ಆ್ಯಪ್ನಗರ

ಬಿಜೆಪಿಗೆ 'ಡಿಸಿಎಂ' ತಲೆನೋವು; ಸಮರ್ಥ ಸಿಎಂ ಇರುವಾಗ ಡಿಸಿಎಂ ಬೇಕಾ ?ರೇಣುಕಾಚಾರ್ಯ ಗರಂ

ಉಪಚುನಾವಣೆಯಲ್ಲಿ ಗೆಲುವಿನ ಬೆನ್ನಲ್ಲೇ ಬಿಜೆಪಿಯಲ್ಲಿ ಡಿಸಿಎಂ ಸ್ಥಾನದ ಗೊಂದಲ ಶುರುವಾಗಿದ್ದು ಈಗಾಗಲೇ ಇರೋ ಮೂವರು ಡಿಸಿಎಂಗಳ ಜೊತೆಗೆ ರಮೇಶ್ ಜಾರಕಿಹೊಳಿ ಹಾಗೂ ಶ್ರೀ ರಾಮುಲು ಡಿಸಿಎಂ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ.

Vijaya Karnataka Web 17 Dec 2019, 12:50 pm
ಬೆಂಗಳೂರು: ಉಪಚುನಾವಣೆಯ ಗೆಲುವಿನ ಬಳಿಕ ಬಿಜೆಪಿಯಲ್ಲಿ ಡಿಸಿಎಂ ಸ್ಥಾನದ ಗೊಂದಲ ಶುರುವಾಗಿದ್ದು ಈಗಾಗಲೇ ಇರುವ ಮೂವರು ಉಪಮುಖ್ಯಮಂತ್ರಿಗಳ ಜೊತೆಗೆ ಸಚಿವ ಶ್ರೀರಾಮುಲು ಹಾಗೂ ಶಾಸಕ ರಮೇಶ್ ಜಾರಕಿಹೊಳಿ ಡಿಸಿಎಂ ಪಟ್ಟಕ್ಕೆ ಬೇಡಿಕೆ ಇಟ್ಟಿರುವುದರಿಂದ ಸಿಎಂ ಬಿಎಸ್‌ ಯಡಿಯೂರಪ್ಪ ಅವರಿಗೆ ಹೊಸತೊಂದು ಹೊಸತಲೆನೋವು ಶುರುವಾಗಿದೆ.
Vijaya Karnataka Web karnataka bjp dcm post demand by sri ramulu
ಬಿಜೆಪಿಗೆ 'ಡಿಸಿಎಂ' ತಲೆನೋವು; ಸಮರ್ಥ ಸಿಎಂ ಇರುವಾಗ ಡಿಸಿಎಂ ಬೇಕಾ ?ರೇಣುಕಾಚಾರ್ಯ ಗರಂ


ಈಗಾಗಲೇ ಲಕ್ಷ್ಮಣ್ ಸವದಿ, ಡಾ. ಆಶ್ವಥ್ ನಾರಾಯಣ್ ಹಾಗೂ ಗೋವಿಂದ ಕಾರಜೋಳ ಡಿಸಿಎಂ ಆಗಿದ್ದಾರೆ. ಸರಕಾರದಲ್ಲಿ ಮೂರು ಡಿಸಿಎಂ ಹುದ್ದೆಯನ್ನು ಸೃಷ್ಟಿ ಮಾಡುವುದಕ್ಕೆ ಸಿಎಂ ಬಿಎಸ್‌ವೈ ಆರಂಭದಲ್ಲೇ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಹೈ ಕಮಾಂಡ್ ಸೂಚನೆಗೆ ಅವರು ತಲೆಬಾಗಬೇಕಾಯಿತು. ಇದೀಗ ಉಪಚುನಾವನೆಯ ಬಳಿಕ ಡಿಸಿಎಂ ಹುದ್ದೆಗೆ ಸಚಿವ ಶ್ರೀ ರಾಮುಲು ಬೇಡಿಕೆ ಇಟ್ಟಿದ್ದಾರೆ.

ವಾಲ್ಮಿಕಿ ಸಮುದಾಯದಕ್ಕೆ ಪ್ರಾತಿನಿಧ್ಯ ನೀಡುವ ನಿಟ್ಟಿನಲ್ಲಿ ಡಿಸಿಎಂ ಪಟ್ಟ ನೀಡಬೇಕು ಎಂದು ಅವರು ಸಿಎಂ ಬಿಎಸ್‌ವೈ ಅವರಲ್ಲಿ ಬೇಡಿಕೆ ಇಟ್ಟಿದ್ದಾರೆ. ಆದರೆ ಸಿಎಂ ಇದುವರೆಗೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈ ನಡುವೆ ಶ್ರೀ ರಾಮುಲು ಅವರ ವಿರುದ್ಧ ಭೂಹಗರಣದ ಆರೋಪ ಕೂಡಾ ಕೇಳಿ ಬಂದಿದೆ.

