ಆ್ಯಪ್ನಗರ

ಬೈಎಲೆಕ್ಷನ್ ಫಲಿತಾಂಶದ ಬಳಿಕ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್! ಬಿಎಸ್‌ವೈ ಪಟ್ಟಿಗೆ ಸಿಗುತ್ತಾ ಹೈಕಮಾಂಡ್‌ ಸಮ್ಮತಿ

ಉಪಚುನಾವಣೆಯ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ನಡೆಯುತ್ತಾ? ಈ ಸಾಧ್ಯತೆ ಹೆಚ್ಚಿದೆ ಎನ್ನುತ್ತಿದೆ ಬಿಜೆಪಿ ಮೂಲಗಳು. ಹಾಗಾದ್ರೆ ಯಾರೆಲ್ಲಾ ಸಂಪುಟಕ್ಕೆ ಸೇರ್ಪಡೆಯಾಗುತ್ತಾರೆ?

Vijaya Karnataka Web 8 Nov 2020, 9:31 am
ಬೆಂಗಳೂರು: ಶಿರಾ ಹಾಗೂ ರಾಜರಾಜೇಶ್ವರಿ ನಗರ ಬೈಎಲೆಕ್ಷನ್ ಫಲಿತಾಂಶದ ಬಳಿಕ ಸಂಪುಟ ವಿಸ್ತರಣೆ ಆಗುವುದು ಬಹುತೇಕ ಖಚಿತವಾಗಿದೆ. ಫಲಿತಾಂಶದ ಬೆನ್ನಲ್ಲೇ ಸಿಎಂ ಬಿಎಸ್ ಯಡಿಯೂರಪ್ಪ ದೆಹಲಿ ದೌಡಾಯಿಸಲಿದ್ದಾರೆ. ವರಿಷ್ಠರನ್ನು ಕಂಡು ಸಂಪುಟ ವಿಸ್ತರಣೆಗೆ ಅನುಮತಿ ಪಡೆಯಲಿದ್ದಾರೆ. ಆದರೆ ಬಿಎಸ್‌ವೈ ಸಿದ್ದಪಡಿಸಿದ ಪಟ್ಟಿಗೆ ಈ ಬಾರಿ ಹೈಕಮಾಂಡ್ ಒಪ್ಪಿಗೆ ಸೂಚಿಸುತ್ತಾ ಎಂಬುವುದು ಮಾತ್ರ ಕುತೂಹಲ ಕೆರಳಿಸಿದೆ.
Vijaya Karnataka Web BS yediyurappa


ಶಿರಾ ಹಾಗೂ ರಾಜರಾಶ್ವರಿ ನಗರದಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಸಮೀಕ್ಷೆಗಳು ಅಭಿಪ್ರಾಯಪಟ್ಟಿವೆ. ಇನ್ನು ಎರಡು ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವನ್ನು ಸಿಎಂ ಬಿಎಸ್‌ ಯಡಿಯೂರಪ್ಪ ವ್ಯಕ್ತಪಡಿಸಿದ್ದರು. ಒಂದು ವೇಳೆ ಎರಡು ಕ್ಷೇತ್ರಗಳು ಬಿಜೆಪಿ ಪಾಲಾದರೆ ಬಿಎಸ್‌ವೈಗೆ ಮತ್ತಷ್ಟು ಬಲ ಸಿಕ್ಕಂತ್ತಾಗುತ್ತದೆ. ಇದೇ ಸಂದರ್ಭವನ್ನು ಬಳಸಿಕೊಂಡು ದೆಹಲಿಯಲ್ಲಿ ತಮ್ಮ ಕೈಮೇಲಾಗುವಂತೆ ನೋಡಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

ಸಿಎಂ ಬದಲಾವಣೆ : ಸಿದ್ದರಾಮಯ್ಯಗೆ ಮೋದಿ, ಶಾ ಫೋನ್ ಮಾಡಿ ಹೇಳಿದ್ರಾ? ಕೆ.ಎಸ್‌ ಈಶ್ವರಪ್ಪ ಪ್ರಶ್ನೆ

