ಆ್ಯಪ್ನಗರ

ಅಯ್ಯೋ ಪಾಪ ವಿಶ್ವನಾಥ್‌, ಎಂಟಿಬಿ ಏನ್‌ ಪಾಪ ಮಾಡಿದ್ರು!

ಕರ್ನಾಟಕ ಉಪ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ಸಾಮಾಜಿಕ ತಾಣಗಳಲ್ಲಿ ಟ್ರೋಲ್‌ಗಳು, ಪನ್‌ಗಳು ಸಿಕ್ಕಾಪಟ್ಟೆ ಓಡಾಡಿದವು. ಗೆದ್ದ ನಾಯಕರನ್ನು ಕುಕ್ಕಿದರು, ಸೋತ ನಾಯಕರ ವಿರುದ್ಧ ಕುಹಕವಾಡಿದರು. ಒಟ್ಟಿನಲ್ಲಿ ಸಾಮಾಜಿಕ ತಾಣಗಳ ಬಳಕೆದಾರರಿಗೆ ಮನರಂಜನೆ ಒದಗಿಸಿದರು.

Vijaya Karnataka Web 10 Dec 2019, 10:52 am
ಬೆಂಗಳೂರು: ಉಪಸಮರ ಫಲಿತಾಂಶದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಜನ ಕುತೂಹಲಕಾರಿಯಾಗಿ ಬರೆದುಕೊಂಡಿದ್ದು, ನೋಡುಗರಿಗೆ ಹಬ್ಬವಾಗಿದೆ! ಅನರ್ಹತೆ ಶಿಕ್ಷೆಗೊಳಗಾದ ಎಲ್ಲರೂ ಗೆದ್ದು, ವಿಶ್ವನಾಥ್‌ ಮತ್ತು ಎಂಟಿಬಿ ನಾಗರಾಜ್‌ ಸೋತಿರುವುದಕ್ಕೆ ''ಪಾಪ ವಿಶ್ವನಾಥ್‌, ಎಂಟಿಬಿ ಏನ್‌ ಪಾಪ ಮಾಡಿದ್ರು,'' ಎಂದು ಜಗನ್ನಾಥ್‌ ರಾಮಸ್ವಾಮಿ ಎಂಬವರು ಮೊಸಳೆ ಕಣ್ಣೀರು ಸುರಿಸಿದ್ದಾರೆ!
Vijaya Karnataka Web Vishwanath MTB


ಇವತ್ತು ಭ್ರಷ್ಟಾಚಾರ ವಿರೋಧಿ ದಿನವಂತೆ. ಕಾಕತಾಳೀಯವಾಗಿ ಜಗತ್ತಿನ ಸರ್ವಶ್ರೇಷ್ಠ ಪ್ರಾಮಾಣಿಕರೆಲ್ಲ ಗೆದ್ದು ಬರುತ್ತಿದ್ದಾರೆ.
- ದಿನೇಶ್‌ ಕುಮಾರ್‌

ನೆರೆಸಂತ್ರಸ್ತರನ್ನು ಮಧ್ಯಸ್ಥರನ್ನಾಗಿ ಮಾಡಿ ಮತ್ತಿನಲ್ಲಿದ್ದವರಿಂದ ಗಿಟ್ಟಿಸಿದ ಮತ, ಇದುವೇ ಮಜಾಪ್ರಭುತ್ವ .
- ಕೃಷ್ಣಮೂರ್ತಿ ಶ್ರೀನಾಥ್‌.

ಸಮೀಕ್ಷೆಗಳನ್ನು ನಂಬದಿದ್ದರೂ ಕೊನೆಯ ಪಕ್ಷ ಚುನಾವಣಾ ಆಯೋಗ ಪ್ರಕಟಿಸುವ ಫಲಿತಾಂಶಗಳನ್ನಾದಾರೂ ನಂಬಿ ಸ್ವಾಮಿ(ಇವಿಎಂ ಕಾರಣವೊಡ್ಡದೇ).
- ಸಚಿವ ಸುರೇಶ್‌ ಕುಮಾರ್‌

ಉಪ ಚುನಾವಣೆ ಫಲಿತಾಂಶ: ಕರ್ನಾಟಕ ಬಿಜೆಪಿಗೆ ಬಿಎಸ್‌ವೈ ಅನಿವಾರ್ಯ ಎಂಬ ಸ್ಪಷ್ಟ ಸಂದೇಶದ ರವಾನೆ!

ವಿಶ್ವನಾಥರೆ ನಿಮ್ಮ ಸೋಲಿಗೆ ಇವಿಎಂ ನೇರ ಕಾರಣ. ಎಲ್ಲ ಅನರ್ಹರೂ ಗೆದ್ದಿದ್ದಾರೆ ನೀವ್ಯಾಕಿಲ್ಲ, ಇವಿಎಂ ವಿರುದ್ಧ ಹೋರಾಡೋಣ ಬನ್ನಿ... ನಾಳೆಯಿಂದ ಕೆಲಸ ಬೇರೆ ಇಲ್ಲ....
- ಫೇಸ್‌ಬುಕ್‌ ಪೋಸ್ಟ್‌