ಯಡಿಯೂರಪ್ಪ ಸರ್ಕಾರ ಪೂರಕ ಬಜೆಟ್‌ಗೆ ಸಿದ್ಧತೆ: ತಿಂಗಳಾಂತ್ಯಕ್ಕೆ ಮಂಡನೆ

ಸಮ್ಮಿಶ್ರ ಸರಕಾರದ ಪತನದಲ್ಲಿ ಮಹತ್ವದ ಪಾತ್ರ ವಹಿಸಿದ್ದ ರಮೇಶ್ ಜಾರಕಿಹೊಳಿ ಕೂಡಾ ಡಿಸಿಎಂ ಸ್ಥಾನಕ್ಕೆ ಕಣ್ಣಿಟ್ಟಿದ್ದಾರೆ. ಉಪಚುನಾವಣೆಯ ಮುನ್ನವೇ ಬಿ.ಎಸ್‌ ಯಡಿಯೂರಪ್ಪ ಅವರಲ್ಲಿ ಈ ಬೇಡಿಕೆಯನ್ನು ಇಟ್ಟಿದ್ದರು. ಇದೀಗ ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವಿನ ಬಳಿಕ ಜಲಸಂಪನ್ಮೂಲ ಖಾತೆಯ ಜೊತೆಗೆ ಡಿಸಿಎಂ ಸ್ಥಾನ ನೀಡುವಂತೆ ರಮೇಶ್ ಜಾರಕಿಹೊಳಿ ಬೇಡಿಕೆ ಇಟ್ಟಿದ್ದಾರೆ.

ಸಮರ್ಥ ಸಿಎಂ ಇರುವಾಗ ಡಿಸಿಎಂ ಯಾಕೆ - ರೇಣುಕಾಚಾರ್ಯ ಪ್ರಶ್ನೆ

ಬಿಜೆಪಿಯಲ್ಲಿ ಡಿಸಿಎಂ ಪಟ್ಟಕ್ಕಾಗಿ ಬೇಡಿಕೆ ಗೊಂದಲ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ ಮಾಜಿ ಸಚಿವ ಹಾಗೂ ಬಿಎಸ್‌ವೈ ಆಪ್ತ ಎಂ.ಪಿ ರೇಣುಕಾಚಾರ್ಯ ರಾಜ್ಯದಲ್ಲಿ ಮೂವರು ಡಿಸಿಎಂಗಳ ಅಗತ್ಯವಿಲ್ಲ ಎಂದು ಹೊಸತೊಂದು ಬಾಂಬ್ ಸಿಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇರುವ ಮೂರು ಡಿಸಿಎಂ ಸ್ಥಾನ ವಜಾಗೊಳಿಸಿ ಎಂದು ಬೇಡಿಕೆ ಇಟ್ಟಿದ್ದಾರೆ.

ಸಿಎಂ ಸ್ಥಾನದಲ್ಲಿ ಅಸಮರ್ಥರಿದ್ದಾಗ ಡಿಸಿಎಂ ಸ್ಥಾನದ ಅಗತ್ಯವಿರುತ್ತದೆ. ಆದರೆ ರಾಜ್ಯದಲ್ಲಿ ಸಿಎಂ ಹುದ್ದೆಯಲ್ಲಿ ಸಮರ್ಥರಾಗಿರುವ ಬಿಎಸ್‌ ಯಡಿಯೂರಪ್ಪ ಇರುವಾಗ ಡಿಸಿಎಂಗಳ ಅವಷ್ಯಕತೆ ಏನು ಎಂದು ಅವರು ಪ್ರಶ್ನಿಸಿದ್ದಾರೆ. ಬಿಎಸ್‌ವೈ ದಕ್ಷಿಣ ಭಾರತದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿ ಅಧಿಕಾರಕ್ಕೆ ತಂದಿದ್ದಾರೆ.

ಡಿಸಿಎಂ ಹುದ್ದೆಗೆ ಒತ್ತಡ: ಜಾರಕಿಹೊಳಿ ಜತೆ ರೇಸ್‌ನಲ್ಲಿ ಶ್ರೀರಾಮುಲು

ಅವರು ಸಮರ್ಥ ಆಡಳಿತಗಾರರಾಗಿದ್ದು ಸ್ವತಃ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೂಡಾ ಪ್ರಶಂಸೆ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಡಿಸಿಎಂ ಸ್ಥಾನಗಳನ್ನು ಸೃಷ್ಟಿಸುವ ಮೂಲಕ ಅಧಿಕಾರ ಹಂಚಿಕೆ ಸರಿಯಲ್ಲ ಎಂದಿದ್ದಾರೆ. ಇದು ಬಿಜೆಪಿ ಪಕ್ಷದೊಳಗಡೆ ಗುಂಪುಗಾರಿಕೆಗೆ ಕಾರಣವಾಗುತ್ತೆ ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