ಆ್ಯಪ್ನಗರ

ವಿಧಾನಮಂಡಲ ಅಧಿವೇಶನ ಆರಂಭ, ಉಭಯ ಸದನವನ್ನು ಉದ್ಧೇಶಿಸಿ ರಾಜ್ಯಪಾಲರ ಭಾಷಣ

ವಿಧಾನಮಂಡಲ ಜಂಟಿ ಅಧಿವೇಶನ ಆರಂಭವಾಗಿದ್ದು ಉಭಯಸದನವನ್ನು ಉದ್ಧೇಶಿಸಿ ರಾಜ್ಯಪಾಲ ವಜೂಭಾಯಿ ವಾಲಾ ಭಾಷಣ ಮಾಡಿದರು. ಸೋಮವಾರ ಆರಂಭಗೊಂಡಿರುವ ಅಧಿವೇಶನ ಮಾರ್ಚ್ 31 ರ ವರೆಗೆ ನಡೆಯಲಿದೆ.

Vijaya Karnataka Web 17 Feb 2020, 11:12 am
ಬೆಂಗಳೂರು: ವಿಧಾನಮಂಡಲ ಅಧಿವೇಶನ ಆರಂಭಗೊಂಡಿದ್ದು ಜಂಟಿ ಸದನವನ್ನು ಉದ್ದೇಶಿಸಿ ರಾಜ್ಯಪಾಲ ವಜೂಭಾಯಿ ರೂಡಾವಾಲ ಭಾಷಣ ಮಾಡುತ್ತಿದ್ದಾರೆ. ಸೋಮವಾರ ಬೆಳಗ್ಗೆ 11 ಗಂಟೆಗೆ ಅಧಿವೇಶನ ಆರಂಭವಾಯಿತು.
Vijaya Karnataka Web karnataka assembly session 2020 started governor speech on joint session
ವಿಧಾನಮಂಡಲ ಅಧಿವೇಶನ ಆರಂಭ, ಉಭಯ ಸದನವನ್ನು ಉದ್ಧೇಶಿಸಿ ರಾಜ್ಯಪಾಲರ ಭಾಷಣ


ಅಧಿವೇಶನಕ್ಕೆ ಆಗಮಿಸಿದ ರಾಜ್ಯಪಾಲರನ್ನು ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸ್ವಾಗತಿಸಿದರು.

ಬಿಎಸ್‌ವೈ ಮಣಿಸಲು ಕೈ ಸಿದ್ಧತೆ, ಸಿಎಲ್‌ಪಿ ಸಭೆಯಲ್ಲಿ ತಯಾರಾಗಲಿದೆ ಪ್ಲಾನ್

ಜಂಟಿ ಅಧಿವೇಶನವನ್ನು ಉದ್ಧೇಶಿಸಿ ಭಾ‍ಷಣ ಮಾಡಿದ ರಾಜ್ಯಪಾಲರು ರಾಜ್ಯಸರ್ಕಾರದ ಸಾಧನೆಗಳು, ಜಾರಿಯಾದ ಯೋಜನೆಗಳ ಕುರಿತು ಪ್ರಸ್ತಾಪಿಸಿದರು.

ಪ್ರವಾಹ ಪೀಡಿತ ಪ್ರದೇಶಗಳಿಗೆ ರಾಜ್ಯ ಸರ್ಕಾರ ಪರಿಹಾರ ಕ್ರಮಗಳನ್ನು ಕೈಗೊಂಡಿರುವ ಕುರಿತಾಗಿ ರಾಜ್ಯಪಾಲರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು. ನೆರೆ ಹರಿಹಾರಕ್ಕೆ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸಿದೆ ಎಂದರು.

ಕೇಂದ್ರ ಸರ್ಕಾರದ ಸಹಕಾರದೊಂದಿಗೆ ಪ್ರವಾಹ ಪೀಡಿತ ಪ್ರದೇಶದ ಜನರಿಗೆ ಹಾಗೂ ಬೆಲೆ ಕಳೆದುಕೊಂಡ ರೈತರಿಗೆ ಸಮರೋಪಾದಿಯಲ್ಲಿ ಪರಿಹಾರ ನೀಡಿದೆ ಎಂದರು.

ಫೆ. 17 ಕ್ಕೆ ಆರಂಭಗೊಂಡಿರುವ ಅಧಿವೇಶನ ಮಾರ್ಚ್‌ 31 ಕ್ಕೆ ಮುಕ್ತಾಯಗೊಳ್ಳಲಿದೆ. ಇಂದಿನಿಂದ ಮೂರು ದಿನಗಳ ಕಾಲ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಲಿದ್ದು ಮಾರ್ಚ್ 2 ಹಾಗೂ 3 ರಂದು ಸಂವಿಧಾನದ ಮೇಲೆ ವಿಶೇಷ ಚರ್ಚೆ ನಡೆಯಲಿದೆ. ಮಾರ್ಚ್‌ 5 ರಂದು ಸಿಎಂ ಬಿಎಸ್‌ವೈ ಬಜೆಟ್‌ ಮಂಡನೆ ಮಾಡಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