vijaya Karnataka 11 Jul 2019, 5:00 am
ಬೆಂಗಳೂರು: ರಾಜಕೀಯ ಬೆಳವಣಿಗೆ ಕುರಿತು ಮಾಧ್ಯಮಗಳಲ್ಲಿ ಪ್ರತಿಕ್ರಿಯೆ ನೀಡುವ ಅವಶ್ಯಕತೆ ಇಲ್ಲ. ಈ ತಿಂಗಳಲ್ಲೇ ನಡೆಯಲಿರುವ ವಿಧಾನಸಭೆ ಅಧಿವೇಶನದಲ್ಲಿ ಎಲ್ಲ ಜನಪ್ರತಿನಿಧಿಗಳ ಜತೆ ಚರ್ಚಿಸಲು ತಯಾರಿದ್ದೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಬಾಗಲಗುಂಟೆಯಲ್ಲಿ ರಾಜ್ಯ ಕಾರ್ಮಿಕ ಅಧ್ಯಯನ ಸಂಸ್ಥೆಯ ಹೊಸ ಕಟ್ಟಡ ಹಾಗೂ ಕಾರ್ಮಿಕ ಕಲ್ಯಾಣ ಮಂಡಳಿಯ ಸಮುದಾಯ ಭವನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ''ಪ್ರತಿ ಪಕ್ಷಗಳ ನಾಯಕರು ಕೀಳುಮಟ್ಟದ ಮಾತುಗಳನ್ನಾಡುತ್ತಿದ್ದಾರೆ.ರಾಜಕೀಯ ಬೆಳವಣಿಗೆಗಳ ಬಗ್ಗೆ ತಪ್ಪು ಮಾಹಿತಿಗಳ ಆಧಾರದಲ್ಲಿ ಸಾರ್ವಜನಿಕರು ಯಾವುದೇ ತೀರ್ಮಾನ ತೆಗೆದುಕೊಳ್ಳಲು ಹೋಗಬಾರದು. ಜನರು ಕೈಗೊಳ್ಳುವ ತೀರ್ಮಾನ ರಾಜ್ಯದ ಭವಿಷ್ಯಕ್ಕೆ ಮಾರಕವಾಗುವಂತಿರಬಾರದು. ಸಮಚಿತ್ತದಿಂದ ಯೋಚಿಸಿ, ವ್ಯಾಮೋಹಕ್ಕೆ ಒಳಗಾಗದೆ ತೀರ್ಮಾನ ಕೈಗೊಂಡರೆ ಜನರ ಬದುಕು ಚೆನ್ನಾಗಿರುತ್ತದೆ,'' ಎಂದರು.
ಕುದುರೆ ವ್ಯಾಪಾರ
ಕಾರ್ಮಿಕ ಸಚಿವ ವೆಂಕಟರಮಣಪ್ಪ ಮಾತನಾಡಿ, ''ಬಿಜೆಪಿಯವರು ಕುದುರೆ ವ್ಯಾಪಾರ ಮಾಡಿಕೊಂಡು 50-60 ಕೋಟಿ ರೂ. ನೀಡುತ್ತೇವೆ ಎಂದು ಆಮಿಷ ಒಡ್ಡುತ್ತಿದ್ದಾರೆ. ರಾಜ್ಯದಲ್ಲಿ ಲೂಟಿ ನಡೆಯುತ್ತಿದೆ ಎಂದು ಹೇಳುವ ಬಿ.ಎಸ್.ಯಡಿಯೂರಪ್ಪ ತಾವು ಜೈಲಿಗೆ ಹೋಗಿದ್ದನ್ನು ಒಮ್ಮೆ ನೆನಪಿಸಿಕೊಳ್ಳಬೇಕು. ಇಂಥವರು ನಮ್ಮ ಸರಕಾರಕ್ಕೆ ನೀತಿ ಹೇಳಲು ಬರುತ್ತಿದ್ದಾರೆ,'' ಎಂದರು.
ಮಂತ್ರಿ ಮಾಡ್ತೀವಿ, ಬನ್ನಿ
''ಸಿಎಂ ಎಚ್.ಡಿ.ಕುಮಾರಸ್ವಾಮಿ ಯಾವ ಕೆಲಸಕ್ಕೂ ಆಗಲ್ಲ ಎಂದು ಹೇಳಲ್ಲ. ಶಾಸಕರು ಮಾಡಬಾರದ್ದನ್ನು ಮಾಡಲು ಕೇಳಿದರೆ ಮಾತ್ರ ಆಗಲ್ಲ ಎನ್ನುತ್ತಾರೆ. ಎಲ್ಲ ಶಾಸಕರು ವಾಪಸ್ ಬನ್ನಿ, ನಿಮ್ಮನ್ನೂ ಮಂತ್ರಿ ಮಾಡುತ್ತೇವೆ. ಮುಂದಿನ ಐದು ವರ್ಷ ನಾವೇ ಸರಕಾರ ನಡೆಸೋಣ,'' ಎಂದು ಸಚಿವ ವೆಂಕಟರಮಣಪ್ಪ ಹೇಳಿದರು.
