ಬೆಂಗಳೂರು : ದೋಸ್ತಿ ಸರಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ನ ಕಸರತ್ತು ಮುಂದುವರಿದಿದೆ. ಈ ನಿಟ್ಟಿನಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಭಾನುವಾರ ದಿನವಿಡೀ ಸಭೆ ನಡೆಸಿದರು.
ಶನಿವಾರ ಸಂಜೆಯೇ ಬೆಂಗಳೂರಿಗೆ ಆಗಮಿಸಿರುವ ವೇಣುಗೋಪಾಲ್ ಇಲ್ಲಿಯೇ ಠಿಕಾಣಿ ಹೂಡಿದ್ದಾರೆ. ರಾಜೀನಾಮೆ ನೀಡಿರುವ ಶಾಸಕರ ಮನವೊಲಿಸುವ ಪ್ರಯತ್ನ ಜಾರಿಯಲ್ಲಿಟ್ಟಿರುವ ಅವರು ಸರಕಾರ ರಕ್ಷಿಸಿಕೊಳ್ಳುವ ಏಕೈಕ ಲಕ್ಷ್ಯದೊಂದಿಗೆ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಜಿ.ಪರಮೇಶ್ವರ, ಸಚಿವರಾದ ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ, ಮಾಜಿ ಸಚಿವ ಎಚ್.ಕೆ.ಪಾಟೀಲ್ ಅವರೊಂದಿಗೆ ಸಮಾಲೋಚಿಸಿದರು.
ಇಷ್ಟರ ಬಳಿಕವೂ ಮುಂದಿನ ದಾರಿಯ ಬಗ್ಗೆ ಕಾಂಗ್ರೆಸ್ಗೆ ಸ್ಪಷ್ಟತೆಯಿಲ್ಲ. ಮುಂಬಯಿಗೆ ತೆರಳಿರುವ ಶಾಸಕರನ್ನು ಸಂಪರ್ಕಿಸುವ ಯತ್ನವೂ ವಿಫಲವಾಗಿದೆ. ವೇಣುಗೋಪಾಲ್ ಸಂಧಾನ ಮಾತುಕತೆಗೆ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರೂ ಸೊಪ್ಪು ಹಾಕಿಲ್ಲ. 5 ರಿಂದ 6 ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆಂದು ಸಿದ್ದರಾಮಯ್ಯ ಹೇಳಿಕೊಂಡರೂ ಅತೃಪ್ತರನ್ನು ವಾಪಸ್ ಕರೆಸುವುದು ಕಷ್ಟವೆನ್ನುವುದು ಅರಿವಾಗಿ ಹೋಗಿದೆ.
ತಾತ್ಕಾಲಿಕ ಅಧಿಕಾರದ ಆಸೆ ಬಿಟ್ಟು ಜೆಡಿಎಸ್ನೊಂದಿಗಿನ ಮೈತ್ರಿ ಕಡಿದುಕೊಳ್ಳುವುದೇ ಸೂಕ್ತವೆಂದು ಸಿದ್ದರಾಮಯ್ಯ ಈಗಾಗಲೇ ವೇಣುಗೋಪಾಲ್ಗೆ ಹೇಳಿಯಾಗಿದೆ. ಹಾಗಾಗಿ ಶಾಸಕರ ಮನವೊಲಿಸುವ ವಿಚಾರದಲ್ಲಿ ಸಿದ್ದು ಅಷ್ಟೊಂದು ತಲೆಕೆಡಿಸಿಕೊಳ್ಳುತ್ತಿಲ್ಲ. ಇದು ಉಸ್ತುವಾರಿಯ ತಲೆನೋವನ್ನು ಹೆಚ್ಚಿಸಿದೆ ಎನ್ನಲಾಗಿದೆ.
