ಬೆಂಗಳೂರು: ನೈತಿಕತೆ ವಿಚಾರವಾಗಿ ಸಚಿವ ಸುಧಾಕರ್ ಸವಾಲು ವಿಧಾನಸಭೆಯಲ್ಲಿ ಭಾರೀ ಗದ್ದಲಕ್ಕೆ ಕಾರಣವಾಗಿದೆ. ಕಾಂಗ್ರೆಸ್, ಜೆಡಿಎಸ್ ಹಾಗೂ ಆಡಳಿತ ಪಕ್ಷದ ಸದಸ್ಯರು ಸುಧಾಕರ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು(ಮಾ.24-ಬುಧವಾರ)ಮಧ್ಯಾಹ್ಮ ಭೋಜನದ ವಿರಾಮದ ಬಳಿಕ ಸದನ ಆರಂಭ ಆಗುತ್ತಿದ್ದಂತೇ, ಕಾಂಗ್ರೆಸ್ ಹಿರಿಯ ನಾಯಕ ಆರ್. ವಿ ದೇಶಪಾಂಡೆ ಮಾತನಾಡಿ ಸುಧಾಕರ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು.
ಸುಧಾಕರ್ ಆರೋಪದಲ್ಲಿ ನೀವು ಬಂದಿರಿ ಎಂದು ಸ್ವೀಕರ್ ಕಾಗೇರಿಯವರನ್ನು ಉದ್ದೇಶಿಸಿ ಹೇಳಿದ ದೇಶಪಾಂಡೆ, ಅವರ ಆರೋಪದಲ್ಲಿ ನಾವೂ ಬಂದಿವಿ, ಡಿಕೆಶಿ, ಸಿದ್ದರಾಮಯ್ಯ, ರಮೇಶ್ ಕುಮಾರ್ ಎಲ್ಲರ ಹೆಸರು ಉಲ್ಲೇಖ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ತರಹ ಹೇಳಿಕೆ ಯಾರೂ ಕೊಟ್ಟಿಲ್ಲ. ಮಹಿಳಾ ಶಾಸಕರೂ ಇದ್ದಾರೆ ಜನ ಏನು ತಿಳಿದುಕೊಳ್ಳಬೇಕು ಎಂದು ದೇಶಪಾಂಡೆ ಆಕ್ರೋಶ ವ್ಯಕ್ತಪಡಿಸಿದರು. ಸುಧಾಕರ್ ಹೇಳಿಕೆಯಿಂದ ನನ್ನ ಮನಸ್ಸಿಗೆ ನೋವಾಗಿದೆ ಎಂದು ದೇಶಪಾಂಡೆ ಬೇಸರ ವ್ಯಕ್ತಪಡಿಸಿದರು.
ದೇಶಪಾಂಡೆ ಆರೋಪಕ್ಕೆ ಸಹಮತ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಡಾ.ಕೆ ಸುಧಾಕರ್ ಹತಾಶೆ, ದುರುದ್ದೇಶದಿಂದ ಹೇಳಿದ್ದಾರೋ ಗೊತ್ತಿಲ್ಲ. ಆದರೆ ಅವರು ಎಲ್ಲರನ್ನು ಸೇರಿಸಿ ಹೇಳಿದ್ದಾರೆ. ಈ ನಿಟ್ಟಿನಲ್ಲಿ ತನಿಖೆ ನಡೆಯಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.
ಸುಧಾಕರ್ ಹೇಳಿಕೆಗೆ ಪ್ರತಿಕ್ರಿಯೆನೀಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸುಧಾಕರ್ ಸದನದ ಹೊರಗಡೆ ಹೇಳಿಕೆ ಕೊಟ್ಟಿದ್ದಾರೆ. ಸದನ ಹಾಗೂ ಸರ್ಕಾರಕ್ಕೂ ಮತ್ತು ಸುಧಾಕರ್ ಹೇಳಿಕೆಗೂ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸ್ವೀಕರ್ ಕಾಗೇರಿ, ಸದನದ ಸದಸ್ಯರ ಬಗ್ಗೆ ಸಂಶಯ, ಅಗೌರವ ಬರುವ ಹಾಗೆ ಹೇಳಿಕೆ ಕೊಡಬಾರದು. ಯಾವುದೇ ರೀತಿಯ ಭಾವನೆ, ಆಕ್ರೋಶ ಇದ್ದರೂ ಅಗೌರವ ಬರುವ ಹಾಗೆ ಮಾತನಾಡಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸುಧಾಕರ್ ಮಾಡಿದ ಆರೋಪದಲ್ಲಿ ನಾನೂ ಒಳಪಡುತ್ತೇನೆ. ಸದಸ್ಯರ ಘನತೆ ಗೌರವ ಎತ್ತಿ ಹಿಡಿಯುವುದು ನನ್ನ ಕರ್ತವ್ಯ. ನಿಮ್ಮ ನೋವಿಗೆ ನಾನೂ ಜವಾಬ್ದಾರ ಎಂದ ಸ್ವೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿಷಾದ ವ್ಯಕ್ತಪಡಿಸಿದರು.
