ವಿಕ ಸುದ್ದಿಲೋಕ ಬೆಂಗಳೂರು
ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಸೇರಿದಂತೆ ಕಾಂಗ್ರೆಸ್ ಸಚಿವರ ಒತ್ತಡ ಹಾಗೂ ಜೆಡಿಎಸ್ ಸಚಿವರ ವಿರೋಧದ ಮಧ್ಯೆಯೇ, ಬಡ್ತಿ ಮೀಸಲು ಪ್ರಕರಣದಿಂದ ಪರಿಶಿಷ್ಟರನ್ನು ರಕ್ಷಿಸುವ ವಿವಾದಿತ ಕಾಯಿದೆ ಜಾರಿಗೆ ಮೈತ್ರಿ ಸರಕಾರ ಮುಂದಾಗಿದೆ. ಸಿಎಂ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳುವ ಮೂಲಕ ಬಡ್ತಿ ಮೀಸಲು ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂಕೋರ್ಟ್ ನೀಡಿದ್ದ ಸೂಚನೆಗೆ ರಾಜ್ಯ ಸರಕಾರ ಪರೋಕ್ಷವಾಗಿ ಸಡ್ಡು ಹೊಡೆದಿದೆ.
ಬುಧವಾರ ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ಸುದೀರ್ಘ ಚರ್ಚೆ ನಡೆದಿದೆ. ನ್ಯಾಯಾಲಯದಲ್ಲಿ ವ್ಯತಿರಿಕ್ತ ಆದೇಶ ಬಂದರೆ ಕಷ್ಟವೆಂದು ಜೆಡಿಎಸ್ ಸಚಿವರು ಆಕ್ಷೇಪ ವ್ಯಕ್ತಪಡಿಸಿದರೂ, ಈ ಬಾರಿ ಕಾಯಿದೆ ಅನುಷ್ಠಾನವಾಗದೇ ಇದ್ದರೆ ಲೋಕಸಭೆ ಚುನಾವಣೆಯಲ್ಲಿ ಕಷ್ಟವಾಗುತ್ತದೆ ಎಂದು ಕಾಂಗ್ರೆಸ್ ಸಚಿವರು ಹಿಡಿದ ಪಟ್ಟಿಗೆ ಅಂತಿಮವಾಗಿ ಸಿಎಂ ಕುಮಾರಸ್ವಾಮಿ ಮಣಿದಿದ್ದಾರೆ. ಸುಪ್ರೀಂಕೋರ್ಟ್ನ ಅಂತಿಮ ಆದೇಶಕ್ಕೆ ಒಳಪಟ್ಟು ತಕ್ಷಣದಿಂದಲೇ ಜಾರಿಗೆ ಬರುವಂತೆ ಈ ಕಾಯಿದೆ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ. ಆದರೆ ಇಷ್ಟು ದಿನಗಳ ಕಾಲ ಸುಮ್ಮನಿದ್ದ ರಾಜ್ಯ ಸರಕಾರ, ಫೆಬ್ರವರಿ 5ರಿಂದ ಸುಪ್ರೀಂ ಕೋರ್ಟ್ ಈ ಬಗ್ಗೆ ವಿಚಾರಣೆ ಕೈಗೆತ್ತಿಕೊಳ್ಳುವ ಸಂದರ್ಭದಲ್ಲೇ ಜಾರಿಗೆ ಮುಂದಾಗಿರುವುದು 'ಅಹಿಂಸಾ' (ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ಸಾಮಾನ್ಯ ವರ್ಗ) ಸಂಘಟನೆಯ ಅಸಮಾಧಾನಕ್ಕೆ ಕಾರಣವಾಗಿದೆ. ಪರಿಶಿಷ್ಟರು ತಿರುಗಿ ಬೀಳ್ತಾರೆ
ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ಆರಂಭವಾಗುತ್ತಿದ್ದಂತೆ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಸೇರಿದಂತೆ ಜೆಡಿಎಸ್ನ ಬಹುತೇಕ ಸಚಿವರು ಆಕ್ಷೇಪ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಾಳಯದಲ್ಲೂ ಕೆಲವರು ಮೌನಕ್ಕೆ ಶರಣಾದರು. ಆದರೆ, ಜಿ. ಪರಮೇಶ್ವರ, ಸತೀಶ್ ಜಾರಕಿಹೊಳಿ, ತುಕಾರಾಂ, ಪ್ರಿಯಾಂಕ್ ಖರ್ಗೆ ಕಾಯಿದೆ ಜಾರಿ ಪರ ನಿಂತರು. ಈ ಬಾರಿಯೂ ಅನುಷ್ಠಾನ ಮಾಡದೇ ಹೋದರೆ ಪರಿಶಿಷ್ಟ ಜಾತಿ ಹಾಗೂ ಪಂಗಡದವರು ತಿರುಗಿ ಬೀಳುತ್ತಾರೆ. ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಸರಕಾರ ತೊಂದರೆ ಅನುಭವಿಸಬೇಕಾಗುತ್ತದೆ. ಹೀಗಾಗಿ ಕಾಯಿದೆ ಜಾರಿ ಮಾಡಲೇಬೇಕು ಎಂದು ಪಟ್ಟು ಹಿಡಿದರು. ಕೋರ್ಟ್ ತಡೆಯಾಜ್ಞೆ ನೀಡಿದರೆ ಸರಕಾರ ಮುಜುಗರ ಅನುಭವಿಸಬೇಕಾಗುತ್ತದೆ ಎಂದು ಜೆಡಿಎಸ್ ಸಚಿವರು ಆಕ್ಷೇಪ ವ್ಯಕ್ತಪಡಿಸಿದರು.
