ಅತೃಪ್ತರ ಅನರ್ಹಕ್ಕೆ ಸ್ಪೀಕರ್ಗೆ ಕಾಂಗ್ರೆಸ್ ದೂರು
ಶಾಸಕಾಂಗ ಪಕ್ಷದ ನಿರ್ಣಯದಂತೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅತೃಪ್ತರ ...
Vijaya Karnataka 10 Jul 2019, 5:00 am
ಬೆಂಗಳೂರು : ಶಾಸಕಾಂಗ ಪಕ್ಷದ ನಿರ್ಣಯದಂತೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅತೃಪ್ತರ ವಿರುದ್ಧ ಪಕ್ಷಾಂತರ ನಿಷೇಧ ಕಾಯಿದೆ ಅನುಸಾರ ಕ್ರಮ ಕೈಗೊಳ್ಳುವಂತೆ ಸ್ಪೀಕರ್ಗೆ ಕಾಂಗ್ರೆಸ್ ನಾಯಕರು ದೂರು ಸಲ್ಲಿಸಿದ್ದಾರೆ. ಇದರ ಮಧ್ಯೆ ಜೆಡಿಎಸ್ಗೆ ನೀಡಿದ ಬೆಂಬಲ ಹಿಂಪಡೆದು ಪ್ರತಿಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳುವುದು ಒಳಿತೆಂದು ಪಕ್ಷದ ಶಾಸಕರು ಶಾಸಕಾಂಗ ಪಕ್ಷದ ಸಭೆಯಲ್ಲಿ ಒತ್ತಾಯಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಜಿ.ಪರಮೇಶ್ವರ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್ಪಿ) ಸಭೆ ಮಂಗಳವಾರ ನಡೆಯಿತು. ನಿರೀಕ್ಷೆಯಂತೆ ಮುಂಬಯಿಯಲ್ಲಿ ಬೀಡು ಬಿಟ್ಟಿರುವ ಅತೃಪ್ತರು ಗೈರು ಹಾಜರಾಗಿದ್ದರು. ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ರೋಷನ್ ಬೇಗ್ ಅವರೂ ಸಭೆಯಿಂದ ದೂರವುಳಿದರು. ಒಟ್ಟಾರೆ 20 ಶಾಸಕರು ಗೈರು ಹಾಜರಾಗುವುದರೊಂದಿಗೆ ಸಿಎಲ್ಪಿ ಸಭೆಯಲ್ಲೂ ಪಕ್ಷದ ನಾಯಕರಿಗೆ ಆತಂಕವುಂಟಾಯಿತು.
''ನಮ್ಮ ಕೆಲವು ಶಾಸಕರು ಬಿಜೆಪಿಯಿಂದ ಟ್ರ್ಯಾಪ್ ಆಗಿದ್ದಾರೆ. ಯಾವುದೇ ಪಕ್ಷದಿಂದ ಚುನಾಯಿತರಾದ ಶಾಸಕರು ಸ್ವಯಂ ಪ್ರೇರಿತರಾಗಿ ರಾಜೀನಾಮೆ ನೀಡಬಹುದು. ಆದರೆ, ಈ ಪ್ರಕರಣದಲ್ಲಿ ಹಾಗಾಗಿಲ್ಲ. ಇದು ಪಕ್ಷಾಂತರ ನಿಷೇಧ ಕಾಯಿದೆ ವ್ಯಾಪ್ತಿಗೆ ಬರುತ್ತದೆ. ಈ ಹಿನ್ನೆಲೆಯಲ್ಲಿ ಸ್ಪೀಕರ್ ಅವರಿಗೆ ದೂರು ನೀಡಲಾಗುವುದು. ಈ ಶಾಸಕರನ್ನು ಅನರ್ಹಗೊಳಿಸಬೇಕು. 6 ವರ್ಷ ಅವರು ಯಾವುದೇ ಚುನಾವಣೆಗೆ ಸ್ಪರ್ಧಿಸಬಾರದು. ಜತೆಗೆ ಸಚಿವ, ನಿಗಮ ಮಂಡಳಿ ಅಧ್ಯಕ್ಷ ಸೇರಿದಂತೆ ಯಾವುದೇ ಸ್ಥಾನಮಾನ ವಹಿಸಿಕೊಳ್ಳದಂತೆ ನಿರ್ಬಂಧ ಹೇರುವಂತೆ ಮನವಿ ಮಾಡಿಕೊಳ್ಳಲಾಗುವುದು,'' ಎಂದು ಸಿಎಲ್ಪಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ತಿಳಿಸಿದರು.