ಖರ್ಗೆಯೂ ಗರಂ
ಈ ಮಧ್ಯೆ ಮಲ್ಲಿಕಾರ್ಜುನ ಖರ್ಗೆ ಅವರೂ ಗರಂ ಆಗಿದ್ದು ಮೈತ್ರಿ ಮಾಡಿಕೊಳ್ಳುವ ಹಂತದಲ್ಲೆ ಎಡವಟ್ಟಾಗಿದೆ. ಜೆಡಿಎಸ್ಗೆ 5 ವರ್ಷವೂ ಮುಖ್ಯಮಂತ್ರಿ ಸ್ಥಾನ ಖಚಿತ ಪಡಿಸುವ ಅವಶ್ಯಕತೆ ಇರಲೇ ಇಲ್ಲ. ಬೇಷರತ್ ಬೆಂಬಲ ಘೋಷಿಸಿದ್ದರೆ ಸಾಕಿತ್ತು. ಅದನ್ನು ಬಿಟ್ಟು ಪೂರ್ಣಾವಧಿಗೆ ಸಿಎಂ ಸ್ಥಾನವನ್ನು ಜೆಡಿಎಸ್ಗೆ ಕೊಡಲು ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಇದಕ್ಕೆ ಮುನ್ನ ರಾಜ್ಯ ನಾಯಕರೊಂದಿಗೆ ತಾವು ಚರ್ಚಿಸಲಿಲ್ಲ. ಕಾಂಗ್ರೆಸ್ ಸ್ಥಿತಿ ಏನಾಗಬಹುದೆಂದೂ ಯೋಚಿಸಲಿಲ್ಲ. ಈ ಕಾರಣದಿಂದ ಶಾಸಕರ ವಲಯದಲ್ಲಿ ತೀವ್ರ ಆಕ್ರೋಶವಿದೆ. ರಾಜೀನಾಮೆ ನೀಡಿದವರನ್ನು ಮನವೊಲಿಸುವುದು ಸುಲಭವಲ್ಲ. ಅಷ್ಟಕ್ಕೂ ಹೈಕಮಾಂಡ್ ನಿಲುವೇನು ಎನ್ನುವುದು ಸ್ಪಷ್ಟವಾಗಬೇಕು. ಸರಕಾರ ಮುಂದುವರಿಸುವುದಾದರೆ ಹೇಗೆ ನಡೆಸಬೇಕು ಎಂಬ ಬಗ್ಗೆ ಮಾರ್ಗಸೂಚಿ ತಯಾರಿಸಬೇಕು. ಇಲ್ಲದಿದ್ದರೆ ಈಗಿನ ಪರಿಸ್ಥಿತಿಯಲ್ಲಿ ಏನನ್ನೂ ಮಾಡುವಂತಿಲ್ಲ. ಸುಮ್ಮನೇ ಗಾಳಿಯಲ್ಲಿ ಗುದ್ದಾಡುವುದರಿಂದ ಪ್ರಯೋಜನವಿಲ್ಲವೆಂದು ವೇಣುಗೋಪಾಲ್ಗೆ ಖರ್ಗೆ ಖಡಕ್ ಆಗಿಯೇ ಹೇಳಿದ್ದಾರೆಂದು ತಿಳಿದು ಬಂದಿದೆ.
ಪ್ರತಿಷ್ಠೆಗೆ ಬಿದ್ದ ಕೆಸಿವಿ
ಅಧಿಕಾರ ಅನುಭವಿಸುತ್ತಿರುವ ಕೆಲವರನ್ನು ಹೊರತು ಪಡಿಸಿದರೆ ರಾಜ್ಯ ಕಾಂಗ್ರೆಸ್ನ ಬಹುತೇಕ ನಾಯಕರಿಗೆ ಈ ಸರಕಾರ ಮುಂದುವರಿಯುವುದು ಬೇಕಿಲ್ಲ. ಸಿದ್ದರಾಮಯ್ಯ ಅವರಿಗೆ ಅವರದೇ ಆದ ಕಾರಣಕ್ಕೆ ದೋಸ್ತಿ ಅಂತ್ಯವಾಗಬೇಕೆಂದಿದೆ. ಮೂಲ ಕಾಂಗ್ರೆಸಿಗರು ಪಕ್ಷದ ಭವಿಷ್ಯದ ದೃಷ್ಟಿಯಿಂದ ಯೋಚಿಸುತ್ತಿದ್ದಾರೆ. ಆದರೆ, ಉಸ್ತುವಾರಿ ವೇಣುಗೋಪಾಲ್ ಪ್ರತಿಷ್ಠಿಗೆ ಬಿದ್ದಿದ್ದಾರೆ. ಈ ದೋಸ್ತಿ ಸರಕಾರ ಅವರೇ ಜನ್ಮ ಕೊಟ್ಟ ಶಿಶುವಾಗಿದ್ದರಿಂದ ಸರಕಾರದ ಬೆನ್ನಿಗೆ ನಿಲ್ಲಲು ರಾಜ್ಯದ ನಾಯಕರಿಗೆ ಬಲವಂತ ಮಾಡುತ್ತಿದ್ದಾರೆ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿವೆ.
