ರಾಜ್ಯ ಸರ್ಕಾರದ ಎಪಿಎಂಸಿ ತಿದ್ದುಪಡಿ ಕಾಯ್ದೆ, ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಹಾಗೂ ಕೇಂದ್ರದ ಕೃಷಿ ಮಸೂದೆ ವಿರುದ್ಧ ಸಿಡಿದೆದ್ದಿರುವ ರೈತರು, ಸೋಮವಾರ ಕರ್ನಾಟಕ ಬಂದ್ಗೆ ಕರೆ ನೀಡಿದ್ದಾರೆ. ಈ ಬಂದ್ಗೆ ರಾಜಕೀಯ ಪಕ್ಷಗಳಿಂದ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ, 'ರಾಜ್ಯ ಸರ್ಕಾರ ಜಾರಿ ಮಾಡಿರುವ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ವಿರುದ್ಧ ರಾಜ್ಯದ ರೈತ ಸಂಘಗಳು ಹಾಗೂ ಅನೇಕ ಸಂಘಟನೆಗಳು ಹಮ್ಮಿಕೊಂಡಿರುವ ಸೋಮವಾರದ ಕರ್ನಾಟಕ ಬಂದ್ಗೆ ನಮ್ಮ ಜೆಡಿಎಸ್ ಪಕ್ಷದ ಸಂಪೂರ್ಣ ಬೆಂಬಲವಿರುತ್ತದೆ ಎಂದು ಮಾಧ್ಯಮಗಳ ಮುಖೇನ ತಿಳಿಸಲು ಇಚ್ಛೆಪಡುತ್ತೇನೆ' ಎಂದಿದ್ದಾರೆ.
ಬೆಂಗಳೂರು: ಹೆದ್ದಾರಿ ಬಂದ್ ಇಲ್ಲದಿದ್ದರೂ ವಾಹನ ಸಂಚಾರ ವಿರಳ
ಇನ್ನು ರಾಜ್ಯ ಕಾಂಗ್ರೆಸ್ ಕೂಡಾ ಸೋಮವಾರದ ಬಂದ್ಗೆ ಬೆಂಬಲ ನೀಡುವ ಸಾಧ್ಯತೆ ಇದೆ. ಕಳೆದ ಶುಕ್ರವಾರ ಉತ್ತರ ಭಾರತದ ರೈತ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್ಗೂ ಕಾಂಗ್ರೆಸ್ ಪಕ್ಷ ಬೆಂಬಲ ನೀಡಿತ್ತು. ಸಹಜವಾಗಿಯೇ ಸೋಮವಾರದ ಕರ್ನಾಟಕ ಬಂದ್ಗೂ ಕಾಂಗ್ರೆಸ್ ಬೆಂಬಲ ಇರಲಿದೆ.
ಸೆ. 28ಕ್ಕೆ ಚಿಕ್ಕಮಗಳೂರು ಜಿಲ್ಲಾ ಬಂದ್ಗೆ ಕರೆ ನೀಡಿದ ರೈತ ಸಂಘ!
ಇತ್ತ, ರೈತ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ಗೆ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ, ಕೃಷಿ ಮಸೂದೆ ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆಗಳು ರೈತಪರ ಎಂದು ವಾದಿಸಿವೆ. ದಲ್ಲಾಳಿ ವ್ಯವಸ್ಥೆಯಿಂದ ರೈತರನ್ನು ಮುಕ್ತರನ್ನಾಗಿ ಮಾಡೋದೇ ತಪ್ಪಾ ಎಂದು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ. ಇನ್ನು ಸಹಕಾರ ಸಚಿವ ಎಸ್ಟಿ ಸೋಮಶೇಖರ್ ಅವರಂತೂ, ರಾಜಕಾರಣಕ್ಕಾಗಿ ತಿದ್ದುಪಡಿ ಮಸೂದೆಯನ್ನು ವಿರೋಧಿಸಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಭೂಸುಧಾರಣಾ ಕಾಯ್ದೆ ತಿದ್ದುಪಡಿ ಹಿಂದೆ ಕಾರ್ಪೊರೇಟ್ ಕಂಪನಿ ಲಾಬಿ ಇದೆ ; ಸಿದ್ದರಾಮಯ್ಯ
ಬೆಂಗಳೂರು: ಹೆದ್ದಾರಿ ಬಂದ್ ಇಲ್ಲದಿದ್ದರೂ ವಾಹನ ಸಂಚಾರ ವಿರಳ
ಇನ್ನು ರಾಜ್ಯ ಕಾಂಗ್ರೆಸ್ ಕೂಡಾ ಸೋಮವಾರದ ಬಂದ್ಗೆ ಬೆಂಬಲ ನೀಡುವ ಸಾಧ್ಯತೆ ಇದೆ. ಕಳೆದ ಶುಕ್ರವಾರ ಉತ್ತರ ಭಾರತದ ರೈತ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್ಗೂ ಕಾಂಗ್ರೆಸ್ ಪಕ್ಷ ಬೆಂಬಲ ನೀಡಿತ್ತು. ಸಹಜವಾಗಿಯೇ ಸೋಮವಾರದ ಕರ್ನಾಟಕ ಬಂದ್ಗೂ ಕಾಂಗ್ರೆಸ್ ಬೆಂಬಲ ಇರಲಿದೆ.
ಸೆ. 28ಕ್ಕೆ ಚಿಕ್ಕಮಗಳೂರು ಜಿಲ್ಲಾ ಬಂದ್ಗೆ ಕರೆ ನೀಡಿದ ರೈತ ಸಂಘ!
ಇತ್ತ, ರೈತ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ಗೆ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ, ಕೃಷಿ ಮಸೂದೆ ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆಗಳು ರೈತಪರ ಎಂದು ವಾದಿಸಿವೆ. ದಲ್ಲಾಳಿ ವ್ಯವಸ್ಥೆಯಿಂದ ರೈತರನ್ನು ಮುಕ್ತರನ್ನಾಗಿ ಮಾಡೋದೇ ತಪ್ಪಾ ಎಂದು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ. ಇನ್ನು ಸಹಕಾರ ಸಚಿವ ಎಸ್ಟಿ ಸೋಮಶೇಖರ್ ಅವರಂತೂ, ರಾಜಕಾರಣಕ್ಕಾಗಿ ತಿದ್ದುಪಡಿ ಮಸೂದೆಯನ್ನು ವಿರೋಧಿಸಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಭೂಸುಧಾರಣಾ ಕಾಯ್ದೆ ತಿದ್ದುಪಡಿ ಹಿಂದೆ ಕಾರ್ಪೊರೇಟ್ ಕಂಪನಿ ಲಾಬಿ ಇದೆ ; ಸಿದ್ದರಾಮಯ್ಯ