ಇದಾದ ಬಳಿಕ ವಿಧಾನಸೌಧದ ಆವರಣದ ಗಾಂಧಿ ಪ್ರತಿಮೆ ಬಳಿ ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರು ಧರಣಿ ನಡೆಸಿದರು. ನಂತರ ಸ್ಪೀಕರ್ ಕೆ.ಆರ್.ರಮೇಶ್ಕುಮಾರ್ ಕಚೇರಿಗೆ ತೆರಳಿ ರಾಜೀನಾಮೆ ನೀಡಿದ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ಸಲ್ಲಿಸಿದರು. ಈ ವೇಳೆ 1 ತಾಸಿಗೂ ಹೆಚ್ಚು ಹೊತ್ತು ಸ್ಪೀಕರ್ ಅವರೊಂದಿಗೆ ಸಿದ್ದರಾಮಯ್ಯ ಚರ್ಚಿಸಿದರು.
ಅರ್ಧ ಗಂಟೆಯೊಳಗೇ ಧರಣಿ ಅಂತ್ಯ
ಸಿಎಲ್ಪಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ ಗಾಂಧಿ ಪ್ರತಿಮೆಯೆದುರು 1 ತಾಸು ಧರಣಿ ನಡೆಸುವುದಾಗಿ ಸಿದ್ದರಾಮಯ್ಯ ಘೋಷಿಸಿದ್ದರು. ಆದರೆ, ಅರ್ಧ ತಾಸಿನೊಳಗೇ ಧರಣಿ ಅಂತ್ಯಗೊಂಡಿತು. ಸಿಎಲ್ಪಿ ಸಭೆಗೆ ಹಾಜರಾಗಿದ್ದ ಶಾಸಕಿ ಸೌಮ್ಯಾರೆಡ್ಡಿ ಈ ಪ್ರತಿಭಟನೆಯಿಂದ ಅಂತರ ಕಾಯ್ದುಕೊಂಡರು.
ಗೈರು ಹಾಜರಾದವರು
ಡಾ.ಅಂಜಲಿ ನಿಂಬಾಳ್ಕರ್, ಕನೀಜ ಫಾತಿಮಾ, ಈ.ತುಕಾರಾಂ, ಎಸ್.ರಾಮಪ್ಪ, ಶಾಮನೂರು ಶಿವಶಂಕರಪ್ಪ, ಟಿ.ಡಿ.ರಾಜೇಗೌಡ, ಡಾ.ಕೆ.ಸುಧಾಕರ್, ಎಂ.ಟಿ.ಬಿ.ನಾಗರಾಜ್ ಅನುಮತಿ ಪಡೆದು ಗೈರು ಹಾಜರಾಗಿದ್ದರು. ಮಹೇಶ್ ಕುಮಟಳ್ಳಿ, ರಮೇಶ್ ಜಾರಕಿಹೊಳಿ, ಪ್ರತಾಪಗೌಡ ಪಾಟೀಲ್, ಶಿವರಾಮ ಹೆಬ್ಬಾರ್, ಬಿ.ಸಿ.ಪಾಟೀಲ್, ಆನಂದ್ ಸಿಂಗ್, ಬೈರತಿ ಬಸವರಾಜು, ಎಸ್.ಟಿ.ಸೋಮಶೇಖರ್, ಮುನಿರತ್ನ, ರೋಷನ್ ಬೇಗ್, ರಾಮಲಿಂಗಾರೆಡ್ಡಿ ಹಾಗೂ ಕಾಂಗ್ರೆಸ್ನ ಸಹ ಸದಸ್ಯತ್ವ ಪಡೆದಿರುವ ಆರ್.ಶಂಕರ್ ಅನುಮತಿಯಿಲ್ಲದೆ ಗೈರು ಹಾಜರಾಗಿದ್ದರು.