ಖರ್ಗೆ, ಸಿದ್ದು ಹೆಸರು ಚಲಾವಣೆಗೆ
ನಾಯಕತ್ವ ಬದಲಾವಣೆಗೂ ದೋಸ್ತಿಗಳು ಸಿದ್ಧರಿದ್ದಾರೆ. ಅದರಂತೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿಎಂ ಪಟ್ಟ ಒಲಿಯಬಹುದು. ಜೆಡಿಎಸ್ ವರಿಷ್ಠರು ಒಪ್ಪಿದರೆ ಸಿದ್ದರಾಮಯ್ಯ ಅವರೂ ಮತ್ತೊಮ್ಮೆ ಸಿಎಂ ಸ್ಥಾನಕ್ಕೆ ಬರಬಹುದು ಎಂಬ ವದಂತಿಗಳು ಹರಿದಾಡಿದವು.
ಸಿಎಲ್ಪಿ ಮೀಟಿಂಗ್
ಈ ನಡುವೆ ಮಂಗಳವಾರ ಬೆಳಗ್ಗೆ (ಜು.9) ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್ಪಿ) ಸಭೆ ಕರೆಯಲಾಗಿದೆ. ಉಸ್ತುವಾರಿ ವೇಣುಗೋಪಾಲ್ ಕೂಡ ಈ ಸಭೆಯಲ್ಲಿ ಭಾಗಿಯಾಗುತ್ತಾರೆ. ಎಲ್ಲ ಶಾಸಕರೂ ತಪ್ಪದೇ ಹಾಜರಾಗಬೇಕು. ಇಲ್ಲದಿದ್ದರೆ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಸಿಎಲ್ಪಿ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ಶನಿವಾರ ಸಂಜೆಯೇ ಬೆಂಗಳೂರಿಗೆ ಆಗಮಿಸಿರುವ ವೇಣುಗೋಪಾಲ್ ಇಲ್ಲಿಯೇ ಠಿಕಾಣಿ ಹೂಡಿದ್ದಾರೆ. ರಾಜೀನಾಮೆ ನೀಡಿರುವ ಶಾಸಕರ ಮನವೊಲಿಸುವ ಪ್ರಯತ್ನ ಜಾರಿಯಲ್ಲಿಟ್ಟಿರುವ ಅವರು ಸರಕಾರ ರಕ್ಷಿಸಿಕೊಳ್ಳುವ ಏಕೈಕ ಲಕ್ಷ್ಯದೊಂದಿಗೆ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಜಿ.ಪರಮೇಶ್ವರ, ಸಚಿವರಾದ ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ, ಮಾಜಿ ಸಚಿವ ಎಚ್.ಕೆ.ಪಾಟೀಲ್ ಅವರೊಂದಿಗೆ ಸಮಾಲೋಚಿಸಿದರು.
ಇಷ್ಟರ ಬಳಿಕವೂ ಮುಂದಿನ ದಾರಿಯ ಬಗ್ಗೆ ಕಾಂಗ್ರೆಸ್ಗೆ ಸ್ಪಷ್ಟತೆಯಿಲ್ಲ. ಮುಂಬಯಿಗೆ ತೆರಳಿರುವ ಶಾಸಕರನ್ನು ಸಂಪರ್ಕಿಸುವ ಯತ್ನವೂ ವಿಫಲವಾಗಿದೆ. ವೇಣುಗೋಪಾಲ್ ಸಂಧಾನ ಮಾತುಕತೆಗೆ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರೂ ಸೊಪ್ಪು ಹಾಕಿಲ್ಲ. 5 ರಿಂದ 6 ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆಂದು ಸಿದ್ದರಾಮಯ್ಯ ಹೇಳಿಕೊಂಡರೂ ಅತೃಪ್ತರನ್ನು ವಾಪಸ್ ಕರೆಸುವುದು ಕಷ್ಟವೆನ್ನುವುದು ಅರಿವಾಗಿ ಹೋಗಿದೆ.
