ಆ್ಯಪ್ನಗರ

ಭತ್ತ ಇಳುವರಿ ಹೆಚ್ಚಳಕ್ಕೆ ಕರಾವಳಿ ಪ್ಯಾಕೇಜ್‌ ಯೋಜನೆ

​​ಆದಾಯ ಕೂಡ ಕಡಿಮೆಯಾಗುತ್ತಿರುವ ಕಾರಣ ಭತ್ತ ಬೆಳೆಗಾರರು ಅನ್ಯ ಬೆಳೆಯತ್ತ ಚಿತ್ತ ಹರಿಸಿದ್ದಾರೆ. ಇದರಿಂದ ಭತ್ತದ ಪ್ರದೇಶ ವಿಸ್ತೀರ್ಣ ಕೂಡ ಕಡಿಮೆಯಾಗಿದೆ. ಪರಿಣಾಮ ಕರಾವಳಿ ಭಾಗದ ಜನಪ್ರಿಯ ಕೆಂಪಕ್ಕಿ ಸಹಿತ ಇತರ ಅಪರೂಪದ ಅಕ್ಕಿ ಮಾರುಕಟ್ಟೆಯಲ್ಲಿ ಕಡಿಮೆಯಾಗುತ್ತಿದ್ದು, ಅದರ ಬೆಲೆ ಗಗನಕ್ಕೇರಿದೆ.

Vijaya Karnataka 14 Oct 2019, 8:11 am
ಆರ್‌. ತುಳಸಿಕುಮಾರ್‌
Vijaya Karnataka Web Paddy

ಬೆಂಗಳೂರು: ರಾಜ್ಯದ ಕರಾವಳಿ ಭಾಗದಲ್ಲಿ ಭತ್ತದ ಇಳುವರಿಯನ್ನು ಹೆಚ್ಚಿಸಲು ಕೃಷಿ ಇಲಾಖೆಯು 'ಕರಾವಳಿ ಪ್ಯಾಕೇಜ್‌' ಯೋಜನೆ ಜಾರಿಗೆ ಮುತುವರ್ಜಿ ವಹಿಸಿದೆ. ಇತ್ತೀಚೆಗೆ ಕರಾವಳಿ ಹಾಗೂ ಮಲೆನಾಡಿನ ಪ್ರದೇಶದಲ್ಲಿ ಭತ್ತದ ಇಳುವರಿ ಕಡಿಮೆಯಾಗುತ್ತಿದೆ.

ಆದಾಯ ಕೂಡ ಕಡಿಮೆಯಾಗುತ್ತಿರುವ ಕಾರಣ ಭತ್ತ ಬೆಳೆಗಾರರು ಅನ್ಯ ಬೆಳೆಯತ್ತ ಚಿತ್ತ ಹರಿಸಿದ್ದಾರೆ. ಇದರಿಂದ ಭತ್ತದ ಪ್ರದೇಶ ವಿಸ್ತೀರ್ಣ ಕೂಡ ಕಡಿಮೆಯಾಗಿದೆ. ಪರಿಣಾಮ ಕರಾವಳಿ ಭಾಗದ ಜನಪ್ರಿಯ ಕೆಂಪಕ್ಕಿ ಸಹಿತ ಇತರ ಅಪರೂಪದ ಅಕ್ಕಿ ಮಾರುಕಟ್ಟೆಯಲ್ಲಿಕಡಿಮೆಯಾಗುತ್ತಿದ್ದು, ಅದರ ಬೆಲೆ ಗಗನಕ್ಕೇರಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕರಾವಳಿ ರೈತರನ್ನು ಗುರಿಯಾಗಿರಿಸಿಕೊಂಡು ಸರಕಾರ ಯೋಜನೆಯನ್ನು ಪ್ರಕಟಿಸಿದೆ.

ಯೋಜನೆಗೆ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. 2500 ಮಿ.ಮೀ.ಗಿಂತ ಹೆಚ್ಚು ಮಳೆ ಬೀಳುವ ತಾಲೂಕುಗಳಿಗೆ ಆದ್ಯತೆ ಸಿಗಲಿದೆ. ಪ್ರತಿ ಹೆಕ್ಟೇರ್‌ಗೆ ಏಳು ಸಾವಿರ ರೂ. ಪ್ರೋತ್ಸಾಹಧನ ಸಿಗಲಿದ್ದು, ರೈತರು ಗರಿಷ್ಠ ಎರಡು ಎಕರೆವರೆಗೆ ಪ್ರಯೋಜನ ಪಡೆಯಲು ಅರ್ಹರಿರುತ್ತಾರೆ. ಕನಿಷ್ಠ ಒಂದು ಎಕರೆ ವಿಸ್ತೀರ್ಣವುಳ್ಳ ರೈತರಿಗೂ ಯೋಜ ನೆಯ ಲಾಭ ಸಿಗಲಿದೆ. ಒಟ್ಟು 20 ಸಾವಿರ ರೈತರಿಗೆ ಪ್ರೋತ್ಸಾ ಹಧನವನ್ನು ವಿತರಿಸಲು ಇಲಾಖೆ ಗುರಿ ಹೊಂದಿದೆ.

ಕರಿ ಕಗ್ಗ, ಬಿಳಿ ಕಗ್ಗ ಸಹಿತ ಸ್ಥಳೀಯ ತಳಿಗಳನ್ನು ಬೆಳೆಸುವಿಕೆ ಹಾಗೂ ನೇರ ಕೂರಿಗೆ, ಯಾಂತ್ರೀಕೃತ ನಾಟಿ ಅಂತಹ ಪದ್ಧತಿಯನ್ನು ಅಳವಡಿಸಿಕೊಳ್ಳಲು ಷರತ್ತು ವಿಧಿಸಲಾಗಿದೆ. ರೈತರು ಯೋಜನೆಯ ಲಾಭ ಪಡೆಯಲು ಜಿಲ್ಲಾಜಂಟಿ ನಿರ್ದೇಶಕರು, ತಾಲೂಕು ಕೃಷಿ ಅಧಿಕಾರಿ ಅಥವಾ ರೈತ ಸಂಪರ್ಕ ಕೇಂದ್ರ(ಆರ್‌ಎಸ್‌ಕೆ)ಗಳಲ್ಲಿಮಾಹಿತಿ ಪಡೆದು ಹೆಸರು ನೋಂದಾಯಿಸಿಕೊಳ್ಳಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