ಸಿಎಲ್ಪಿಯಲ್ಲೇ ಒಡಕು
ಜೆಡಿಎಸ್ ಸಹವಾಸ ಸಾಕು. ಬಿಜೆಪಿಯವರು ಬೇಕಾದರೆ ಪರ್ಯಾಯ ಸರಕಾರ ರಚನೆ ಮಾಡಲಿ. ಈ ಸರಕಾರ ಉಳಿಸಿಕೊಳ್ಳುವ ವ್ಯರ್ಥ ಕಸರತ್ತು ಮಾಡುವುದು ಬೇಡವೆಂದು ಸಭೆಯ ಪ್ರಾರಂಭದಲ್ಲೆ ಹಲವು ಶಾಸಕರು ಏರಿದ ದನಿಯಲ್ಲೇ ಅಲವತ್ತುಕೊಂಡರು. ಆದರೆ, ತಮಿಳುನಾಡು ಮಾದರಿ ಹಾಗೂ ಪಕ್ಷಾಂತರ ನಿಷೇಧ ಕಾಯಿದೆ ಬಗ್ಗೆ ಪಾಠ ಮಾಡಿದ ಸಿದ್ದರಾಮಯ್ಯ, ರಾಜೀನಾಮೆ ಕೊಟ್ಟವರಿಗೆ ಪಾಠ ಕಲಿಸುವುದು ಮುಖ್ಯವೆಂದು ಶಾಸಕರ ಸಿಟ್ಟು ತಣಿಸಲು ಮುಂದಾದರು ಎನ್ನಲಾಗಿದೆ.
ಸಿದ್ದರಾಮಯ್ಯ ಅವರ ರಕ್ಷಣಾತ್ಮಕ ನಡೆಯಿಂದ ಅಸಮಾಧಾನಗೊಂಡ ಕೆಲ ಶಾಸಕರು, ಜೆಡಿಎಸ್ ನಾಯಕರನ್ನು ನಿಯಂತ್ರಣದಲ್ಲಿಡುವ ಕೆಲಸ ಮೊದಲಿನಿಂದಲೂ ಆಗಬೇಕಿತ್ತು. ಅದನ್ನು ತಾವು ಮಾಡಿಲ್ಲ. ಪಕ್ಷಕ್ಕೆ ಇಷ್ಟೊಂದು ಹಿನ್ನಡೆಯಾಗಿದ್ದರಲ್ಲಿ ಡಿಸಿಎಂ, ಡಿಕೆಶಿ ಸೇರಿದಂತೆ ಹಿರಿಯ ಸಚಿವರ ನಿರ್ಲಕ್ಷ್ಯವೂ ಇದೆಯೆಂದು ವಾಗ್ದಾಳಿ ನಡೆಸಿದರೆಂದು ತಿಳಿದು ಬಂದಿದೆ.
