ಆ್ಯಪ್ನಗರ

ಪಂಚಮಸಾಲಿ ಪ್ರಭಾವಿ ನಾಯಕ, ನೂತನ ಸಚಿವ ಮುರುಗೇಶ್‌ ನಿರಾಣಿ ಪರಿಚಯ

ಮೊದಲ ಬಾರಿಗೆ ಸುಲಭವಾಗಿ ಸಚಿವರಾಗಿದ್ದ ನಿರಾಣಿ, ಎರಡನೇ ಬಾರಿಗೆ ಮಾತ್ರ ಪ್ರಯಾಸ ಪಟ್ಟು ಕೊನೆಗೂ ಮಂತ್ರಿ ಪದವಿ ಗಿಟ್ಟಿಸಿದ್ದಾರೆ. 2018ರಲ್ಲಿ ಬೀಳಗಿಯಿಂದ ಗೆದ್ದು ಮೂರನೇ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಇವರು ಎರಡನೇ ಬಾರಿಗೆ ಸಚಿವರಾಗಿದ್ದಾರೆ.

Vijaya Karnataka 13 Jan 2021, 4:05 pm
ಬೀಳಗಿ ಶಾಸಕ ಮುರುಗೇಶ ನಿರಾಣಿ ಎರಡನೇ ಬಾರಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ವಿಶೇಷವೆಂದರೆ ಮೊದಲ ಬಾರಿಗೆ ಸುಲಭವಾಗಿ ಸಚಿವರಾಗಿದ್ದ ನಿರಾಣಿ, ಎರಡನೇ ಬಾರಿಗೆ ಮಾತ್ರ ಪ್ರಯಾಸ ಪಟ್ಟು ಕೊನೆಗೂ ಮಂತ್ರಿ ಪದವಿ ಗಿಟ್ಟಿಸಿದ್ದಾರೆ.
Vijaya Karnataka Web Murugesh Nirani


ಕಳೆದ ವರ್ಷ ದಾವಣಗೆರೆಯಲ್ಲಿ ನಡೆದ ಹರ ಜಾತ್ರೆಯಲ್ಲಿ ವಚನಾನಂದ ಸ್ವಾಮೀಜಿ ವೇದಿಕೆಯಲ್ಲೇ ನಿರಾಣಿಯವರಿಗೆ ಸಚಿವ ಸ್ಥಾನ ನೀಡುವಂತೆ ಯಡಿಯೂರಪ್ಪನವರನ್ನು ಒತ್ತಾಯಿಸಿದ್ದು, ಇದರಿಂದ ಸಿಟ್ಟಾದ ಬಿಎಸ್‌ವೈ ವೇದಿಕೆಯಲ್ಲೇ ಅಸಮಧಾನ ಹೊರಹಾಕಿದ ಘಟನೆ ನಡೆದಿತ್ತು. ಈ ಮಧ್ಯೆ ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ಕೂಡ ನಿರಾಣಿಯವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಸಿಎಂ ಮೇಲೆ ಒತ್ತಡ ಹೇರಿದ್ದರು.

ಈ ಎಲ್ಲಾ ಬೆಳವಣಿಗೆಗಳ ಬಳಿಕವೂ, ಪ್ರಬಲ ಪಂಚಮಸಾಲಿ ಸಮುದಾಯದ ನಿರಾಣಿ ಸಚಿವರಾಗಲು ವಿಫಲವಾಗಿದ್ದರು. ಆದರೆ ಈಗ ಅವರಿಗೆ ಸಚಿವರಾಗುವ ಯೋಗ ಬಂದಿದೆ.

ನೂತನ ಸಚಿವ, ದಾಖಲೆಯ 8 ಬಾರಿಯ ಶಾಸಕ ಉಮೇಶ್‌ ಕತ್ತಿ ಪರಿಚಯ

ವಿಶೇಷವೆಂದರೆ ಪಂಚಮಸಾಲಿ ಸಮಾಜದಿಂದ 2 ಎ ಮೀಸಲಾತಿಗೆ ಒತ್ತಾಯಿಸಿ ಬೆಂಗಳೂರಿಗೆ ಪಾದಯಾತ್ರೆ ಆರಂಭಿಸುವ ಸಂದರ್ಭದಲ್ಲೇ ನಿರಾಣಿಯವರಿಗೆ ಸಚಿವ ಸ್ಥಾನ ನೀಡಲಾಗಿದೆ. ಈ ಬೆಳವಣಿಗೆ ಭಾರಿ ಕುತೂಹಲ ಹುಟ್ಟಿಸಿದೆ.

ಬಿಇ ಸಿವಿಲ್, ಎಂಬಿಎ ಪದವೀಧರ

ಬಾಗಲಕೋಟೆಯ ಬೀಳಗಿ ತಾಲೂಕಿನ ಹಂಚಿನಾಳ ಮೂಲದವರಾದ 55 ವರ್ಷದ ಮುರುಗೇಶ್‌ ನಿರಾಣಿ ಮೂಲತಃ ಉದ್ಯಮಿ. ಸಕ್ಕರೆ, ಸಿಮೆಂಟ್ ಕಾರ್ಖಾನೆಗಳ ಮಾಲೀಕರಾಗಿದ್ದು, ಶಾಲೆ, ಸಹಕಾರಿ ಸಂಘಗಳನ್ನು ಸ್ಥಾಪಿಸಿದ್ದಾರೆ.

ನೂತನ ಸಚಿವ ‘ಸೈನಿಕ’ ಸಿ.ಪಿ. ಯೋಗೇಶ್ವರ್‌ ಪರಿಚಯ
ಬಿಇ ಸಿವಿಲ್ ಹಾಗೂ ಎಂಬಿಎ ಪದವೀಧರರಾಗಿರುವ ಇವರು 2004ರಲ್ಲಿ ಮೊದಲ ಬಾರಿಗೆ ಬೀಳಗಿ ಕ್ಷೇತ್ರದಿಂದ ಚುನಾವಣೆ ಎದುರಿಸಿ ಗೆಲುವು ಸಾಧಿಸಿದರು. 2008ರಲ್ಲಿ ಮತ್ತೆ ಆಯ್ಕೆಯಾದ ನಿರಾಣಿ, ಯಡಿಯೂರಪ್ಪ ಸರಕಾರದಲ್ಲಿ ಸಚಿವರಾದರು. 2008 ರಿಂದ 2014ರವರೆಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರಾಗಿ ಬಿಜೆಪಿ ಸರಕಾರದಲ್ಲಿ ಕಾರ್ಯನಿರ್ವಹಿಸಿದ್ದ ನಿರಾಣಿ, ಸಚಿವರಾಗಿದ್ದೂ 2014ರಲ್ಲಿ ಸೋಲು ಕಾಣಬೇಕಾಯಿತು.

2018ರಲ್ಲಿ ಮೂರನೇ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಇವರು ಇದೀಗ ಎರಡನೇ ಬಾರಿ ಸಚಿವರಾಗಿ ಯಡಿಯೂರಪ್ಪ ಸಂಪುಟಕ್ಕೆ ಎಂಟ್ರಿ ಪಡೆದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