ಆ್ಯಪ್ನಗರ

ಶಂಕರ್‌ಗೆ ಸಿಕ್ಕಿಲ್ಲ ರಾಣೆಬೆನ್ನೂರು; ಕಮಲದ ಅಭ್ಯರ್ಥಿಯಾಗಿ ಅರುಣ್ ಕುಮಾರ್ ಫಿಕ್ಸ್

ರಾಣೆಬೆನ್ನೂರು ಬಿಜೆಪಿ ಅಭ್ಯರ್ಥಿಯಾಗಿ ಅರುಣ್ ಕುಮಾರ್ ಪೂಜಾರ್ ಹೆಸರು ಘೋಷಣೆಗೊಂಡಿದೆ. ಅನರ್ಹ ಶಾಸಕ ಆರ್. ಶಂಕರ್ ಬದಲಾಗಿ ಅರುಣ್ ಕುಮಾರ್ ಪೂಜಾರ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ.

Vijaya Karnataka Web 15 Nov 2019, 11:12 am
ಬೆಂಗಳೂರು: ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಅರುಣ್ ಕುಮಾರ್ ಪೂಜಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಈ ಕುರಿತಾಗಿ ಘೋಷಣೆ ಮಾಡಿದ್ದು ಟಿಕೆಟ್‌ಗಾಗಿ ಭಾರೀ ಲಾಬಿ ಮಾಡುತ್ತಿದ್ದ ಅನರ್ಹ ಶಾಸಕ ಆರ್ ಶಂಕರ್‌ಗೆ ಕೊನೆಗೂ ಟಿಕೆಟ್ ಕೈ ತಪ್ಪಿದೆ.
Vijaya Karnataka Web karnataka by election ranebennur bjp candidate announced
ಶಂಕರ್‌ಗೆ ಸಿಕ್ಕಿಲ್ಲ ರಾಣೆಬೆನ್ನೂರು; ಕಮಲದ ಅಭ್ಯರ್ಥಿಯಾಗಿ ಅರುಣ್ ಕುಮಾರ್ ಫಿಕ್ಸ್


ಎಂಎಲ್‌ಸಿ ಮಾಡಿ ಮಂತ್ರಿಗಿರಿ ; ಬಿಎಸ್‌ವೈ ಭರವಸೆಗೆ ತಣ್ಣಗಾದ ಶಂಕರ್

ರಾಣೆಬೆನ್ನೂರು ಕ್ಷೇತ್ರಕ್ಕೆ ಟಿಕೆಟ್ ನೀಡಬೇಕು ಎಂದು ಆರ್ ಶಂಕರ್ ತಮ್ಮ ಬೆಂಬಲಿಗರೊಂದಿಗೆ ಸಿಎಂ ಬಿಎಸ್‌ವೈಗೆ ದುಂಬಾಲು ಬಿದ್ದಿದ್ದರು. ಬಿಎಸ್‌ವೈ ನಿವಾಸ ಧವಳಗಿರಿಯ ಮುಂದೆ ಶಂಕರ್ ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು. ಆದರೆ ಟಿಕೆಟ್ ಬದಲಾಗಿ ಎಂಎಲ್‌ಸಿ ಮಾಡಿ ಸಚಿವ ಸ್ಥಾನ ನೀಡುವ ಭರವಸೆಯನ್ನು ಶಂಕರ್ ಅವರಿಗೆ ಸಿಎಂ ನೀಡಿದ್ದಾರೆ ಎನ್ನಲಾಗಿದೆ.

ರೋಷನ್‌ ಬೇಗ್‌ಗೆ ಆಸೆಗೆ ಮುಳುವಾಗಿದ್ದು ಸಂಘ ಪರಿ­ವಾರ­ದೊಂದಿಗಿನ ಸೈದ್ಧಾಂತಿಕ ಸಂಘರ್ಷ

ಆರ್.ಶಂಕರ್ ಅಸಮಾಧಾನ ಶಮನದ ಬೆನ್ನಲ್ಲೇ ರಾಣೆಬೆನ್ನೂರಿಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಮಾಡಿದ್ದು ಬಿಜೆಪಿ ಮುಖಂಡ ಅರುಣ್ ಕುಮಾರ್ ಪೂಜಾರ್ ಅವರನ್ನು ಕಣಕ್ಕಿಳಿಸಿದೆ. ರಾಣೆಬೆನ್ನೂರಿನಲ್ಲಿ ಟಿಕೆಟ್‌ಗಾಗಿ ಬಿಜೆಪಿಯಲ್ಲೇ ಭಾರೀ ಪೈಪೋಟಿ ಇತ್ತು. ಸಚಿವ ಕೆಎಸ್ ಈಶ್ವರಪ್ಪ ಪುತ್ರ ಕಾಂತೇಶ್ ಕೂಡಾ ಟಿಕೆಟ್‌ ಬೇಡಿಕೆ ಇಟ್ಟಿದ್ದರು.

ಇದೀಗ ಅಂತಿಮವಾಗಿ ನಡೆದ ಮಾತುಕತೆ ಹಿನ್ನೆಲೆಯಲ್ಲಿ ಅರುಣ್ ಕುಮಾರ್‌ ಅವರನ್ನು ಅಧಿಕೃತ ಅಭ್ಯರ್ಥಿಯನ್ನಾಗಿ ಬಿಜೆಪಿ ಘೋಷಿಸಿದೆ. ರಾಣೆಬೆನ್ನೂರಿನಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಹಲಗೇರಿ ಕಣದಲ್ಲಿದ್ದಾರೆ ಕಾಂಗ್ರೆಸ್‌ನಿಂದ ಕೆಬಿ ಕೋಳಿವಾಡ ಅಖಾಡದಲ್ಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