ಆ್ಯಪ್ನಗರ

ಕರಂದ್ಲಾಜೆ ಆಕ್ಷೇಪಾರ್ಹ ಪದ ಬಳಕೆಗೆ ಸಿದ್ದು ಆಕ್ಷೇಪ

ಮೈತ್ರಿ ಸರಕಾರದ ಬಗ್ಗೆ ಸಂಸದೆ ಶೋಭಾ ಕರಂದ್ಲಾಜೆ ಆಕ್ಷೇಪಾರ್ಹ ಪದ ಬಳಕೆ ಮಾಡಿರುವುದನ್ನು ಮಾಜಿ ಸಿಎಂ ಸಿದ್ದರಾಮಯ್ಯ ಖಂಡಿಸಿದ್ದಾರೆ.

Vijaya Karnataka 15 Jun 2019, 5:00 am
ಬೆಂಗಳೂರು : ಮೈತ್ರಿ ಸರಕಾರದ ಬಗ್ಗೆ ಸಂಸದೆ ಶೋಭಾ ಕರಂದ್ಲಾಜೆ ಆಕ್ಷೇಪಾರ್ಹ ಪದ ಬಳಕೆ ಮಾಡಿರುವುದನ್ನು ಮಾಜಿ ಸಿಎಂ ಸಿದ್ದರಾಮಯ್ಯ ಖಂಡಿಸಿದ್ದಾರೆ.
Vijaya Karnataka Web karandlaje used uncomplimentary word says siddaramaiah
ಕರಂದ್ಲಾಜೆ ಆಕ್ಷೇಪಾರ್ಹ ಪದ ಬಳಕೆಗೆ ಸಿದ್ದು ಆಕ್ಷೇಪ


ಜಿಂದಾಲ್‌ಗೆ ಭೂಮಿ ನೀಡುತ್ತಿರುವುದನ್ನು ವಿರೋಧಿಸಿ ಬಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಕರಂದ್ಲಾಜೆ ಈ ವಿಚಾರ ಹಂಚಿಕೊಂಡು ಟ್ವೀಟ್‌ ಮಾಡಿದ್ದರು. ಈ ವೇಳೆ ಮೈತ್ರಿ ಸರಕಾರದ ಬಗ್ಗೆ 'ಇಟಧಿಒa ಜಟvಠಿ' ಎಂದು ಉಲ್ಲೇಖಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿ ಟ್ವೀಟ್‌ ಮಾಡಿರುವ ಸಿದ್ದರಾಮಯ್ಯ, ''ಶಬ್ಧಗಳೊಂದಿಗೆ ಆಟವಾಡುವುದಷ್ಟೇ ನಿಮ್ಮ ನೀತಿ ನಿರೂಪಣೆ ಕೌಶಲವೆಂದು ತೋರಿಸಿ ಕೊಟ್ಟಿದ್ದೀರಿ. ಮೈತ್ರಿ ಬಗ್ಗೆ ನೀವು ಬಳಸಿದ ಭಾಷೆ ಬಗ್ಗೆ ಯೋಚಿಸಿ. ಕಡೆ ಪಕ್ಷ ಅಸಂಸದೀಯ ಪದ ಬಳಕೆ ನಿಲ್ಲಿಸಿ. ಈಗಾಗಲೇ ಅವಗಣನೆಗೆ ಒಳಗಾದವರ ಮನಸ್ಸಿಗೆ ಇದರಿಂದ ನೋವಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ,'' ಎಂದು ಕಿವಿಮಾತು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