ತಾತ್ಕಾಲಿಕ ಅಧಿಕಾರದ ಆಸೆ ಬಿಟ್ಟು ಜೆಡಿಎಸ್ನೊಂದಿಗಿನ ಮೈತ್ರಿ ಕಡಿದುಕೊಳ್ಳುವುದೇ ಸೂಕ್ತವೆಂದು ಸಿದ್ದರಾಮಯ್ಯ ಈಗಾಗಲೇ ವೇಣುಗೋಪಾಲ್ಗೆ ಹೇಳಿಯಾಗಿದೆ. ಹಾಗಾಗಿ ಶಾಸಕರ ಮನವೊಲಿಸುವ ವಿಚಾರದಲ್ಲಿ ಸಿದ್ದು ಅಷ್ಟೊಂದು ತಲೆಕೆಡಿಸಿಕೊಳ್ಳುತ್ತಿಲ್ಲ. ಇದು ಉಸ್ತುವಾರಿಯ ತಲೆನೋವನ್ನು ಹೆಚ್ಚಿಸಿದೆ ಎನ್ನಲಾಗಿದೆ.
ಖರ್ಗೆಯೂ ಗರಂ
ಈ ಮಧ್ಯೆ ಮಲ್ಲಿಕಾರ್ಜುನ ಖರ್ಗೆ ಅವರೂ ಗರಂ ಆಗಿದ್ದು ಮೈತ್ರಿ ಮಾಡಿಕೊಳ್ಳುವ ಹಂತದಲ್ಲೆ ಎಡವಟ್ಟಾಗಿದೆ. ಜೆಡಿಎಸ್ಗೆ 5 ವರ್ಷವೂ ಮುಖ್ಯಮಂತ್ರಿ ಸ್ಥಾನ ಖಚಿತ ಪಡಿಸುವ ಅವಶ್ಯಕತೆ ಇರಲೇ ಇಲ್ಲ. ಬೇಷರತ್ ಬೆಂಬಲ ಘೋಷಿಸಿದ್ದರೆ ಸಾಕಿತ್ತು. ಅದನ್ನು ಬಿಟ್ಟು ಪೂರ್ಣಾವಧಿಗೆ ಸಿಎಂ ಸ್ಥಾನವನ್ನು ಜೆಡಿಎಸ್ಗೆ ಕೊಡಲು ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಇದಕ್ಕೆ ಮುನ್ನ ರಾಜ್ಯ ನಾಯಕರೊಂದಿಗೆ ತಾವು ಚರ್ಚಿಸಲಿಲ್ಲ. ಕಾಂಗ್ರೆಸ್ ಸ್ಥಿತಿ ಏನಾಗಬಹುದೆಂದೂ ಯೋಚಿಸಲಿಲ್ಲ. ಈ ಕಾರಣದಿಂದ ಶಾಸಕರ ವಲಯದಲ್ಲಿ ತೀವ್ರ ಆಕ್ರೋಶವಿದೆ. ರಾಜೀನಾಮೆ ನೀಡಿದವರನ್ನು ಮನವೊಲಿಸುವುದು ಸುಲಭವಲ್ಲ. ಅಷ್ಟಕ್ಕೂ ಹೈಕಮಾಂಡ್ ನಿಲುವೇನು ಎನ್ನುವುದು ಸ್ಪಷ್ಟವಾಗಬೇಕು. ಸರಕಾರ ಮುಂದುವರಿಸುವುದಾದರೆ ಹೇಗೆ ನಡೆಸಬೇಕು ಎಂಬ ಬಗ್ಗೆ ಮಾರ್ಗಸೂಚಿ ತಯಾರಿಸಬೇಕು. ಇಲ್ಲದಿದ್ದರೆ ಈಗಿನ ಪರಿಸ್ಥಿತಿಯಲ್ಲಿ ಏನನ್ನೂ ಮಾಡುವಂತಿಲ್ಲ. ಸುಮ್ಮನೇ ಗಾಳಿಯಲ್ಲಿ ಗುದ್ದಾಡುವುದರಿಂದ ಪ್ರಯೋಜನವಿಲ್ಲವೆಂದು ವೇಣುಗೋಪಾಲ್ಗೆ ಖರ್ಗೆ ಖಡಕ್ ಆಗಿಯೇ ಹೇಳಿದ್ದಾರೆಂದು ತಿಳಿದು ಬಂದಿದೆ.