ಆದರೆ, ಸುಪ್ರೀಂ ಕೋರ್ಟ್ನಲ್ಲಿ ರಾಜ್ಯದ ಪರ ವಕೀಲ ಮುಕುಲ್ ರೋಹ್ಟಗಿ ಕಳುಹಿಸಿರುವ ಅಭಿಪ್ರಾಯವನ್ನು ಉಲ್ಲೇಖಿಸಿದ ಕಾಂಗ್ರೆಸ್ ಸಚಿವರು, ನ್ಯಾಯಾಲಯ ಈ ವಿಚಾರದಲ್ಲಿ ತಡೆ ನೀಡುವ ಸಾಧ್ಯತೆ ಕಡಿಮೆ. ಒಂದೊಮ್ಮೆ ತಡೆ ನೀಡಿದರೆ ಏನು ಮಾಡಬೇಕು ಎಂಬುದನ್ನು ನಂತರ ಯೋಚನೆ ಮಾಡೋಣ ಎಂದು ಪಟ್ಟು ಹಿಡಿದರು. ಕೊನೆಗೂ ಕಾಂಗ್ರೆಸ್ ಒತ್ತಡಕ್ಕೆ ಮಣಿದ ಕುಮಾರಸ್ವಾಮಿ ವಿಧೇಯಕ ಜಾರಿಗೊಳಿಸುವುದಕ್ಕೆ ಒಪ್ಪಿಗೆ ನೀಡಿದ್ದಾರೆ.
ನ್ಯಾಯವಾದಿಗಳ ಸಲಹೆ ಏನು?
ಬಡ್ತಿ ಮೀಸಲು ವಿಧೇಯಕ ಜಾರಿಗೆ ಸಂಬಂಧಪಟ್ಟಂತೆ ಲಿಖಿತ ಅಭಿಪ್ರಾಯ ಕಳುಹಿಸಿಕೊಡಿ ಎಂದು ನ್ಯಾಯವಾದಿ ಮುಕುಲ್ ರೋಹ್ಟಗಿಯವರನ್ನು ಸರಕಾರ ಕೋರಿತ್ತು. 'ರಾಜ್ಯ ಸರಕಾರ ಬಡ್ತಿ ಮೀಸಲು ಕಾಯಿದೆ ಅಂಗೀಕರಿಸಿರುವುದರಿಂದ ಇದನ್ನು ಅನುಷ್ಠಾನ ಮಾಡುತ್ತೇವೆ ಎಂದು ಕಳೆದ ಬಾರಿ ನಡೆದ ವಿಚಾರಣೆ ವೇಳೆ ನ್ಯಾಯಪೀಠದ ಗಮನಕ್ಕೆ ತರಲಾಯಿತು. ರಾಜ್ಯ ಸರಕಾರದ ಈ ವಾದವನ್ನು ನ್ಯಾಯಪಿಠ ದಾಖಲಿಸಿದೆ. ಹೀಗಾಗಿ ಈ ವಿಚಾರ ಸುಪ್ರೀಂ ಕೋರ್ಟ್ನ ಗಮನದಲ್ಲಿದೆ. ಕಾಯಿದೆ ಜಾರಿ ಮಾಡಬೇಡಿ ಎಂಬ ಸೂಚನೆಯನ್ನು ಸುಪ್ರಿಂಕೋರ್ಟ್ ಕೊಟ್ಟಿಲ್ಲ. ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಈ ಹಿಂದೆ ನೀಡಿದ ಸೂಚನೆ ಬಳಿಕ ಈ ಬೆಳವಣಿಗೆ ನಡೆದಿರುವುದರಿಂದ ರಾಜ್ಯ ಸರಕಾರ ಅನುಷ್ಠಾನ ಮಾಡುವುದರಲ್ಲಿ ತೊಂದರೆಯಿಲ್ಲ ಎಂದು ರೋಹ್ಟಗಿ ಅಭಿಪ್ರಾಯ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಕಾಯಿದೆ ಜಾರಿಗೆ ಮುಂದಾಗಿದೆ.