ಸಂಪುಟಕ್ಕೆ ಸೇರಲು ಡಜನ್ ಆಕಾಂಕ್ಷಿಗಳು

ಸಂಪುಟ ವಿಸ್ತರಣೆ ಗೊಂದಲ ಸಾಕಷ್ಟು ಸಮಯದಿಂದ ಮುಂದುವರಿದಿದೆ. ಆಕಾಂಕ್ಷಿಗಳು ಪಟ್ಟಿಯೂ ದೊಡ್ಡದಿದೆ. ಬಿಎಸ್‌ವೈ ನುಡಿದಂತೆ ನಡೆದುಕೊಳ್ಳುತ್ತಾರೆಂಬ ವಿಶ್ವಾಸ ಹೊಂದಿದ್ದ ಎಂಟಿಬಿ ನಾಗರಾಜ್ ಹಾಗೂ ಆರ್‌. ಶಂಕರ್‌, ಎಚ್‌. ವಿಶ್ವಾನಾಥ್ ಸಾಕಷ್ಟು ಸಮಯದಿಂದ ಕಾಯುತ್ತಿದ್ದಾರೆ. ಆದರೆ ಅವರಿಗೆ ಸಚಿವ ಸ್ಥಾನದ ಭಾಗ್ಯ ದೊರಕಿಬಂದಿಲ್ಲ. ಆದರೆ ಈ ಬಾರಿಯಾದರೂ ಸಂಪುಟಕ್ಕೆ ಸೇರ್ಪಡೆಯಾಗುವ ನಿರೀಕ್ಷೆಯಲ್ಲಿದ್ದಾರೆ. ಇನ್ನು ಆರ್‌ಆರ್‌ ನಗರದಲ್ಲಿ ಮುನಿರತ್ನ ಗೆದ್ದರೆ ಅವರಿಗೂ ಸಚಿವ ಸ್ಥಾನ ನೀಡಲೇ ಬೇಕಿದೆ. ಜೊತೆಗೆ ಮಸ್ಕಿಯಲ್ಲಿ ಪ್ರತಾಪ ಗೌಡ ಪಾಟೀಲ್‌ ಕೂಡಾ ಈ ನಿರೀಕ್ಷೆಯಲ್ಲಿದ್ದಾರೆ.

ಇದು ವಲಸಿಗರ ಪ್ರಯತ್ನವಾದರೆ ಮೂಲ ಆಕಾಂಕ್ಷಿಗಳ ಪಟ್ಟಿಯೂ ದೊಡ್ಡದಿದೆ. ರಾಷ್ಟ್ರ ಮಟ್ಟದಲ್ಲಿ ಪಕ್ಷದ ಜಾವಾಬ್ದಾರಿಯನ್ನು ಪಡೆದುಕೊಂಡು ಸಿ.ಟಿ ರವಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಒಂದು ಸ್ಥಾನ ಹೆಚ್ಚುವರಿಯಾಗಿ ಸಿಕ್ಕಂತಾಗಿದೆ. ಆದರೆ ಮೂಲ ಆಕಾಂಕ್ಷಿಗಳ ಸಂಖ್ಯೆ ದುಪ್ಪಟ್ಟಿದೆ. ಉಮೇಶ್ ಕತ್ತಿ, ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಸಾಕಷ್ಟು ಜನರು ಮಂತ್ರಿಯಾಗುವ ಕನಸಿನಲ್ಲಿದ್ದಾರೆ. ಆದರೆ ಸದ್ಯ ಖಾಲಿ ಇರುವುದು ಏಳು ಸ್ಥಾನಗಳು ಮಾತ್ರ.

ಬಿಹಾರ ಎಲೆಕ್ಷನ್ ಬಳಿಕ ಸಂಪುಟ ವಿಸ್ತರಣೆ ಮಾತುಕತೆ; ಆರೇಳು ಹಿರಿಯರ ತಲೆದಂಡ ಸಾಧ್ಯತೆ..!

ಸಂಪುಟ ಪುನಾರಚನೆ ಸಾಧ್ಯತೆ

ಆಕಾಂಕ್ಷಿಗಳ ಆಕ್ರೋಶ ತಣಿಸಲು ಸಂಪುಟ ವಿಸ್ತರಣೆಯ ಬದಲಾಗಿ ಸಂಪುಟ ಪುನಾರಚನೆ ಮಾಡುವ ಸಾಧ್ಯತೆಗಳೂ ಇವೆ ಎನ್ನಲಾಗುತ್ತಿದೆ. 7 ಸಚಿವರನ್ನು ಸಂಪುಟದಿಂದ ಕೈಬಿಟ್ಟು ಹೊಸಬರಿಗೆ ಅವಕಾಶ ನೀಡುವ ಸಾಧ್ಯತೆಯೂ ಇದೆ. ಆದರೆ ಇವೆಲ್ಲವೂ ದೆಹಲಿ ಭೇಟಿಯ ಬಳಿಕವಷ್ಟೇ ನಿರ್ಧಾರವಾಗಲಿದೆ. ಬೈಎಲೆಕ್ಷನ್ ಫಲಿತಾಂಶದ ಬಳಿಕ ದೆಹಲಿಯಲ್ಲಿ ಸಿಎಂ ಬಿಎಸ್‌ವೈ ವರಿಷ್ಠರ ಜೊತೆಗೆ ಚರ್ಚೆ ನಡೆಸಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಅವರ ಜೊತೆಗೆ ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