ಸುಧಾಕರ್ ಆರೋಪದಲ್ಲಿ ನೀವು ಬಂದಿರಿ ಎಂದು ಸ್ವೀಕರ್ ಕಾಗೇರಿಯವರನ್ನು ಉದ್ದೇಶಿಸಿ ಹೇಳಿದ ದೇಶಪಾಂಡೆ, ಅವರ ಆರೋಪದಲ್ಲಿ ನಾವೂ ಬಂದಿವಿ, ಡಿಕೆಶಿ, ಸಿದ್ದರಾಮಯ್ಯ, ರಮೇಶ್ ಕುಮಾರ್ ಎಲ್ಲರ ಹೆಸರು ಉಲ್ಲೇಖ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ತರಹ ಹೇಳಿಕೆ ಯಾರೂ ಕೊಟ್ಟಿಲ್ಲ. ಮಹಿಳಾ ಶಾಸಕರೂ ಇದ್ದಾರೆ ಜನ ಏನು ತಿಳಿದುಕೊಳ್ಳಬೇಕು ಎಂದು ದೇಶಪಾಂಡೆ ಆಕ್ರೋಶ ವ್ಯಕ್ತಪಡಿಸಿದರು. ಸುಧಾಕರ್ ಹೇಳಿಕೆಯಿಂದ ನನ್ನ ಮನಸ್ಸಿಗೆ ನೋವಾಗಿದೆ ಎಂದು ದೇಶಪಾಂಡೆ ಬೇಸರ ವ್ಯಕ್ತಪಡಿಸಿದರು.
ದೇಶಪಾಂಡೆ ಆರೋಪಕ್ಕೆ ಸಹಮತ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಡಾ.ಕೆ ಸುಧಾಕರ್ ಹತಾಶೆ, ದುರುದ್ದೇಶದಿಂದ ಹೇಳಿದ್ದಾರೋ ಗೊತ್ತಿಲ್ಲ. ಆದರೆ ಅವರು ಎಲ್ಲರನ್ನು ಸೇರಿಸಿ ಹೇಳಿದ್ದಾರೆ. ಈ ನಿಟ್ಟಿನಲ್ಲಿ ತನಿಖೆ ನಡೆಯಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.
ಸುಧಾಕರ್ ಹೇಳಿಕೆಗೆ ಪ್ರತಿಕ್ರಿಯೆನೀಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸುಧಾಕರ್ ಸದನದ ಹೊರಗಡೆ ಹೇಳಿಕೆ ಕೊಟ್ಟಿದ್ದಾರೆ. ಸದನ ಹಾಗೂ ಸರ್ಕಾರಕ್ಕೂ ಮತ್ತು ಸುಧಾಕರ್ ಹೇಳಿಕೆಗೂ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸ್ವೀಕರ್ ಕಾಗೇರಿ, ಸದನದ ಸದಸ್ಯರ ಬಗ್ಗೆ ಸಂಶಯ, ಅಗೌರವ ಬರುವ ಹಾಗೆ ಹೇಳಿಕೆ ಕೊಡಬಾರದು. ಯಾವುದೇ ರೀತಿಯ ಭಾವನೆ, ಆಕ್ರೋಶ ಇದ್ದರೂ ಅಗೌರವ ಬರುವ ಹಾಗೆ ಮಾತನಾಡಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸುಧಾಕರ್ ಮಾಡಿದ ಆರೋಪದಲ್ಲಿ ನಾನೂ ಒಳಪಡುತ್ತೇನೆ. ಸದಸ್ಯರ ಘನತೆ ಗೌರವ ಎತ್ತಿ ಹಿಡಿಯುವುದು ನನ್ನ ಕರ್ತವ್ಯ. ನಿಮ್ಮ ನೋವಿಗೆ ನಾನೂ ಜವಾಬ್ದಾರ ಎಂದ ಸ್ವೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿಷಾದ ವ್ಯಕ್ತಪಡಿಸಿದರು.