ಕಳೆದ ಸರಕಾರದ ಅವಧಿಯಲ್ಲೇ ಈ ಕಾಯಿದೆ ಒಪ್ಪಿಕೊಳ್ಳಲಾಗಿದೆ. ಜೇಷ್ಠತಾ ಪಟ್ಟಿ ಆಧರಿಸಿ ಕ್ರಮ ತೆಗೆದುಕೊಳ್ಳುತ್ತೇವೆ. ಇದಕ್ಕೆ ಸಂಬಂಧಪಟ್ಟಂತೆ ಸರಕಾರದ ಮೇಲೆ ಯಾವುದೇ ಆರ್ಥಿಕ ಹೊರೆಯಾಗದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭಿಪ್ರಾಯ ಭೇದ ಸಹಜ.
- ಕೃಷ್ಣಬೈರೇಗೌಡ, ಸಚಿವ
ಕೋರ್ಟ್ ಸೂಚನೆಯೇ ಅಂತಿಮ
ಸುಪ್ರೀಂಕೋರ್ಟ್ನ ಅಂತಿಮ ತೀರ್ಪಿನ ಷರತ್ತಿಗೆ ಒಳಪಟ್ಟು ಎಂಬ ರಕ್ಷಣಾತ್ಮಕ ನಡೆಯೊಂದಿಗೆ ಕಾಯಿದೆ ಜಾರಿಗೆ ಸಂಪುಟ ನಿರ್ಧರಿಸಿದೆ. ಫೆಬ್ರವರಿ ಮೊದಲ ವಾರ ಸುಪ್ರೀಂಕೋರ್ಟ್ನಲ್ಲಿ ಈ ವಿಚಾರಣೆ ನಡೆಯಲಿದ್ದು ನಂತರ ಸ್ಪಷ್ಟ ಚಿತ್ರಣ ದೊರಕಲಿದೆ.
ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಸೇರಿದಂತೆ ಕಾಂಗ್ರೆಸ್ ಸಚಿವರ ಒತ್ತಡ ಹಾಗೂ ಜೆಡಿಎಸ್ ಸಚಿವರ ವಿರೋಧದ ಮಧ್ಯೆಯೇ, ಬಡ್ತಿ ಮೀಸಲು ಪ್ರಕರಣದಿಂದ ಪರಿಶಿಷ್ಟರನ್ನು ರಕ್ಷಿಸುವ ವಿವಾದಿತ ಕಾಯಿದೆ ಜಾರಿಗೆ ಮೈತ್ರಿ ಸರಕಾರ ಮುಂದಾಗಿದೆ. ಸಿಎಂ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳುವ ಮೂಲಕ ಬಡ್ತಿ ಮೀಸಲು ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂಕೋರ್ಟ್ ನೀಡಿದ್ದ ಸೂಚನೆಗೆ ರಾಜ್ಯ ಸರಕಾರ ಪರೋಕ್ಷವಾಗಿ ಸಡ್ಡು ಹೊಡೆದಿದೆ.