ಸಮೀಕ್ಷೆಗಳೆಲ್ಲಾ ನಿಜವಾಗ್ತ ಐತಲ್ಲ..... ಏನ್‌ ಸಮಾಚಾರ!? ರಿಸಲ್ಟ್‌ ಫಿಕ್ಸಿಂಗಾ? (ರಿಸಲ್ಟ್‌ ಅನೌನ್ಸ್‌ ಮಾಡಿದ್ಮೇಲೆ ಪರೀಕ್ಷೆ ಬರೆಸಿದಂಗೆ)
- ಸಂತೋಷ್‌ ಕೋಡಿಹಳ್ಳಿ

ಈ ಬಿಜೆಪಿಯವರು ಕಾಂಗ್ರೆಸ್‌ ಮುಕ್ತ ಭಾರತ ಮಾಡೋ ಭರದಲ್ಲಿ ಕರ್ನಾಟಕವನ್ನು ಜೆಡಿಎಸ್‌ ಮುಕ್ತ ಮಾಡ್ದಂಗಿದೆ!!!
- ನಾಗೇಶ್‌ ಕಾಲೇನಳ್ಳಿ.

ಯಡಿಯೂರಪ್ಪ ಈಗ ಪವರ್‌ಫುಲ್‌ : ಆಪರೇಷನ್‌ ಕಮಲದ ಪರ ಜನಮತ

ಉಪ ಚುನಾವಣೆಯಲ್ಲಿ ಸೋತಿದ್ದಕ್ಕೆ ಕಾಂಗ್ರೆಸ್‌ ಪಕ್ಷದ ನಾಯಕರು ರಾಜೀನಾಮೆಯನ್ನಾದರೂ ನೀಡಿದ್ದಾರೆ... ಜೆಡಿಎಸ್‌ನಲ್ಲಿ ಹೇಗೋ? ರಾಜೀನಾಮೆ ಪತ್ರವನ್ನು ಯಾರು ಯಾರಿಗೆ ಕೊಡ್ತಾರೋ?
-ಗೋಪಿನಾಥ್‌ ರಾಜ.

ಹೆಬ್ಬಾರ್ರು ಗೆದ್ರು...! ಹೆಬ್ಬಾಳ್ಕರ್ರು ಸೋತ್ರು!!
- ನಾರಾಯಣ ಹೆಬ್ಬಾರ್‌

ಜನ ಏನು ನಂಬ್ತಾರೋ ಬಿಡ್ತಾರೋ ಗೊತ್ತಿಲ್ಲ. ಅಳೋ ಗಂಡಸನ್ನ ನಂಬಬಾರದು ಅನ್ನೋ ಗಾದೆ ಮಾತನ್ನು ಮಾತ್ರ ಸೀರಿಯಸ್‌ ಆಗಿ ತಕೊಂಡಿದ್ದಾರೆ.
- ಗುರುರಾಜ್‌ ಕೊಡ್ಕಣಿ

ಚುನಾವಣೆ ಗೆಲ್ಲಬೇಕಾದರೆ ಯಾವ ಯೋಗ್ಯತೇನು ಬೇಡ, ಅನರ್ಹನಾಗಿದ್ರೆ ಸಾಕು.
- ಪ್ರೀತಮ್‌ ಗೌಡ ಟ್ವೀಟ್‌

ಉಪ ಚುನಾವಣೆಯಲ್ಲಿ ಅನರ್ಹರೇನಾದರೂ ಸೋಲುತ್ತಿದ್ದರೆ ನನಗೆ ಹಣಬಲದ ಮೇಲೆ ವಿಶ್ವಾಸವೇ ಹೊರಟುಹೋಗುತ್ತಿತ್ತು.
- ಪುನೀತ್‌ ಅಪ್ಪು

ಉಪ ಚುನಾವಣೆ ಫಲಿತಾಂಶ: ಕ್ಷೇತ್ರವಾರು ಡೀಟೈಲ್ಸ್‌ ಇಲ್ಲಿದೆ.

ರಾತ್ರಿ ನಿರಾಳವಾಗಿ ನಿದ್ದೆ ಹೋಗೋ ರಾಜ್ಯದ ಇಬ್ಬರು ಸೀನಿಯರ್‌ ನಾಯಕರು
1. ಯಡಿಯೂರಪ್ಪ
2. ಸಿದ್ದರಾಮಯ್ಯ
- ಸುದರ್ಶನ್‌ ರೆಡ್ಡಿ ಡಿ.ಎನ್‌

ಸಂಜಯ್‌ ಝಾ ಟ್ವೀಟ್‌
ಐಡಿಯಾಲಜಿ ಅನ್ನೋದು ಮೆಗಾ ಸೇಲ್‌ಗೆ ಬಂದಿದೆ. ಶೇ.100ರಷ್ಟು ರಿಯಾಯಿತಿ ಹೊಂದಿದೆ.

ಮೋಹನ್‌ ವಿಶ್ವ ಟ್ವೀಟ್‌
ಕರ್ನಾಟಕ ಉಪ ಚುನಾವಣೆ ಫಲಿತಾಂಶ
ಇಂಡಿಯಾ- 12
ಇಟಲಿ -2
ಅಪ್ಪ-ಮಗ -0

ಜೆಡಿಎಸ್‌-ಕಾಂಗ್ರೆಸ್‌ನಲ್ಲಿ 'ಹೀರೊ'ಗಳಂತ್ತಿದ್ದವರಿಗೆ ಬಿಜೆಪಿಯಲ್ಲಿ ಹೀರೋಯಿಸಂ ಆಟ ನಡೆಯದು!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