ಅಧಿವೇಶನಕ್ಕೆ ಕಡ್ಡಾಯ ಹಾಜರಿಗೆ ಸೂಚನೆ
ಜುಲೈ 12ರಿಂದ ಪ್ರಾರಂಭವಾಗುವ ವಿಧಾನಮಂಡಲ ಅಧಿವೇಶನಕ್ಕೆ ಕಡ್ಡಾಯವಾಗಿ ಹಾಜರಾಗಬೇಕು. ಹಣಕಾಸು ವಿಧೇಯಕ ಪಾಸಾಗುವಾಗ ಎಲ್ಲರೂ ಇರುವಂತೆ ಸೂಚಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಅತೃಪ್ತರಿಗೆ ಶಾಸಕರಿಗೆ ಗಡುವು ನೀಡಿಲ್ಲ
ಅತೃಪ್ತರ ವಿರುದ್ಧ ಪಕ್ಷಾಂತರ ನಿಷೇಧ ಕಾಯಿದೆಯ ಬೆದರುಗೊಂಬೆ ಪ್ರದರ್ಶಿಸಲು ಕೈನಾಯಕರು ನಿರ್ಧರಿಸಿದ್ದರೂ ಈ ವಿಚಾರದಲ್ಲಿ ಯಾವುದೇ ಗಡುವು ವಿಧಿಸಿಲ್ಲ. ಅತೃಪ್ತರು ವಾಪಸ್ ಬರುವಂತೆ ಸಿದ್ದರಾಮಯ್ಯ ಮನವಿ ಮಾಡಿಕೊಂಡರು. ಆದರೆ, ಎಚ್ಚರಿಕೆ ಎಂಬ ಶಬ್ದ ಬಳಸಲೇ ಇಲ್ಲ. ಗಡುವು ವಿಧಿಸುತ್ತೀರಾ ಎಂದು ಕೇಳಿದಾಗಲೂ ಗಡುವು ಇಲ್ಲ. ಅವರಿಗೆ ಮನವಿ ಮಾಡಿಕೊಳ್ಳಲಾಗುತ್ತಿದೆ. ಬಂದರೆ ಬರಲಿ. ಇಲ್ಲದಿದ್ದರೆ ಕ್ರಮವೆಂದು ಹೇಳಿದರು.
ರಾಮಲಿಂಗಾರೆಡ್ಡಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೂ ಅವರ ವಿರುದ್ಧ ಕ್ರಮಕ್ಕೆ ದೂರು ಸಲ್ಲಿಸುವುದಿಲ್ಲ. ಯಾಕೆಂದರೆ ಅವರು ಪಕ್ಷದ ವಿರುದ್ಧ ಮಾತನಾಡಿಲ್ಲ. ಮುಂಬಯಿಗೆ ಹೋದವರು ವಾಪಸ್ ಬಾರದಿದ್ದರೂ ನಮ್ಮ ಬಳಿ ಪರ್ಯಾಯ ಪ್ಲ್ಯಾನ್ ಇದೆ.- ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ
ಹ್ಯಾರೀಸ್ಗೆ ರಜೆ ಕೊಡಲು ಡಿಸಿಎಂ, ಸಿದ್ದು ನಡುವೆ ಜಟಾಪಟಿ
ಅಧಿವೇಶನದ ವೇಳೆ ಶಾಸಕ ಎನ್.ಎ.ಹ್ಯಾರಿಸ್ ಅವರಿಗೆ ಬಿಡುವ ಕೊಡುವ ವಿಚಾರದಲ್ಲಿ ಡಿಸಿಎಂ ಜಿ.ಪರಮೇಶ್ವರ್ ಮತ್ತು ಸಿದ್ದರಾಮಯ್ಯ ನಡುವೆ ಸ್ವಲ್ಪ ಮಾತಿನ ಜಟಾಪಟಿ ನಡೆಯಿತು. ಸಿಎಲ್ಪಿ ಸಭೆ ಬಳಿಕ ಸುದ್ದಿಗೋಷ್ಠಿ ಸಿದ್ಧತೆ ನಡೆಯುತ್ತಿದ್ದಾಗ ಅಧಿವೇಶನದ ಮೊದಲ 2 ದಿನವಿದ್ದು ನಂತರ ಫೈನಾನ್ಸ್ ಬಿಲ್ ಪಾಸಾಗುವಾಗ ಬರಬೇಕೆಂದು ಹ್ಯಾರಿಸ್ಗೆ ಸಿದ್ದು