ಬುಧವಾರ ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ಸುದೀರ್ಘ ಚರ್ಚೆ ನಡೆದಿದೆ. ನ್ಯಾಯಾಲಯದಲ್ಲಿ ವ್ಯತಿರಿಕ್ತ ಆದೇಶ ಬಂದರೆ ಕಷ್ಟವೆಂದು ಜೆಡಿಎಸ್ ಸಚಿವರು ಆಕ್ಷೇಪ ವ್ಯಕ್ತಪಡಿಸಿದರೂ, ಈ ಬಾರಿ ಕಾಯಿದೆ ಅನುಷ್ಠಾನವಾಗದೇ ಇದ್ದರೆ ಲೋಕಸಭೆ ಚುನಾವಣೆಯಲ್ಲಿ ಕಷ್ಟವಾಗುತ್ತದೆ ಎಂದು ಕಾಂಗ್ರೆಸ್ ಸಚಿವರು ಹಿಡಿದ ಪಟ್ಟಿಗೆ ಅಂತಿಮವಾಗಿ ಸಿಎಂ ಕುಮಾರಸ್ವಾಮಿ ಮಣಿದಿದ್ದಾರೆ. ಸುಪ್ರೀಂಕೋರ್ಟ್ನ ಅಂತಿಮ ಆದೇಶಕ್ಕೆ ಒಳಪಟ್ಟು ತಕ್ಷಣದಿಂದಲೇ ಜಾರಿಗೆ ಬರುವಂತೆ ಈ ಕಾಯಿದೆ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ. ಆದರೆ ಇಷ್ಟು ದಿನಗಳ ಕಾಲ ಸುಮ್ಮನಿದ್ದ ರಾಜ್ಯ ಸರಕಾರ, ಫೆಬ್ರವರಿ 5ರಿಂದ ಸುಪ್ರೀಂ ಕೋರ್ಟ್ ಈ ಬಗ್ಗೆ ವಿಚಾರಣೆ ಕೈಗೆತ್ತಿಕೊಳ್ಳುವ ಸಂದರ್ಭದಲ್ಲೇ ಜಾರಿಗೆ ಮುಂದಾಗಿರುವುದು 'ಅಹಿಂಸಾ' (ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ಸಾಮಾನ್ಯ ವರ್ಗ) ಸಂಘಟನೆಯ ಅಸಮಾಧಾನಕ್ಕೆ ಕಾರಣವಾಗಿದೆ.
ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ಆರಂಭವಾಗುತ್ತಿದ್ದಂತೆ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಸೇರಿದಂತೆ ಜೆಡಿಎಸ್ನ ಬಹುತೇಕ ಸಚಿವರು ಆಕ್ಷೇಪ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಾಳಯದಲ್ಲೂ ಕೆಲವರು ಮೌನಕ್ಕೆ ಶರಣಾದರು. ಆದರೆ, ಜಿ. ಪರಮೇಶ್ವರ, ಸತೀಶ್ ಜಾರಕಿಹೊಳಿ, ತುಕಾರಾಂ, ಪ್ರಿಯಾಂಕ್ ಖರ್ಗೆ ಕಾಯಿದೆ ಜಾರಿ ಪರ ನಿಂತರು. ಈ ಬಾರಿಯೂ ಅನುಷ್ಠಾನ ಮಾಡದೇ ಹೋದರೆ ಪರಿಶಿಷ್ಟ ಜಾತಿ ಹಾಗೂ ಪಂಗಡದವರು ತಿರುಗಿ ಬೀಳುತ್ತಾರೆ. ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಸರಕಾರ ತೊಂದರೆ ಅನುಭವಿಸಬೇಕಾಗುತ್ತದೆ. ಹೀಗಾಗಿ ಕಾಯಿದೆ ಜಾರಿ ಮಾಡಲೇಬೇಕು ಎಂದು ಪಟ್ಟು ಹಿಡಿದರು. ಕೋರ್ಟ್ ತಡೆಯಾಜ್ಞೆ ನೀಡಿದರೆ ಸರಕಾರ ಮುಜುಗರ ಅನುಭವಿಸಬೇಕಾಗುತ್ತದೆ ಎಂದು ಜೆಡಿಎಸ್ ಸಚಿವರು ಆಕ್ಷೇಪ ವ್ಯಕ್ತಪಡಿಸಿದರು.
ಆದರೆ, ಸುಪ್ರೀಂ ಕೋರ್ಟ್ನಲ್ಲಿ ರಾಜ್ಯದ ಪರ ವಕೀಲ ಮುಕುಲ್ ರೋಹ್ಟಗಿ ಕಳುಹಿಸಿರುವ ಅಭಿಪ್ರಾಯವನ್ನು ಉಲ್ಲೇಖಿಸಿದ ಕಾಂಗ್ರೆಸ್ ಸಚಿವರು, ನ್ಯಾಯಾಲಯ ಈ ವಿಚಾರದಲ್ಲಿ ತಡೆ ನೀಡುವ ಸಾಧ್ಯತೆ ಕಡಿಮೆ. ಒಂದೊಮ್ಮೆ ತಡೆ ನೀಡಿದರೆ ಏನು ಮಾಡಬೇಕು ಎಂಬುದನ್ನು ನಂತರ ಯೋಚನೆ ಮಾಡೋಣ ಎಂದು ಪಟ್ಟು ಹಿಡಿದರು. ಕೊನೆಗೂ ಕಾಂಗ್ರೆಸ್ ಒತ್ತಡಕ್ಕೆ ಮಣಿದ ಕುಮಾರಸ್ವಾಮಿ ವಿಧೇಯಕ ಜಾರಿಗೊಳಿಸುವುದಕ್ಕೆ ಒಪ್ಪಿಗೆ ನೀಡಿದ್ದಾರೆ.