ಬಾಗಲಗುಂಟೆಯಲ್ಲಿ ರಾಜ್ಯ ಕಾರ್ಮಿಕ ಅಧ್ಯಯನ ಸಂಸ್ಥೆಯ ಹೊಸ ಕಟ್ಟಡ ಹಾಗೂ ಕಾರ್ಮಿಕ ಕಲ್ಯಾಣ ಮಂಡಳಿಯ ಸಮುದಾಯ ಭವನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ''ಪ್ರತಿ ಪಕ್ಷಗಳ ನಾಯಕರು ಕೀಳುಮಟ್ಟದ ಮಾತುಗಳನ್ನಾಡುತ್ತಿದ್ದಾರೆ.ರಾಜಕೀಯ ಬೆಳವಣಿಗೆಗಳ ಬಗ್ಗೆ ತಪ್ಪು ಮಾಹಿತಿಗಳ ಆಧಾರದಲ್ಲಿ ಸಾರ್ವಜನಿಕರು ಯಾವುದೇ ತೀರ್ಮಾನ ತೆಗೆದುಕೊಳ್ಳಲು ಹೋಗಬಾರದು. ಜನರು ಕೈಗೊಳ್ಳುವ ತೀರ್ಮಾನ ರಾಜ್ಯದ ಭವಿಷ್ಯಕ್ಕೆ ಮಾರಕವಾಗುವಂತಿರಬಾರದು. ಸಮಚಿತ್ತದಿಂದ ಯೋಚಿಸಿ, ವ್ಯಾಮೋಹಕ್ಕೆ ಒಳಗಾಗದೆ ತೀರ್ಮಾನ ಕೈಗೊಂಡರೆ ಜನರ ಬದುಕು ಚೆನ್ನಾಗಿರುತ್ತದೆ,'' ಎಂದರು.
ಕುದುರೆ ವ್ಯಾಪಾರ
ಕಾರ್ಮಿಕ ಸಚಿವ ವೆಂಕಟರಮಣಪ್ಪ ಮಾತನಾಡಿ, ''ಬಿಜೆಪಿಯವರು ಕುದುರೆ ವ್ಯಾಪಾರ ಮಾಡಿಕೊಂಡು 50-60 ಕೋಟಿ ರೂ. ನೀಡುತ್ತೇವೆ ಎಂದು ಆಮಿಷ ಒಡ್ಡುತ್ತಿದ್ದಾರೆ. ರಾಜ್ಯದಲ್ಲಿ ಲೂಟಿ ನಡೆಯುತ್ತಿದೆ ಎಂದು ಹೇಳುವ ಬಿ.ಎಸ್.ಯಡಿಯೂರಪ್ಪ ತಾವು ಜೈಲಿಗೆ ಹೋಗಿದ್ದನ್ನು ಒಮ್ಮೆ ನೆನಪಿಸಿಕೊಳ್ಳಬೇಕು. ಇಂಥವರು ನಮ್ಮ ಸರಕಾರಕ್ಕೆ ನೀತಿ ಹೇಳಲು ಬರುತ್ತಿದ್ದಾರೆ,'' ಎಂದರು.
ಮಂತ್ರಿ ಮಾಡ್ತೀವಿ, ಬನ್ನಿ
''ಸಿಎಂ ಎಚ್.ಡಿ.ಕುಮಾರಸ್ವಾಮಿ ಯಾವ ಕೆಲಸಕ್ಕೂ ಆಗಲ್ಲ ಎಂದು ಹೇಳಲ್ಲ. ಶಾಸಕರು ಮಾಡಬಾರದ್ದನ್ನು ಮಾಡಲು ಕೇಳಿದರೆ ಮಾತ್ರ ಆಗಲ್ಲ ಎನ್ನುತ್ತಾರೆ. ಎಲ್ಲ ಶಾಸಕರು ವಾಪಸ್ ಬನ್ನಿ, ನಿಮ್ಮನ್ನೂ ಮಂತ್ರಿ ಮಾಡುತ್ತೇವೆ. ಮುಂದಿನ ಐದು ವರ್ಷ ನಾವೇ ಸರಕಾರ ನಡೆಸೋಣ,'' ಎಂದು ಸಚಿವ ವೆಂಕಟರಮಣಪ್ಪ ಹೇಳಿದರು.