ಸೂಚಿಸಿದರು. ಮಧ್ಯೆ ಪ್ರವೇಶಿಸಿದ ಡಿಸಿಎಂ, ನಮಗೂ ಬೇಕಷ್ಟು ಕೆಲಸವಿರುತ್ತದೆ. ಅಧಿವೇಶನ ಪೂರ್ತಿ ಇರಲು ಹೇಳಿ. ಜುಲೈ 26ರ ನಂತರ ಬೇಕಾದರೆ ವಿದೇಶಕ್ಕೆ ಹೋಗಲಿ ಎಂದು ಆಕ್ಷೇಪಿಸಿದರು. ಪುತ್ರನ ಗ್ರ್ಯಾಜುಯೇಷನ್ ಡೇ ಇದೆಯೆಂತೆ. ಹೋಗಲಿ ಬಿಡಿ ಎಂದು ಸಿದ್ದು ಅನುಮತಿ ನೀಡಿದರು. ಈ ಸಂಭಾಷಣೆ ಸುದ್ದಿವಾಹಿನಿಗಳಲ್ಲಿ ಬಿತ್ತರವಾಗಿತ್ತು.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಜಿ.ಪರಮೇಶ್ವರ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್ಪಿ) ಸಭೆ ಮಂಗಳವಾರ ನಡೆಯಿತು. ನಿರೀಕ್ಷೆಯಂತೆ ಮುಂಬಯಿಯಲ್ಲಿ ಬೀಡು ಬಿಟ್ಟಿರುವ ಅತೃಪ್ತರು ಗೈರು ಹಾಜರಾಗಿದ್ದರು. ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ರೋಷನ್ ಬೇಗ್ ಅವರೂ ಸಭೆಯಿಂದ ದೂರವುಳಿದರು. ಒಟ್ಟಾರೆ 20 ಶಾಸಕರು ಗೈರು ಹಾಜರಾಗುವುದರೊಂದಿಗೆ ಸಿಎಲ್ಪಿ ಸಭೆಯಲ್ಲೂ ಪಕ್ಷದ ನಾಯಕರಿಗೆ ಆತಂಕವುಂಟಾಯಿತು.
''ನಮ್ಮ ಕೆಲವು ಶಾಸಕರು ಬಿಜೆಪಿಯಿಂದ ಟ್ರ್ಯಾಪ್ ಆಗಿದ್ದಾರೆ. ಯಾವುದೇ ಪಕ್ಷದಿಂದ ಚುನಾಯಿತರಾದ ಶಾಸಕರು ಸ್ವಯಂ ಪ್ರೇರಿತರಾಗಿ ರಾಜೀನಾಮೆ ನೀಡಬಹುದು. ಆದರೆ, ಈ ಪ್ರಕರಣದಲ್ಲಿ ಹಾಗಾಗಿಲ್ಲ. ಇದು ಪಕ್ಷಾಂತರ ನಿಷೇಧ ಕಾಯಿದೆ ವ್ಯಾಪ್ತಿಗೆ ಬರುತ್ತದೆ. ಈ ಹಿನ್ನೆಲೆಯಲ್ಲಿ ಸ್ಪೀಕರ್ ಅವರಿಗೆ ದೂರು ನೀಡಲಾಗುವುದು. ಈ ಶಾಸಕರನ್ನು ಅನರ್ಹಗೊಳಿಸಬೇಕು. 6 ವರ್ಷ ಅವರು ಯಾವುದೇ ಚುನಾವಣೆಗೆ ಸ್ಪರ್ಧಿಸಬಾರದು. ಜತೆಗೆ ಸಚಿವ, ನಿಗಮ ಮಂಡಳಿ ಅಧ್ಯಕ್ಷ ಸೇರಿದಂತೆ ಯಾವುದೇ ಸ್ಥಾನಮಾನ ವಹಿಸಿಕೊಳ್ಳದಂತೆ ನಿರ್ಬಂಧ ಹೇರುವಂತೆ ಮನವಿ ಮಾಡಿಕೊಳ್ಳಲಾಗುವುದು,'' ಎಂದು ಸಿಎಲ್ಪಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ತಿಳಿಸಿದರು.
