ಆ್ಯಪ್ನಗರ

ಡಿಸಿಎಂ ಹುದ್ದೆ ಬೇಕೋ ಬೇಡ್ವೋ ; ಅಶ್ವಥ್ ನಾರಾಯಣ್ v/s ರೇಣುಕಾಚಾರ್ಯ ಫೈಟ್

ಬಿಜೆಪಿಯಲ್ಲಿ ಮೂರು ಡಿಸಿಎಂ ಸೃಷ್ಟಿ ವಿಚಾರ ಇದೀಗ ಆಂತರಿಕ ತಿಕ್ಕಾಟಕ್ಕೆ ಕಾರಣವಾಗಿದೆ. ಮಾಜಿ ಸಚಿವ ರೇಣುಕಾಚಾರ್ಯ ಹಾಗೂ ಡಿಸಿಎಂ ಅಶ್ವಥ್ ನಾರಾಯಣ ನಡುವೆ ವಾಗ್ದಾದ ಶುರುವಾಗಿದೆ. ಡಿಸಿಎಂ ಸ್ಥಾನದ ಕುರಿತಾಗಿ ಯಾರು ಏನಂದ್ರು ಎಂಬುವುದರ ವಿವರ ಇಲ್ಲಿದೆ.

Vijaya Karnataka Web 18 Dec 2019, 3:58 pm
ಬೆಂಗಳೂರು: ಬಿಜೆಪಿಯಲ್ಲಿ ಮೂರು ಡಿಸಿಎಂ ಹುದ್ದೆ ಸೃಷ್ಟಿ ಇದೀಗ ಆಂತರಿಕ ತಿಕ್ಕಾಟಕ್ಕೆ ಕಾರಣವಾಗಿದ್ದು ಸಿಎಂ ಬಿ.ಎಸ್‌ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ, ಮಾಜಿ ಸಚಿವ ಎಂ. ಪಿ ರೇಣುಕಾಚಾರ್ಯ ಹಾಗೂ ಡಿಸಿಎಂ ಡಾ. ಅಶ್ವಥ್ ನಾರಾಯಣ್ ನಡುವಿನ ತಿಕ್ಕಾಟಕ್ಕೆ ಕಾರಣವಾಗಿದೆ. ಡಿಸಿಎಂ ಹುದ್ದೆ ಅಗತ್ಯವಿಲ್ಲ ಎಂಬ ರೇಣುಕಾಚಾರ್ಯ ಹೇಳಿಕೆಗೆ ಅಶ್ವಥ್ ನಾರಾಯಣ್ ವಿರೋಧ ವ್ಯಕ್ತಪಡಿಸಿದ್ದು ಇದೀಗ ಮತ್ತೆ ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ.
Vijaya Karnataka Web karnataka bjp leaders fight for dcm post
ಡಿಸಿಎಂ ಹುದ್ದೆ ಬೇಕೋ ಬೇಡ್ವೋ ; ಅಶ್ವಥ್ ನಾರಾಯಣ್ v/s ರೇಣುಕಾಚಾರ್ಯ ಫೈಟ್


ರಾಜ್ಯದಲ್ಲಿ ಪ್ರಬಲ ಸಿಎಂ ಆಗಿ ಬಿ.ಎಸ್ ಯಡಿಯೂರಪ್ಪ ಇರುವಾಗ ಮೂವರು ಡಿಸಿಎಂಗಳ ಅಗತ್ಯ ಏನಿದೆ ಎಂದು ರೇಣುಕಾಚಾರ್ಯ ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಾ. ಅಶ್ವಥ್ ನಾರಾಯಣ, ಡಿಸಿಎಂ ಸ್ಥಾನ ರದ್ದು ವಿಚಾರವನ್ನು ಹಾದಿ ಬೀದಿಯಲ್ಲಿ ಮಾತಾಡಬಾರದಿತ್ತು, ರೇಣುಕಾಚಾರ್ಯ ಅವರು ಹೈಕಮಾಂಡ್ ನಿರ್ಧಾರವನ್ನು ಪ್ರಶ್ನೆ ಮಾಡಿದ್ದಾರೆ ಎಂದು ಕಿಡಿಕಾರಿದ್ದರು.