ನ್ಯಾಯವಾದಿಗಳ ಸಲಹೆ ಏನು?
ಬಡ್ತಿ ಮೀಸಲು ವಿಧೇಯಕ ಜಾರಿಗೆ ಸಂಬಂಧಪಟ್ಟಂತೆ ಲಿಖಿತ ಅಭಿಪ್ರಾಯ ಕಳುಹಿಸಿಕೊಡಿ ಎಂದು ನ್ಯಾಯವಾದಿ ಮುಕುಲ್ ರೋಹ್ಟಗಿಯವರನ್ನು ಸರಕಾರ ಕೋರಿತ್ತು. 'ರಾಜ್ಯ ಸರಕಾರ ಬಡ್ತಿ ಮೀಸಲು ಕಾಯಿದೆ ಅಂಗೀಕರಿಸಿರುವುದರಿಂದ ಇದನ್ನು ಅನುಷ್ಠಾನ ಮಾಡುತ್ತೇವೆ ಎಂದು ಕಳೆದ ಬಾರಿ ನಡೆದ ವಿಚಾರಣೆ ವೇಳೆ ನ್ಯಾಯಪೀಠದ ಗಮನಕ್ಕೆ ತರಲಾಯಿತು. ರಾಜ್ಯ ಸರಕಾರದ ಈ ವಾದವನ್ನು ನ್ಯಾಯಪಿಠ ದಾಖಲಿಸಿದೆ. ಹೀಗಾಗಿ ಈ ವಿಚಾರ ಸುಪ್ರೀಂ ಕೋರ್ಟ್ನ ಗಮನದಲ್ಲಿದೆ. ಕಾಯಿದೆ ಜಾರಿ ಮಾಡಬೇಡಿ ಎಂಬ ಸೂಚನೆಯನ್ನು ಸುಪ್ರಿಂಕೋರ್ಟ್ ಕೊಟ್ಟಿಲ್ಲ. ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಈ ಹಿಂದೆ ನೀಡಿದ ಸೂಚನೆ ಬಳಿಕ ಈ ಬೆಳವಣಿಗೆ ನಡೆದಿರುವುದರಿಂದ ರಾಜ್ಯ ಸರಕಾರ ಅನುಷ್ಠಾನ ಮಾಡುವುದರಲ್ಲಿ ತೊಂದರೆಯಿಲ್ಲ ಎಂದು ರೋಹ್ಟಗಿ ಅಭಿಪ್ರಾಯ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಕಾಯಿದೆ ಜಾರಿಗೆ ಮುಂದಾಗಿದೆ.
ಕಳೆದ ಸರಕಾರದ ಅವಧಿಯಲ್ಲೇ ಈ ಕಾಯಿದೆ ಒಪ್ಪಿಕೊಳ್ಳಲಾಗಿದೆ. ಜೇಷ್ಠತಾ ಪಟ್ಟಿ ಆಧರಿಸಿ ಕ್ರಮ ತೆಗೆದುಕೊಳ್ಳುತ್ತೇವೆ. ಇದಕ್ಕೆ ಸಂಬಂಧಪಟ್ಟಂತೆ ಸರಕಾರದ ಮೇಲೆ ಯಾವುದೇ ಆರ್ಥಿಕ ಹೊರೆಯಾಗದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭಿಪ್ರಾಯ ಭೇದ ಸಹಜ.
- ಕೃಷ್ಣಬೈರೇಗೌಡ, ಸಚಿವ
ಕೋರ್ಟ್ ಸೂಚನೆಯೇ ಅಂತಿಮ
ಸುಪ್ರೀಂಕೋರ್ಟ್ನ ಅಂತಿಮ ತೀರ್ಪಿನ ಷರತ್ತಿಗೆ ಒಳಪಟ್ಟು ಎಂಬ ರಕ್ಷಣಾತ್ಮಕ ನಡೆಯೊಂದಿಗೆ ಕಾಯಿದೆ ಜಾರಿಗೆ ಸಂಪುಟ ನಿರ್ಧರಿಸಿದೆ. ಫೆಬ್ರವರಿ ಮೊದಲ ವಾರ ಸುಪ್ರೀಂಕೋರ್ಟ್ನಲ್ಲಿ ಈ ವಿಚಾರಣೆ ನಡೆಯಲಿದ್ದು ನಂತರ ಸ್ಪಷ್ಟ ಚಿತ್ರಣ ದೊರಕಲಿದೆ.