ಇದಾದ ಬಳಿಕ ವಿಧಾನಸೌಧದ ಆವರಣದ ಗಾಂಧಿ ಪ್ರತಿಮೆ ಬಳಿ ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರು ಧರಣಿ ನಡೆಸಿದರು. ನಂತರ ಸ್ಪೀಕರ್ ಕೆ.ಆರ್.ರಮೇಶ್ಕುಮಾರ್ ಕಚೇರಿಗೆ ತೆರಳಿ ರಾಜೀನಾಮೆ ನೀಡಿದ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ಸಲ್ಲಿಸಿದರು. ಈ ವೇಳೆ 1 ತಾಸಿಗೂ ಹೆಚ್ಚು ಹೊತ್ತು ಸ್ಪೀಕರ್ ಅವರೊಂದಿಗೆ ಸಿದ್ದರಾಮಯ್ಯ ಚರ್ಚಿಸಿದರು.
ಅರ್ಧ ಗಂಟೆಯೊಳಗೇ ಧರಣಿ ಅಂತ್ಯ
ಸಿಎಲ್ಪಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ ಗಾಂಧಿ ಪ್ರತಿಮೆಯೆದುರು 1 ತಾಸು ಧರಣಿ ನಡೆಸುವುದಾಗಿ ಸಿದ್ದರಾಮಯ್ಯ ಘೋಷಿಸಿದ್ದರು. ಆದರೆ, ಅರ್ಧ ತಾಸಿನೊಳಗೇ ಧರಣಿ ಅಂತ್ಯಗೊಂಡಿತು. ಸಿಎಲ್ಪಿ ಸಭೆಗೆ ಹಾಜರಾಗಿದ್ದ ಶಾಸಕಿ ಸೌಮ್ಯಾರೆಡ್ಡಿ ಈ ಪ್ರತಿಭಟನೆಯಿಂದ ಅಂತರ ಕಾಯ್ದುಕೊಂಡರು.
ಗೈರು ಹಾಜರಾದವರು
ಡಾ.ಅಂಜಲಿ ನಿಂಬಾಳ್ಕರ್, ಕನೀಜ ಫಾತಿಮಾ, ಈ.ತುಕಾರಾಂ, ಎಸ್.ರಾಮಪ್ಪ, ಶಾಮನೂರು ಶಿವಶಂಕರಪ್ಪ, ಟಿ.ಡಿ.ರಾಜೇಗೌಡ, ಡಾ.ಕೆ.ಸುಧಾಕರ್, ಎಂ.ಟಿ.ಬಿ.ನಾಗರಾಜ್ ಅನುಮತಿ ಪಡೆದು ಗೈರು ಹಾಜರಾಗಿದ್ದರು. ಮಹೇಶ್ ಕುಮಟಳ್ಳಿ, ರಮೇಶ್ ಜಾರಕಿಹೊಳಿ, ಪ್ರತಾಪಗೌಡ ಪಾಟೀಲ್, ಶಿವರಾಮ ಹೆಬ್ಬಾರ್, ಬಿ.ಸಿ.ಪಾಟೀಲ್, ಆನಂದ್ ಸಿಂಗ್, ಬೈರತಿ ಬಸವರಾಜು, ಎಸ್.ಟಿ.ಸೋಮಶೇಖರ್, ಮುನಿರತ್ನ, ರೋಷನ್ ಬೇಗ್, ರಾಮಲಿಂಗಾರೆಡ್ಡಿ ಹಾಗೂ ಕಾಂಗ್ರೆಸ್ನ ಸಹ ಸದಸ್ಯತ್ವ ಪಡೆದಿರುವ ಆರ್.ಶಂಕರ್ ಅನುಮತಿಯಿಲ್ಲದೆ ಗೈರು ಹಾಜರಾಗಿದ್ದರು.