ಇದಕ್ಕೆ ತಿರುಗೇಟು ನೀಡಿರುವ ರೇಣುಕಾಚಾರ್ಯ, ಅಶ್ವಥ್ ನಾರಾಯಣ ನನಗೆ ನೀತಿ ಪಾಠ ಹೇಳುವ ಅಗತ್ಯ ಇಲ್ಲ. ಡಿಸಿಎಂ ಸ್ಥಾನ ರದ್ದು ಕುರಿತಾಗಿ ನಾನು ಹಾದಿ ಬೀದಿಯಲ್ಲಿ ಮಾತಾಡಿಲ್ಲ. ಬಿಜೆಪಿ ಹೈಕಮಾಂಡ್ ನಿರ್ಧಾರವನ್ನು ನಾನು ಪ್ರಶ್ನೆ ಮಾಡಿಲ್ಲ. ಪಕ್ಷದ ಹೈಕಮಾಂಡ್‌ಗೆ ಹೇಗೆ ಗೌರವ ಕೊಡಬೇಕು ಎಂಬುವುದು ನನಗೆ ಗೊತ್ತಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಮುಗಿಯದ ‘ಸಂಪುಟ ಸಂಕಟ’ - ಬಿಎಸ್‌ವೈ ಪಾಲಿಗಿದು ಬಿಸಿ ತುಪ್ಪ !

ಸಿಎಂ ಬಿಎಸ್ ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲ್ ಹಾಗೂ ಹೈಕಮಾಂಡ್ ನಾಯಕರ ಬಗ್ಗೆ ನನಗೆ ಗೌರವ ಇದೆ ಆದರೆ ನೀವು ಬಿಬಿಎಂಪಿ ಚುನಾವಣೆ ವೇಳೆ ಯಡಿಯೂರಪ್ಪ ಅವರನ್ನೇ ಪ್ರಶ್ನೆ ಮಾಡಿದ್ದೀರಿ. ಬಿಎಸ್‌ವೈಗೆ ಗೌರವ ಕೊಡದೇ ಟಿಕೆಟ್ ಬಗ್ಗೆ ಪ್ರಶ್ನಿಸಿದ್ದೀರಿ. ಈಗ ಯಡಿಯೂರಪ್ಪ ಸಿಎಂ ಆದ ಬಳಿಕ ನೀವು ಗೌರವ ಕೊಡುತ್ತಿದ್ದೀರಿ ಎಂದು ಟಾಂಗ್ ನೀಡಿದ್ದಾರೆ.

ಡಿಸಿಎಂ ಹುದ್ದೆ ರದ್ದು ಮಾಡಲು ಒತ್ತಡ: ಸಚಿವ ಆರ್‌ ಅಶೋಕ್‌

ನಳಿನ್ ಕುಮಾರ್ ಭೇಟಿಯಾಗಿ ಡಿಸಿಎಂ ಸ್ಥಾನದ ಬಗ್ಗೆ ಚರ್ಚೆ

ಡಿಸಿಎಂ ಸ್ಥಾನ ರದ್ದತಿ ಕುರಿತಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಎಂಪಿ ರೇಣುಕಾಚಾರ್ಯ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಡಿಸಿಎಂ ಸ್ಥಾನಕ್ಕೆ ಮತ್ತಷ್ಟು ಬೇಡಿಕೆ ಬರುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಪಕ್ಷದೊಳಗೆ ಗೊಂದಲ ಸೃಷ್ಟಿಯಾಗುವ ಸಾಧ್ಯತೆ ಇರುವ ಕುರಿತಾಗಿ ರೇಣುಕಾಚಾರ್ಯ ನಳಿನ್ ಕುಮಾರ್ ಕಟೀಲ್ ಅವರ ಗಮನಕ್ಕೆ ತಂದಿದ್ದಾರೆ.

ಪ್ರವಾಹ ಪರಿಹಾರ ಸವಾಲನ್ನು ಸರ್ಕಾರ ಯಶಸ್ವಿಯಾಗಿ ಎದುರಿಸಿದೆ - ಸಿಎಂ ಬಿಎಸ್‌ವೈ

ಈ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದ ಬಿಜೆಪಿ ಕಾರ್ಯಕರ್ತರ, ಲೋಕಸಭಾ ಸದಸ್ಯರ ಹಾಗೂ ಶಾಸಕರ ಅಭಿಪ್ರಾಯವನ್ನು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮುಂದಿಟ್ಟಿದ್ದೀನಿ. ಆದರೆ ರಾಜ್ಯಾಧ್ಯಕ್ಷರ ಜೊತೆಗೆ ಏನು ಮಾತುಕತೆ ಮಾಡಿದ್ದೇನೆ ಎಂಬುವುದನ್ನು ಬಹಿರಂಗಪಡಿಸುವುದಿಲ್ಲ. ಬಹಳ ಉತ್ತಮವಾದ ಮಾತುಕತೆ ನಡೆದಿದೆ. ಪಕ್ಷದ ಕಾರ್ಯಕರ್ತನಾಗಿ ನನ್ನ ಮನಸ್ಸಿನ ಅಭಿಪ್ರಾಯ ಅಧ್ಯಕ್ಷರಿಗೆ ಹೇಳಿದ್ದೇನೆ. ಪಕ್ಷ ಏನು ತೀರ್ಮಾನ ತೆಗೆದುಕೊಳ್ಳುತ್ತದೆ ನೋಡೋಣ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