ಪ್ರತಿಷ್ಠೆಗೆ ಬಿದ್ದ ಕೆಸಿವಿ
ಅಧಿಕಾರ ಅನುಭವಿಸುತ್ತಿರುವ ಕೆಲವರನ್ನು ಹೊರತು ಪಡಿಸಿದರೆ ರಾಜ್ಯ ಕಾಂಗ್ರೆಸ್ನ ಬಹುತೇಕ ನಾಯಕರಿಗೆ ಈ ಸರಕಾರ ಮುಂದುವರಿಯುವುದು ಬೇಕಿಲ್ಲ. ಸಿದ್ದರಾಮಯ್ಯ ಅವರಿಗೆ ಅವರದೇ ಆದ ಕಾರಣಕ್ಕೆ ದೋಸ್ತಿ ಅಂತ್ಯವಾಗಬೇಕೆಂದಿದೆ. ಮೂಲ ಕಾಂಗ್ರೆಸಿಗರು ಪಕ್ಷದ ಭವಿಷ್ಯದ ದೃಷ್ಟಿಯಿಂದ ಯೋಚಿಸುತ್ತಿದ್ದಾರೆ. ಆದರೆ, ಉಸ್ತುವಾರಿ ವೇಣುಗೋಪಾಲ್ ಪ್ರತಿಷ್ಠಿಗೆ ಬಿದ್ದಿದ್ದಾರೆ. ಈ ದೋಸ್ತಿ ಸರಕಾರ ಅವರೇ ಜನ್ಮ ಕೊಟ್ಟ ಶಿಶುವಾಗಿದ್ದರಿಂದ ಸರಕಾರದ ಬೆನ್ನಿಗೆ ನಿಲ್ಲಲು ರಾಜ್ಯದ ನಾಯಕರಿಗೆ ಬಲವಂತ ಮಾಡುತ್ತಿದ್ದಾರೆ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿವೆ.
ಖರ್ಗೆ, ಸಿದ್ದು ಹೆಸರು ಚಲಾವಣೆಗೆ
ನಾಯಕತ್ವ ಬದಲಾವಣೆಗೂ ದೋಸ್ತಿಗಳು ಸಿದ್ಧರಿದ್ದಾರೆ. ಅದರಂತೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿಎಂ ಪಟ್ಟ ಒಲಿಯಬಹುದು. ಜೆಡಿಎಸ್ ವರಿಷ್ಠರು ಒಪ್ಪಿದರೆ ಸಿದ್ದರಾಮಯ್ಯ ಅವರೂ ಮತ್ತೊಮ್ಮೆ ಸಿಎಂ ಸ್ಥಾನಕ್ಕೆ ಬರಬಹುದು ಎಂಬ ವದಂತಿಗಳು ಹರಿದಾಡಿದವು.
ಸಿಎಲ್ಪಿ ಮೀಟಿಂಗ್
ಈ ನಡುವೆ ಮಂಗಳವಾರ ಬೆಳಗ್ಗೆ (ಜು.9) ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್ಪಿ) ಸಭೆ ಕರೆಯಲಾಗಿದೆ. ಉಸ್ತುವಾರಿ ವೇಣುಗೋಪಾಲ್ ಕೂಡ ಈ ಸಭೆಯಲ್ಲಿ ಭಾಗಿಯಾಗುತ್ತಾರೆ. ಎಲ್ಲ ಶಾಸಕರೂ ತಪ್ಪದೇ ಹಾಜರಾಗಬೇಕು. ಇಲ್ಲದಿದ್ದರೆ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಸಿಎಲ್ಪಿ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.