ಸಿಎಲ್ಪಿಯಲ್ಲೇ ಒಡಕು
ಜೆಡಿಎಸ್ ಸಹವಾಸ ಸಾಕು. ಬಿಜೆಪಿಯವರು ಬೇಕಾದರೆ ಪರ್ಯಾಯ ಸರಕಾರ ರಚನೆ ಮಾಡಲಿ. ಈ ಸರಕಾರ ಉಳಿಸಿಕೊಳ್ಳುವ ವ್ಯರ್ಥ ಕಸರತ್ತು ಮಾಡುವುದು ಬೇಡವೆಂದು ಸಭೆಯ ಪ್ರಾರಂಭದಲ್ಲೆ ಹಲವು ಶಾಸಕರು ಏರಿದ ದನಿಯಲ್ಲೇ ಅಲವತ್ತುಕೊಂಡರು. ಆದರೆ, ತಮಿಳುನಾಡು ಮಾದರಿ ಹಾಗೂ ಪಕ್ಷಾಂತರ ನಿಷೇಧ ಕಾಯಿದೆ ಬಗ್ಗೆ ಪಾಠ ಮಾಡಿದ ಸಿದ್ದರಾಮಯ್ಯ, ರಾಜೀನಾಮೆ ಕೊಟ್ಟವರಿಗೆ ಪಾಠ ಕಲಿಸುವುದು ಮುಖ್ಯವೆಂದು ಶಾಸಕರ ಸಿಟ್ಟು ತಣಿಸಲು ಮುಂದಾದರು ಎನ್ನಲಾಗಿದೆ.
ಸಿದ್ದರಾಮಯ್ಯ ಅವರ ರಕ್ಷಣಾತ್ಮಕ ನಡೆಯಿಂದ ಅಸಮಾಧಾನಗೊಂಡ ಕೆಲ ಶಾಸಕರು, ಜೆಡಿಎಸ್ ನಾಯಕರನ್ನು ನಿಯಂತ್ರಣದಲ್ಲಿಡುವ ಕೆಲಸ ಮೊದಲಿನಿಂದಲೂ ಆಗಬೇಕಿತ್ತು. ಅದನ್ನು ತಾವು ಮಾಡಿಲ್ಲ. ಪಕ್ಷಕ್ಕೆ ಇಷ್ಟೊಂದು ಹಿನ್ನಡೆಯಾಗಿದ್ದರಲ್ಲಿ ಡಿಸಿಎಂ, ಡಿಕೆಶಿ ಸೇರಿದಂತೆ ಹಿರಿಯ ಸಚಿವರ ನಿರ್ಲಕ್ಷ್ಯವೂ ಇದೆಯೆಂದು ವಾಗ್ದಾಳಿ ನಡೆಸಿದರೆಂದು ತಿಳಿದು ಬಂದಿದೆ.
ಅಧಿವೇಶನಕ್ಕೆ ಕಡ್ಡಾಯ ಹಾಜರಿಗೆ ಸೂಚನೆ
ಜುಲೈ 12ರಿಂದ ಪ್ರಾರಂಭವಾಗುವ ವಿಧಾನಮಂಡಲ ಅಧಿವೇಶನಕ್ಕೆ ಕಡ್ಡಾಯವಾಗಿ ಹಾಜರಾಗಬೇಕು. ಹಣಕಾಸು ವಿಧೇಯಕ ಪಾಸಾಗುವಾಗ ಎಲ್ಲರೂ ಇರುವಂತೆ ಸೂಚಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಅತೃಪ್ತರಿಗೆ ಶಾಸಕರಿಗೆ ಗಡುವು ನೀಡಿಲ್ಲ
ಅತೃಪ್ತರ ವಿರುದ್ಧ ಪಕ್ಷಾಂತರ ನಿಷೇಧ ಕಾಯಿದೆಯ ಬೆದರುಗೊಂಬೆ ಪ್ರದರ್ಶಿಸಲು ಕೈನಾಯಕರು ನಿರ್ಧರಿಸಿದ್ದರೂ ಈ ವಿಚಾರದಲ್ಲಿ ಯಾವುದೇ ಗಡುವು ವಿಧಿಸಿಲ್ಲ. ಅತೃಪ್ತರು ವಾಪಸ್ ಬರುವಂತೆ ಸಿದ್ದರಾಮಯ್ಯ ಮನವಿ ಮಾಡಿಕೊಂಡರು. ಆದರೆ, ಎಚ್ಚರಿಕೆ ಎಂಬ ಶಬ್ದ ಬಳಸಲೇ ಇಲ್ಲ. ಗಡುವು ವಿಧಿಸುತ್ತೀರಾ ಎಂದು ಕೇಳಿದಾಗಲೂ ಗಡುವು ಇಲ್ಲ. ಅವರಿಗೆ ಮನವಿ ಮಾಡಿಕೊಳ್ಳಲಾಗುತ್ತಿದೆ. ಬಂದರೆ ಬರಲಿ. ಇಲ್ಲದಿದ್ದರೆ ಕ್ರಮವೆಂದು ಹೇಳಿದರು.
ರಾಮಲಿಂಗಾರೆಡ್ಡಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೂ ಅವರ ವಿರುದ್ಧ ಕ್ರಮಕ್ಕೆ ದೂರು ಸಲ್ಲಿಸುವುದಿಲ್ಲ. ಯಾಕೆಂದರೆ ಅವರು ಪಕ್ಷದ ವಿರುದ್ಧ ಮಾತನಾಡಿಲ್ಲ. ಮುಂಬಯಿಗೆ ಹೋದವರು ವಾಪಸ್ ಬಾರದಿದ್ದರೂ ನಮ್ಮ ಬಳಿ ಪರ್ಯಾಯ ಪ್ಲ್ಯಾನ್ ಇದೆ.- ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ
ಹ್ಯಾರೀಸ್ಗೆ ರಜೆ ಕೊಡಲು ಡಿಸಿಎಂ, ಸಿದ್ದು ನಡುವೆ ಜಟಾಪಟಿ
ಅಧಿವೇಶನದ ವೇಳೆ ಶಾಸಕ ಎನ್.ಎ.ಹ್ಯಾರಿಸ್ ಅವರಿಗೆ ಬಿಡುವ ಕೊಡುವ ವಿಚಾರದಲ್ಲಿ ಡಿಸಿಎಂ ಜಿ.ಪರಮೇಶ್ವರ್ ಮತ್ತು ಸಿದ್ದರಾಮಯ್ಯ ನಡುವೆ ಸ್ವಲ್ಪ ಮಾತಿನ ಜಟಾಪಟಿ ನಡೆಯಿತು. ಸಿಎಲ್ಪಿ ಸಭೆ ಬಳಿಕ ಸುದ್ದಿಗೋಷ್ಠಿ ಸಿದ್ಧತೆ ನಡೆಯುತ್ತಿದ್ದಾಗ ಅಧಿವೇಶನದ ಮೊದಲ 2 ದಿನವಿದ್ದು ನಂತರ ಫೈನಾನ್ಸ್ ಬಿಲ್ ಪಾಸಾಗುವಾಗ ಬರಬೇಕೆಂದು ಹ್ಯಾರಿಸ್ಗೆ ಸಿದ್ದು ಸೂಚಿಸಿದರು. ಮಧ್ಯೆ ಪ್ರವೇಶಿಸಿದ ಡಿಸಿಎಂ, ನಮಗೂ ಬೇಕಷ್ಟು ಕೆಲಸವಿರುತ್ತದೆ. ಅಧಿವೇಶನ ಪೂರ್ತಿ ಇರಲು ಹೇಳಿ. ಜುಲೈ 26ರ ನಂತರ ಬೇಕಾದರೆ ವಿದೇಶಕ್ಕೆ ಹೋಗಲಿ ಎಂದು ಆಕ್ಷೇಪಿಸಿದರು. ಪುತ್ರನ ಗ್ರ್ಯಾಜುಯೇಷನ್ ಡೇ ಇದೆಯೆಂತೆ. ಹೋಗಲಿ ಬಿಡಿ ಎಂದು ಸಿದ್ದು ಅನುಮತಿ ನೀಡಿದರು. ಈ ಸಂಭಾಷಣೆ ಸುದ್ದಿವಾಹಿನಿಗಳಲ್ಲಿ ಬಿತ್ತರವಾಗಿತ್ತು.